ಆ್ಯಪ್ನಗರ

ವಿದ್ಯಾರ್ಥಿ ನಿಲಯಕ್ಕೆ ಭೇಟಿ, ಪರಿಶೀಲನೆ

ಲಿಂಗದಹಳ್ಳಿ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಹೇಮಾವತಿ ಪುಟ್ಟನಾಯ್ಕ ಮತ್ತು ಗ್ರಾ.ಪಂ. ಅಧ್ಯಕ್ಷ ಎಲ್‌.ಎನ್‌.ಲಿಂಗರಾಜು ಅವರು ಗ್ರಾಮದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ವೀಕ್ಷಿಸಿದರು.

Vijaya Karnataka 7 Jan 2019, 5:00 am
ತರೀಕೆರೆ ಗ್ರಾಮಾಂತರ : ಲಿಂಗದಹಳ್ಳಿ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಹೇಮಾವತಿ ಪುಟ್ಟನಾಯ್ಕ ಮತ್ತು ಗ್ರಾ.ಪಂ. ಅಧ್ಯಕ್ಷ ಎಲ್‌.ಎನ್‌.ಲಿಂಗರಾಜು ಅವರು ಗ್ರಾಮದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ವೀಕ್ಷಿಸಿದರು.
Vijaya Karnataka Web CKM-6sid2


ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 24 ಮಕ್ಕಳಲ್ಲಿ 8 ಮಕ್ಕಳು ಮಾತ್ರ ಹಾಜರಿದ್ದರು. ಉಳಿದ ಮಕ್ಕಳು ಗೈರು ಹಾಜರಾದ ಬಗ್ಗೆ ಮತ್ತು ಊಟಕ್ಕೆ ಬಳಸುವ ತರಕಾರಿಗಳಲ್ಲಿ ಆಲೂಗಡ್ಡೆ ಪೂರ್ತಿ ಮೊಳಕೆ ಒಡೆದಿರುವುದು, ಕ್ಯಾರೆಟ್‌ ಸಂಪೂರ್ಣ ಹಾಳಾಗಿರುವ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಎಲ್‌.ಎನ್‌.ಲಿಂಗರಾಜು ಅಡುಗೆಯವನ್ನು ಪ್ರಶ್ನಿಸಿದರು. ಇನ್ನು ಮುಂದೆ ತಾಜಾ ತರಕಾರಿಗಳನ್ನು ಅಡುಗೆಗೆ ಉಪಯೋಗಿಸುವಂತೆ ಸೂಚಿಸಿದರು.

ವಿದ್ಯಾರ್ಥಿ ನಿಲಯವು ಶಾಲೆಯಿಂದ ದೂರದಲ್ಲಿರುವುದರಿಂದ ಮಕ್ಕಳು ಈ ವಿದ್ಯಾರ್ಥಿನಿಲಯಕ್ಕೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ಕೇವಲ 24 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಕೆಲವು ಮಕ್ಕಳು ಹಾಗಾಗ್ಗೆ ತಮ್ಮ ಊರಿಗೆ ಹೋಗುತ್ತಿರುತ್ತಾರೆ ಎಂದು ಅಡುಗೆಯವರು ಅಧ್ಯಕ್ಷ ರ ಗಮನಕ್ಕೆ ತಂದರು.

ಗ್ರಾ.ಪಂ. ಅಧ್ಯಕ್ಷ ಎಲ್‌.ಎನ್‌.ಲಿಂಗರಾಜು ಮಾತನಾಡಿ, ಸರಕಾರ ಇಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದರೂ ಮಕ್ಕಳ ಹಾಜರಾತಿ ಕಡಿಮೆ ಇದೆ. ಗ್ರಾಮದ ಮಧ್ಯದಲ್ಲಿರುವ ಬಿಸಿಎಂ ವಿದ್ಯಾರ್ಥಿನಿಲಯದ ಮಕ್ಕಳನ್ನು ಈ ವಿದ್ಯಾರ್ಥಿ ನಿಲಯಕ್ಕೆ ಸೇರ್ಪಡೆಗೊಳಿಸಿ ಬಿಸಿಎಂ ವಿದ್ಯಾರ್ಥಿ ನಿಲಯವನ್ನು ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಉಪಯೋಗಿಸುವಂತೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ತಾಲೂಕು ಪಂಚಾಯಿತಿ ಸದಸ್ಯೆ ಹೇಮಾವತಿ ಪುಟ್ಟಾನಾಯ್ಕ ಅವರು ಆಹಾರ ಧಾನ್ಯಗಳ ಗುಣಮಟ್ಟವನ್ನು ವೀಕ್ಷಿಸಿ, ಅಕ್ಕಿ ಹಾಗೂ ಬೇಳೆ ಕಾಳುಗಳನ್ನು ಸ್ವಚ್ಛಗೊಳಿಸಿ ಬಳಸುವಂತೆ ತಿಳಿಸಿದರು. ಮುಖಂಡರಾದ ಪುಟ್ಟನಾಯ್ಕ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ