ಆ್ಯಪ್ನಗರ

ವಿಜಯಕುಮಾರ್‌ ಜಿ.ಪಂ. ಉಪಾಧ್ಯಕ್ಷ ರಾಗುವ ಸಾಧ್ಯತೆ

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಗಿ ದೇವನೂರು ಕ್ಷೇತ್ರದ ಸದಸ್ಯ ವಿಜಯಕುಮಾರ್‌ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

Vijaya Karnataka 19 Aug 2019, 7:13 pm
ಸಖರಾಯಪಟ್ಟಣ : ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಗಿ ದೇವನೂರು ಕ್ಷೇತ್ರದ ಸದಸ್ಯ ವಿಜಯಕುಮಾರ್‌ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.
Vijaya Karnataka Web CKM-18ONKAR3


ಉಪಾಧ್ಯಕ್ಷ ರಾಗಿದ್ದ ಆನಂದಪ್ಪ ಅವರು ರಾಜಿನಾಮೆ ನೀಡಿರುವುದರಿಂದ ಸ್ಥಾನ ತೆರವಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದು ಅದರಲ್ಲಿ ವಿಜಯಕುಮಾರ್‌ ಅವರು ಹುದ್ದೆ ಅಲಂಕರಿಸಲಿದ್ದಾರೆ ಎಂದು ದೇವನೂರು ಮತ್ತು ಸಖರಾಯಪಟ್ಟಣ ಬಿಜೆಪಿ ಶಕ್ತಿ ಕೇಂದ್ರದ ಮುಖಂಡರು ಆಶಯ ವ್ಯಕ್ತಪಡಿಸಿದ್ದಾರೆ. ಆ.21ರಂದು ಚುನಾವಣೆ ನಡೆಯಲಿದ್ದು, ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಖರಾಯಪಟ್ಟಣ ಮತ್ತು ದೇವನೂರು ಭಾಗಕೆæ್ಕ ಬಹಳ ದಿನಗಳಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಿಕ್ಕಿರಲ್ಲಿಲ್ಲ. ಬಹಳ ಹಿಂದೆ ಈ ಭಾಗದ ಎನ್‌.ಎಸ್‌.ಚಂದ್ರಪ್ಪ ಉಪಾಧ್ಯಕ್ಷ ರಾಗಿದ್ದು ಹೊರತು ಉನ್ನತ ಹುದ್ದೆ ಒಲಿದಿರಲಿಲ್ಲ. ಈ ಬಾರಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ, ಉತ್ತಮ ಸಂಘಟಕ ಎನ್ನಿಸಿಕೊಂಡಿರುವ ವಿಜಯಕುಮಾರ್‌ ಉಪಾಧ್ಯಕ್ಷ ಹುದ್ದೆಗೇರಲಿದ್ದು, ಹೆಚ್ಚಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ