ಆ್ಯಪ್ನಗರ

ಶಿಕ್ಷಣ ಇಲಾಖೆ ಅನುದಾನ ಸದ್ಬಳಸಿ

ಶಿಕ್ಷಣ ಇಲಾಖೆಗೆ ಸರಕಾರ ಪ್ರತಿ ವರ್ಷ ಹಣವನ್ನು ವ್ಯಯಿಸುತ್ತಿದ್ದು, ಇಲಾಖೆ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

Vijaya Karnataka 24 Sep 2019, 5:00 am
ಶೃಂಗೇರಿ: ಶಿಕ್ಷಣ ಇಲಾಖೆಗೆ ಸರಕಾರ ಪ್ರತಿ ವರ್ಷ ಹಣವನ್ನು ವ್ಯಯಿಸುತ್ತಿದ್ದು, ಇಲಾಖೆ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
Vijaya Karnataka Web utilize the education grants
ಶಿಕ್ಷಣ ಇಲಾಖೆ ಅನುದಾನ ಸದ್ಬಳಸಿ


ಅಡ್ಡಗದ್ದೆ ಗ್ರಾಪಂ ನ ತೊರೆಹಡ್ಲುಸರಕಾರಿ ಪ್ರೌಢಶಾಲೆಯಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರ ಅಯೋಜಿಸಿದ್ದ ಜಿಲ್ಲಾಮಟ್ಟದ ಫ್ರೌಢ ಶಾಲೆಗಳ ಗುಂಪು ಆಟಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ನೀಡಿದಾಗ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿಭಾಗವಹಿಸಲು ಅವಕಾಶ ದೊರಕುತ್ತದೆ. ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರು ಮಕ್ಕಳ ಕ್ರಿಯಾಶೀಲತೆಯ ಬೆಳವಣಿಗೆಗೆ ಹಲವಾರು ಯೋಜನೆ ರೂಪಿಸಿದ್ದರು. ಮಕ್ಕಳ ಅಂತರ್ಗತದಲ್ಲಿಅಡಗಿರುವ ಕ್ರಿಯಾಶೀಲತೆಗೆ ಕ್ರೀಡೆ ಒಂದು ಅಪೂರ್ವ ವೇದಿಕೆ. ತೀರ್ಪುಗಾರರು ನ್ಯಾಯ ಸಮ್ಮತವಾಗಿ ತೀರ್ಪು ನೀಡಬೇಕು. ಕ್ರೀಡಾ ಮನೋಭಾವವಿದ್ದರೆ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಬಹುದು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮೊದಲಾದ ವ್ಯವಸ್ಥೆಗಳಲ್ಲಿಭ್ರಷ್ಟಾಚಾರವನ್ನು ಹೊರದೂಡಬೇಕು ಎಂದರು.

ಜಿಪಂ ಸದಸ್ಯೆ ಶಿಲ್ಪಾರವಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿಮಕ್ಕಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ತಾಕತ್ತನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

ತಾಪಂ ಅಧ್ಯಕ್ಷೆ ಜಯಶೀಲ ಕ್ರೀಡಾಜ್ಯೋತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿಜಿಪಂ ಸದಸ್ಯ ಬಿ.ಶಿವಶಂಕರ್‌, ತಾಪಂ ಉಪಾಧ್ಯಕ್ಷೆ ಚಂದ್ರಮತಿ ತಿಮ್ಮಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ ಪ್ರವೀಣ್‌, ಸದಸ್ಯರಾದ ರಾಮಕೃಷ್ಣ, ಪದ್ಮನಾಭ ಹೆಗ್ಡೆ, ಕೆ.ಎಸ್‌.ರಮೇಶ್‌, ಕೆ.ಎಲ್‌.ರೇಖಾ, ಕೆ.ಆರ್‌.ವೆಂಕಟೇಶ್‌, ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ಕೆ.ಡಿ.ಸುರೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ದಯಾವತಿ, ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಸಿದ್ದರಾಜು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ