ಆ್ಯಪ್ನಗರ

ಪಶುವೈದ್ಯಕೀಯ ಪರೀಕ್ಷ ಕ ಬಂಧನ

ಗೊಬ್ಬರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೃತಮಹಲ್‌ ಕಾವಲು ಪ್ರದೇಶದ ಅಜ್ಜಂಪುರ ಸಹಾಯಕ ನಿರ್ದೇಶಕ ಡಾ.ಎಸ್‌.ಎಲ್‌.ರಾಜಶೇಖರಯ್ಯ ಅವರು ಭಾನುವಾರ ಯಗಟಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಪಶುವೈದ್ಯಕೀಯ ಪರೀಕ್ಷ ಕ ರವಿ ಅವರನ್ನು ಕರ್ತವ್ಯ ಲೋಪದ ಮೇಲೆ ಬಂಧಿಸಿದ್ದಾರೆ.

Vijaya Karnataka 5 Feb 2019, 5:00 am
ಕಡೂರು: ಗೊಬ್ಬರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೃತಮಹಲ್‌ ಕಾವಲು ಪ್ರದೇಶದ ಅಜ್ಜಂಪುರ ಸಹಾಯಕ ನಿರ್ದೇಶಕ ಡಾ.ಎಸ್‌.ಎಲ್‌.ರಾಜಶೇಖರಯ್ಯ ಅವರು ಭಾನುವಾರ ಯಗಟಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಪಶುವೈದ್ಯಕೀಯ ಪರೀಕ್ಷ ಕ ರವಿ ಅವರನ್ನು ಕರ್ತವ್ಯ ಲೋಪದ ಮೇಲೆ ಬಂಧಿಸಿದ್ದಾರೆ.
Vijaya Karnataka Web veterinary inspector arrested
ಪಶುವೈದ್ಯಕೀಯ ಪರೀಕ್ಷ ಕ ಬಂಧನ


ನಿರ್ದೇಶಕರು ತಮ್ಮ ದೂರಿನಲ್ಲಿ ಬಾಸೂರಿನ ತಮ್ಮಯ್ಯಪ್ಪ ಎಂಬುವವರ ಜಮೀನಿನಲ್ಲಿ ಕಾವಲು ಪ್ರದೇಶಕ್ಕೆ ಸೇರಿದ ಸುಮಾರು 1.25 ಲಕ್ಷ ಬೆಲೆಯ 60ಕ್ಕೂ ಹೆಚ್ಚು ಲೋಡ್‌ ಸಗಣಿ ಗೊಬ್ಬರ ಸಂಗ್ರಹವಾಗಿದೆ. ಇದನ್ನು ಪರಿಶೀಲಿಸಿದ್ದು, ಪಶುವೈದ್ಯಕೀಯ ಪರೀಕ್ಷ ಕರ ರವಿ ಅವರ ಕರ್ತವ್ಯಲೋಪ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಸದ್ಯ ಗೊಬ್ಬರವನ್ನು ಪೊಲೀಸರು ಪಾಳಿಯ ಮೇಲೆ ಕಾಯುತ್ತಿದ್ದು, ಮಹಜರು ಮತ್ತಿತರ ಪ್ರಕ್ರಿಯೆ ಮುಗಿದ ಮೇಲೆ ಗೊಬ್ಬರವನ್ನು ಕಾವಲು ಪ್ರದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಪ್ರಕರಣದ ತನಿಖೆ ಮುಂದುವರೆಯುತ್ತದೆ ಎಂದು ತನಿಖೆಯ ಹೊಣೆ ಹೊತ್ತಿರುವ ಬೀರೂರು ವೃತ್ತ ನಿರೀಕ್ಷ ಕ ಸತ್ಯನಾರಾಯಣಸ್ವಾಮಿ ಪತ್ರಿಕೆಗೆ ತಿಳಿಸಿದರು.

ಬಾಸೂರು ಕಾವಲು ಪ್ರದೇಶ ಕಳೆದ ಹಲವು ವರ್ಷದಿಂದ ಈ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಸಿದ್ದಿಯಾಗಿದ್ದು, ಇತ್ತೀಚೆಗೆ ಕಾವಲು ಪ್ರದೇಶದೊಳಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ನೂರಾರು ಎಕರೆ ಪ್ರದೇಶದ ಹುಲ್ಲುಗಾವಲು ನಾಶವಾಗಿ ಅಮೂಲ್ಯ ವನ್ಯಜೀವಿಗಳಿಗೆ ಸಂಕುಲಳಿಗೆ ತೊಂದರೆಯಾಗಿದ್ದು, ಪಶುವೈದ್ಯಕೀಯ ಪರೀಕ್ಷ ಕರಾಗಿದ್ದ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿ ಜತೆ ಮಟಮಟ ಮಧ್ಯಾಹ್ನವೇ ಗುಂಡು-ತುಂಡಿನ ಪಾರ್ಟಿ ಮಾಡಿ ವರ್ಗಾವಣೆಗೊಂಡಿದ್ದು, ಅಲ್ಲದೆ ಕಾವಲು ಪ್ರದೇಶದ ಕಾವಲುಗಾರರು ಪ್ರತಿವರ್ಷ ತಮಗೆ ಮಂಜೂರಾದ ಭೂಮಿಗಿಂತ ಹೆಚ್ಚಿನ ಭೂಮಿಯನ್ನು ಕೃಷಿ ಬಳಕೆಗೆ ಬಳಸಿಕೊಂಡು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಸದಾ ಸುದ್ದಿಯಲ್ಲಿರುವುದರಲ್ಲದೆ ಇದರಿಂದ ಸ್ಥಳೀಯ ಗ್ರಾಮಸ್ಥರು ಮತ್ತು ಕಾವಲುಗಾರರ ಮಧ್ಯೆ ಆಗಾಗ್ಗೆ ವೈಮನಸ್ಸು ಉಂಟಾಗಿ ಸುದ್ದಿಯಾಗುತ್ತಿರುವುದು ಹಳೆಯ ವಿಷಯವಾಗಿದೆ.

ಒಟ್ಟಿನಲ್ಲಿ ಬಾಸೂರು ಅಮೃತಮಹಲ್‌ ಕಾವಲು ಪ್ರದೇಶವನ್ನು ನೋಡಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಬದಲಾಯಿಸಿ ದಕ್ಷ ತೆಯಿಂದ ಕೆಲಸ ಮಾಡುವ ನೌಕರರನ್ನು ನೇಮಿಸುವ ಮೂಲಕ ಮೇಲಧಿಕಾರಿಗಳು ಕಾವಲು ಪ್ರದೇಶವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ