ಆ್ಯಪ್ನಗರ

ಧರ್ಮಶ್ರದ್ಧೆಯಿಂದ ಬದುಕಿನ ಮೌಲ್ಯವೃದ್ಧಿ

ಅಂತರಂಗದ ಅರಿವಿಗೆ ಧರ್ಮ ಮಾರ್ಗ ದಾರಿದೀಪವಾಗಿದ್ದು ಆಧ್ಯಾತ್ಮಿಕ ಬದುಕಿನ ಮೌಲ್ಯಗಳಿಗೆ ಮಹತ್ವ ನೀಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವಂತೆ ಮಲೆಮಹದೇಶ್ವರ ಸ್ವಾಮಿ ಮೂಲಸ್ಥಾನ ಆರಾಧಕ ವಂಶದ ಚಿನ್ನಸ್ವಾಮಿ ಅಯ್ಯನ ಸರಗೂರು ಮಠ ಹೇಳಿದರು.

Vijaya Karnataka 8 Mar 2019, 5:00 am
ಬೀರೂರು: ಅಂತರಂಗದ ಅರಿವಿಗೆ ಧರ್ಮ ಮಾರ್ಗ ದಾರಿದೀಪವಾಗಿದ್ದು ಆಧ್ಯಾತ್ಮಿಕ ಬದುಕಿನ ಮೌಲ್ಯಗಳಿಗೆ ಮಹತ್ವ ನೀಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವಂತೆ ಮಲೆಮಹದೇಶ್ವರ ಸ್ವಾಮಿ ಮೂಲಸ್ಥಾನ ಆರಾಧಕ ವಂಶದ ಚಿನ್ನಸ್ವಾಮಿ ಅಯ್ಯನ ಸರಗೂರು ಮಠ ಹೇಳಿದರು.
Vijaya Karnataka Web CKM-7BRR2


ಪಟ್ಟಣದ ಮಾರ್ಗದಕ್ಯಾಂಪ್‌ ಬಡಾವಣೆಯಲ್ಲಿ ಜೊನ್ನೆ ಉಪ್ಪಾರ ಭಗೀರಥ ಸಮಾಜದ ವತಿುಂದ ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟ ಮಲೆಮಹದೇಶ್ವರ ಸ್ವಾಮಿ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ದೇವಾಲಯ ಪ್ರಾರಂಭೋತ್ಸವ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಹಿಂದುಳಿದವರ್ಗದ ದೊನ್ನೆ ಉಪ್ಪಾರ ಸಮಾಜ ತಮ್ಮ ಬದುಕಿನ ಕಾಯಕದ ಶ್ರಮದ ಗಳಿಕೆಯಲ್ಲಿ ಧರ್ಮಕಾರ್ಯಕ್ಕೆ ಸಹ ಕೈಜೋಡಿಸಿ ಉತ್ತಮ ದೇವಾಲಯ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ಧರ್ಮಜಾಗೃಯಿಂದ ಉತ್ತಮ ಬದುಕು ಕಂಡುಕೊಳ್ಳಲು ಸೇವಾ ಮನೋಭಾವನೆ ಮುಖ್ಯ ಎಂದರು.

ದೇವಾಲಯ ಸಮಿತಿಯ ಮುಖ್ಯಸ್ಥ ಹಾಗೂ ಧಾರ್ಮಿಕ ಚಿಂತಕ ಮಾರ್ಗದ ಮಲ್ಲಿಕಾರ್ಜುನಪ್ಪ ಮಾತನಾಡಿ, ಉತ್ತಮ ದೇವಾಲಯ ನಿರ್ಮಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಹಿರಿಯರು ತಲುಪಿಸಿದ್ದು, ಯುವಪೀಳಿಗೆ ಹಿರಿಯರ ಧಾರ್ಮಿಕ ಆಶಯಗಳನ್ನು ಇನ್ನಷ್ಟು ಪೋಸಿಕೊಂಡು ಬರುವಲ್ಲಿ ಹೆಚ್ಚಿನ ಗಮನಹರಿಸಬೇಕೆಂದು ತಿಳಿಸಿದರು.

ಜೊನ್ನೆ ಉಪ್ಪಾರ ಸಮಾಜದ ಹಿರಿಯ ನಾಗರಾಜ್‌ ಮಾತನಾಡಿ, ಭಕ್ತಾದಿಗಳ ಸಹಕಾರದಿಂದ ಇಂದು ದೇವಾಲಯ ನಿರ್ಮಾಣದ ಕನಸು ಸಾಕಾರಗೊಂಡಿದೆ. ದೇವಾಲಯದ ಪ್ರಗತಿಗೆ ಮುಂದೆಯೂ ಹೆಚ್ಚಿನ ಸಹಕಾರ ನೀಡಿ ಮಕ್ಕಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ಇರುವ ಮಹತ್ವವನ್ನು ತಿಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ನಾಲ್ಕು ದಿನಗಳ ಮಹದೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ವಿವಿಧ ಪೂಜಾಕಾರ್ಯ ಹಾಗೂ ಹೋಮಹವನಾದಿಗಳನ್ನು ನೆರವೇರಿಸಲಾಯಿತು. ಮಹದೇಶ್ವರ ಸ್ವಾಮಿಯ ಕಥಾ ಭಜನೆಯನ್ನು ನಡೆಸಲಾಯಿತು. ಸುಮಂಗಲಿಯರು ದೇವರ ಪ್ರತಿಷ್ಠಾಪನೆಯ ಪೂರ್ವಭಾಗಿಯಾಗಿ ಪೂರ್ಣಕುಂಭ ಕಳಸಗಳೊಂದಿಗೆ ಗಂಗೆಯನ್ನು ಮೆರವಣಿಗೆ ಮೂಲಕ ಹೊತ್ತುತಂದು ಸ್ವಾಮಿಗೆ ಅರ್ಪಿಸಿದರು. ಚಿಕ್ಕಪಟ್ಟಣಗೆರೆಯ ಗುರುಸ್ವಾಮಿ ಹಾಗೂ ತಂಡದ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯಿತು. ಗುರುಸಿದ್ದಪ್ಪ, ಕುಮಾರ್‌, ವಸಂತಕುಮಾರ್‌, ರಾಜಾ, ಗುಡ್ಡಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ