ಆ್ಯಪ್ನಗರ

ಶೃಂಗೇರಿ: ವೇದ ವಿದ್ವಾನ್ ಶ್ರೀ ವಿನಾಯಕ ಉಡುಪ ದೈವಾದೀನ!

ವೇದ ವಿದ್ವಾನ್ ಶ್ರೀ ವಿನಾಯಕ ಉಡುಪ ರವರು ಜು.3ರ ಮುಂಜಾವಿನಲ್ಲಿ ದೈವಾದೀನರಾಗಿದ್ದಾರೆ. 94 ವರ್ಷದ ಇವರು ಶ್ರೀ ಶಾರದಾ ಪೀಠದ ಶ್ರಿ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠ ಶಾಲೆಯಲ್ಲಿ ಕೆ. ಕೃಷ್ಣ ಜೋಯಿಸ್‌, ಶಂಕರನಾರಾಯಣ ಅಡಿಗ ಹಾಗೂ ಸಾಮಕ ಗಣೇಶ್‌ ಶಾಸ್ತ್ರಿ ಅವರ ಶಿಷ್ಯರಾಗಿ ಋುಗ್ವೇದ, ಸಾಹಿತ್ಯ, ವೇದಾಂತಗಳಲ್ಲಿ ಅವರು ವಿದ್ವತ್‌ ಸಂಪಾದನೆ ಮಾಡಿದ್ದರು.

Vijaya Karnataka Web 3 Jul 2020, 9:46 am
ಶೃಂಗೇರಿ :ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆಸ್ಥಾನದ ವಿದ್ವಾಂಸರು, ವೇದ ವಿದ್ವಾನ್ ಶ್ರೀ ವಿನಾಯಕ ಉಡುಪ ರವರು ಜು.3ರ ಮುಂಜಾವಿನಲ್ಲಿ ದೈವಾದೀನರಾಗಿದ್ದಾರೆ. 94 ವರ್ಷದ ಇವರು ಶ್ರೀ ಶಾರದಾ ಪೀಠದ ಶ್ರಿ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠ ಶಾಲೆಯಲ್ಲಿ ಕೆ. ಕೃಷ್ಣ ಜೋಯಿಸ್‌, ಶಂಕರನಾರಾಯಣ ಅಡಿಗ ಹಾಗೂ ಸಾಮಕ ಗಣೇಶ್‌ ಶಾಸ್ತ್ರಿ ಅವರ ಶಿಷ್ಯರಾಗಿ ಋುಗ್ವೇದ, ಸಾಹಿತ್ಯ, ವೇದಾಂತಗಳಲ್ಲಿ ಅವರು ವಿದ್ವತ್‌ ಸಂಪಾದನೆ ಮಾಡಿದ್ದರು.
Vijaya Karnataka Web 0_WaTCWO


ನಂತರ ಇಲ್ಲಿಯ ಸಂಸ್ಕೃತ ಪಾಠ ಶಾಲೆಯಲ್ಲಿ ಅಧ್ಯಾಪಕರಾಗಿ ಸಮಾಜಕ್ಕೆ ಅನೇಕ ವಿದ್ವಾಂಸರುಗಳನ್ನು ನೀಡಿದವರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಾವಿರಕ್ಕೂ ಅಧಿಕ ವಿದ್ವಾಂಸರು ಸಂಶೋಧನಾ ಮಹಾ ಪ್ರಬಂಧಗಳನ್ನು ಮಂಡಿಸಿ ವಿದ್ಯಾವಾರಿಧಿ ಪ್ರಶಸ್ತಿ ಪಡೆದಿದ್ದಾರೆ. ಹಿಂದೆ ಶ್ರೀ ಮಠದಲ್ಲಿ ಪ್ರತಿದಿನ ಪುರಾಣ ಪ್ರವಚನ ನೀಡುತ್ತಿದ್ದರು. ಶ್ರೀ ಪೀಠದ ಜಗದ್ಗುರುಗಳಾದ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿ, ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಯವರ ಅನುಗ್ರಹಕ್ಕೆ ಪಾತ್ರರಾಗಿರುವ ವಿನಾಯಕ ಉಡುಪ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

2018ರಲ್ಲಿ ರಾಷ್ಠ್ರ ಪ್ರಶಸ್ತಿಗು ವಿನಾಯಕ ಉಡುಪರು ಭಾಜನರಾಗಿದ್ದರು. ವಿನಾಯಕ ಉಡುಪ ಅವರು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನವರು. ವಿನೇಶ್ವರ ಉಡುಪ ಹಾಗೂ ಶಿಂಗಾರಮ್ಮಅವರ ಪುತ್ರ. ಶೃಂಗೇರಿ ಮಠದಲ್ಲಿ 4 ಜಗದ್ಗುರುಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದವರು.
ದಾವಣಗೆರೆ: ವೆಬ್‍ ಪೋರ್ಟಲ್‍ನಲ್ಲಿ ಐಲ್ಐ, ಸಾರಿ ಪ್ರಕರಣ ಅಪ್ ಡೇಟ್ ಮಾಡದ 11 ಆಸ್ಪತ್ರೆಗಳು ಸೀಜ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ