ಅಜ್ಜಂಪುರ : ಹಳೆ ದ್ವೇಷದ ಹಿನ್ನೆಲೆಯಲ್ಲಿ ತೆಂಗಿನ ಮರಗಳ ಬುಡಕ್ಕೆ ರಂದ್ರ ಕೊರೆದು ವಿಷ ಹಾಕಿರುವ ಪ್ರಕರಣ ನಡೆದಿದೆ.
ಶಿವನಿ ಹೋಬಳಿ ಚೀರನಹಳ್ಳಿ ಗ್ರಾಮದ ನಿವೃತ್ತ ಶಿಕ್ಷ ಕ ಕುಮಾರಪ್ಪ ಅವರಿಗೆ ಸೇರಿದ ಸುಮಾರು 14 ವರ್ಷದ ಫಲಬಿಡುತ್ತಿದ್ದ 13 ತೆಂಗಿನ ಮರಗಳು ಮೊದಲಿಗೆ ಹಳದಿ ಬಣ್ಣಕ್ಕೆ ತಿರುಗಿ, ಮಿಡಿಗಳು ಉದುರಿದವು. ನಂತರ ಗರಿಗಳು ಬೀಳತೊಡಗಿದವು. ಕ್ರಮೇಣ ತುಂಬುಗಾಯಿಗಳು ಉದುರುವುದಕ್ಕೆ ಶುರುಮಾಡಿದ್ದು, ಸುಳಿಗಳು ಒಣಗಿ ಮರಗಳು ಬರಡಾಗಿ ನಿಂತಿವೆ.
ಹಿನ್ನೆಲೆ:
ತೋಟದ ವಿಷಯಕ್ಕೆ ಸಂಬಂಧಿಸಿ ಸ್ಥಳೀಯ ಗ್ರಾಮದ ಕೆಲವರು ಕುಮಾರಪ್ಪ ಅವರಿಗೆ ಕ್ಷ ುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಕುಮಾರಪ್ಪ, ಅಜ್ಜಂಪುರ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಾದ ಮಲ್ಲೇಶಪ್ಪ , ಮಕ್ಕಳಾದ ರಘು, ಅಜ್ಜಯ್ಯ ಅವರ ವಿರುದ್ಧ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು.
ಪೊಲೀಸರಿಗೆ ದೂರು ನೀಡಿದ್ದರಿಂದ ಕುಪಿತಗೊಂಡ ಆರೋಪಿಗಳು, ಕುಮಾರಪ್ಪ ಅವರಿಗೆ ಸೇರಿದ ತೆಂಗಿನ ಮರಗಳ ಬುಡಕ್ಕೆ ರಂದ್ರ ಮಾಡಿ ವಿಷ ಸುರಿದಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ತರೀಕೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಕುಮಾರಪ್ಪ ದೂರು ನೀಡಿದ್ದರು. ತೋಟಗಾರಿಕೆ ಇಲಾಖೆ ಸಹಾಯಕ ಅವಿನಾಶ್ ಮತ್ತು ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಸಂಶೋಧಕರ ಸಲಹೆ ಮೇರೆಗೆ ಸಿಬ್ಬಂದಿ ಆಗಮಿಸಿ, ಮರಗಳ ಸ್ಯಾಂಪಲನ್ನು ತೆಗೆದು ಬೆಂಗಳೂರಿನ ಹೆಸರುಘಟ್ಟದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರೀಸರ್ಚಸ್ ವಿಜ್ಞಾನಿ ಡಾ. ಡೆಬಿ ಶೆರ್ಮಾ ಅವರಿಗೆ ನೀಡಿದ್ದರು. ಮಾದರಿಗಳನ್ನು ಪರೀಕ್ಷಿಸಿದಾಗ 13 ಮರಗಳಿಗೆ ರಂದ್ರ ಕೊರೆದು ವಿಷಕಾರಿ ಔಷಧ ಹಾಕಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತೆಂಗಿನಮರಗಳು ಜೀವಿತಾವಧಿಯಲ್ಲಿ ತಲಾ ಕನಿಷ್ಠ 1 ಲಕ್ಷ ರೂ. ಆದಾಯ ನೀಡುತ್ತವೆ. 13 ತೆಂಗಿನ ಮರಗಳ ಮಾರಣ ಹೋಮದಿಂದ ಸುಮಾರು 13 ಲಕ್ಷ ರೂ. ನಷ್ಟ ಆಗಿದೆ. ಸೂಕ್ತ ಪರಿಹಾರದ ಜತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕುಮಾರಪ್ಪ ಕೋರಿದ್ದಾರೆ.
ಶಿವನಿ ಹೋಬಳಿ ಚೀರನಹಳ್ಳಿ ಗ್ರಾಮದ ನಿವೃತ್ತ ಶಿಕ್ಷ ಕ ಕುಮಾರಪ್ಪ ಅವರಿಗೆ ಸೇರಿದ ಸುಮಾರು 14 ವರ್ಷದ ಫಲಬಿಡುತ್ತಿದ್ದ 13 ತೆಂಗಿನ ಮರಗಳು ಮೊದಲಿಗೆ ಹಳದಿ ಬಣ್ಣಕ್ಕೆ ತಿರುಗಿ, ಮಿಡಿಗಳು ಉದುರಿದವು. ನಂತರ ಗರಿಗಳು ಬೀಳತೊಡಗಿದವು. ಕ್ರಮೇಣ ತುಂಬುಗಾಯಿಗಳು ಉದುರುವುದಕ್ಕೆ ಶುರುಮಾಡಿದ್ದು, ಸುಳಿಗಳು ಒಣಗಿ ಮರಗಳು ಬರಡಾಗಿ ನಿಂತಿವೆ.
ಹಿನ್ನೆಲೆ:
ತೋಟದ ವಿಷಯಕ್ಕೆ ಸಂಬಂಧಿಸಿ ಸ್ಥಳೀಯ ಗ್ರಾಮದ ಕೆಲವರು ಕುಮಾರಪ್ಪ ಅವರಿಗೆ ಕ್ಷ ುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಕುಮಾರಪ್ಪ, ಅಜ್ಜಂಪುರ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಾದ ಮಲ್ಲೇಶಪ್ಪ , ಮಕ್ಕಳಾದ ರಘು, ಅಜ್ಜಯ್ಯ ಅವರ ವಿರುದ್ಧ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು.
ಪೊಲೀಸರಿಗೆ ದೂರು ನೀಡಿದ್ದರಿಂದ ಕುಪಿತಗೊಂಡ ಆರೋಪಿಗಳು, ಕುಮಾರಪ್ಪ ಅವರಿಗೆ ಸೇರಿದ ತೆಂಗಿನ ಮರಗಳ ಬುಡಕ್ಕೆ ರಂದ್ರ ಮಾಡಿ ವಿಷ ಸುರಿದಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ತರೀಕೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಕುಮಾರಪ್ಪ ದೂರು ನೀಡಿದ್ದರು. ತೋಟಗಾರಿಕೆ ಇಲಾಖೆ ಸಹಾಯಕ ಅವಿನಾಶ್ ಮತ್ತು ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಸಂಶೋಧಕರ ಸಲಹೆ ಮೇರೆಗೆ ಸಿಬ್ಬಂದಿ ಆಗಮಿಸಿ, ಮರಗಳ ಸ್ಯಾಂಪಲನ್ನು ತೆಗೆದು ಬೆಂಗಳೂರಿನ ಹೆಸರುಘಟ್ಟದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರೀಸರ್ಚಸ್ ವಿಜ್ಞಾನಿ ಡಾ. ಡೆಬಿ ಶೆರ್ಮಾ ಅವರಿಗೆ ನೀಡಿದ್ದರು. ಮಾದರಿಗಳನ್ನು ಪರೀಕ್ಷಿಸಿದಾಗ 13 ಮರಗಳಿಗೆ ರಂದ್ರ ಕೊರೆದು ವಿಷಕಾರಿ ಔಷಧ ಹಾಕಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತೆಂಗಿನಮರಗಳು ಜೀವಿತಾವಧಿಯಲ್ಲಿ ತಲಾ ಕನಿಷ್ಠ 1 ಲಕ್ಷ ರೂ. ಆದಾಯ ನೀಡುತ್ತವೆ. 13 ತೆಂಗಿನ ಮರಗಳ ಮಾರಣ ಹೋಮದಿಂದ ಸುಮಾರು 13 ಲಕ್ಷ ರೂ. ನಷ್ಟ ಆಗಿದೆ. ಸೂಕ್ತ ಪರಿಹಾರದ ಜತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕುಮಾರಪ್ಪ ಕೋರಿದ್ದಾರೆ.