ಕೆ.ಎಲ್.ಗೋಪಾಲಕೃಷ್ಣ
ಶೃಂಗೇರಿ : ರಾಜ್ಯದ ನಾನಾಕಡೆ ಬಿಸಿಲಿನ ಪ್ರಭಾವಕ್ಕೆ ನದಿ, ಕೆರೆಗಳಲ್ಲಿ ನೀರು ಕಡಿಮೆಯಾಗಿದ್ದರೂ, ಪಟ್ಟಣದಲ್ಲಿನ ತುಂಗಾ ನದಿಯಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ಇರುವಷ್ಟು ಮಟ್ಟದ ನೀರು ಹರಿಯುತ್ತಿದೆ.
ಧರ್ಮಸ್ಥಳ, ಕೊಲ್ಲೂರು, ಉಡುಪಿಯಲ್ಲಿ ನೀರಿನ ಕೊರತೆಯುಂಟಾಗಿದೆ. ಆದರೆ, ಇಲ್ಲಿನ ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದರೂ, ಸಾಮಾನ್ಯ ಮಟ್ಟದ ನೀರು ಹರಿಯುತ್ತಿದೆ. ತಾಲೂಕಿನಲ್ಲಿ ಈ ವರ್ಷ ಬೇಸಿಗೆಯಲ್ಲಿ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಕುಸಿತವಾಗಿದೆ. ತೋಟಗಾರಿಕಾ ಬೆಳೆಗೆ ಮೋಟಾರ್ ಮೂಲಕ ನೀರೆತ್ತುವ ಪ್ರಮಾಣ ಕಡಿಮೆಯಾಗಿರುವುದು, ನೀರಿನ ಹರಿವು ಸಾಮಾನ್ಯ ಮಟ್ಟದಲ್ಲಿರುವುದಕ್ಕೆ ಮತ್ತೊಂದು ಕಾರಣವಾಗಿದೆ.
ನದಿ ಕಲುಷಿತ: ತುಂಗೆಯಲ್ಲಿ ನೀರಿನ ಹರಿವು ಬೇಸಿಗೆಗೆ ತಕ್ಕಂತೆ ಸಾಮಾನ್ಯವಾಗಿದ್ದರೂ ನದಿಗೆ ಅಪಾರ ಪ್ರಮಾಣದ ತ್ಯಾಜ್ಯ ಸೇರ್ಪಡೆಯಾಗಿ ಕಲುಷಿತವಾಗಿದೆ. ಪಟ್ಟಣದ ಗಾಂಧೀ ಮೈದಾನದಲ್ಲಿ ಪ್ರವಾಸಿಗರು ಬಯಲು ಶೌಚಾಲಯದಿಂದ ಹಾಗೂ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುತ್ತಿರುವುದು, ಮಾಂಸದ ಅಂಗಡಿ ತ್ಯಾಜ್ಯ, ವಾಹನ ತೊಳೆದ ನೀರು ನೇರವಾಗಿ ನದಿಗೆ ಸೇರಿ ನದಿಯ ನೀರು ಕಲುಷಿತವಾಗುತ್ತಿದೆ.
ಪ್ರವಾಸಿಗರ ದಂಡು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ನೀರಿನ ಅಭಾವದಿಂದಾಗಿ ಧರ್ಮಸ್ಥಳ ಪ್ರವಾಸವನ್ನು ಮುಂದೂಡುವಂತೆ ವ್ಯಕ್ತವಾದ ಮನವಿ ಬಳಿಕ ಶ್ರೀ ಶಾರದಾ ಪೀಠಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ, ಚುನಾವಣೆ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಶೃಂಗೇರಿಗೆ ಸಾಲುಗಟ್ಟಿ ಪ್ರವಾಸಿಗರು ಬರುತ್ತಿದ್ದಾರೆ. ಶ್ರೀಮಠದ ಬಳಿ ಸಾಕಷ್ಟು ಪ್ರವಾಸಿಗರು ಕಂಡು ಬರುತ್ತಿದ್ದು, ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಸ್ಥಳ ಸದಾ ತುಂಬಿರುತ್ತದೆ.
ಅಕ್ಷ ರಭ್ಯಾಸ: ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಕ್ಷ ರಭ್ಯಾಸ ಮಾಡಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಶ್ರೀಮಠದ ಎದುರು ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನೂರಾರು ಮಕ್ಕಳಿಗೆ ಅಕ್ಷ ರಭ್ಯಾಸ ನಿರಂತರವಾಗಿ ನಡೆಯುತ್ತಿದೆ.
-------------
ಬೇಸಿಗೆಯ ಮಳೆ ಕೊರತೆಯ ನಡುವೆಯೂ ತುಂಗಾ ನದಿ ನೀರಿನ ಮಟ್ಟ ಸಾಮಾನ್ಯವಾಗಿದೆ. ಇದುವರೆಗೂ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ. ಆದರೆ, ನದಿಯ ನೀರನ್ನು ಕಲುಷಿತಗೊಳಿಸದಂತೆ ತಡೆಗಟ್ಟಬೇಕಾಗಿದೆ.
-ಉಮೇಶ್ ಪುದುವಾಳ್, ಶೃಂಗೇರಿ.
-------------
ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದ್ದರೂ ಶೃಂಗೇರಿಯಲ್ಲಿ ನದಿಯ ನೀರನ್ನು ನೋಡಿ ಸಂತೋಷವಾಗಿದೆ. ಮಠದ ಬಳಿ ಹರಿಯುವ ನೀರು ಕನ್ನಡಿಯಂತೆ ಸ್ವಚ್ಛವಾಗಿದ್ದು, ಮೀನುಗಳನ್ನು ನೋಡಲು ಖುಷಿಯಾಗುತ್ತದೆ. ನಮ್ಮ ಪ್ರವಾಸ ಉಡುಪಿ, ಧರ್ಮಸ್ಥಳಕ್ಕೆ ಮುಂದುವರಿಯುವ ಬದಲು, ಇಲ್ಲಿಂದ ಸಿರಿಮನೆ ಜಲಪಾತ ಹಾಗೂ ಹೊರನಾಡಿಗೆ ತೆರಳಲಿದ್ದೇವೆ.
-ಶೋಭಾ, ಬೆಂಗಳೂರು.
ಶೃಂಗೇರಿ : ರಾಜ್ಯದ ನಾನಾಕಡೆ ಬಿಸಿಲಿನ ಪ್ರಭಾವಕ್ಕೆ ನದಿ, ಕೆರೆಗಳಲ್ಲಿ ನೀರು ಕಡಿಮೆಯಾಗಿದ್ದರೂ, ಪಟ್ಟಣದಲ್ಲಿನ ತುಂಗಾ ನದಿಯಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ಇರುವಷ್ಟು ಮಟ್ಟದ ನೀರು ಹರಿಯುತ್ತಿದೆ.
ಧರ್ಮಸ್ಥಳ, ಕೊಲ್ಲೂರು, ಉಡುಪಿಯಲ್ಲಿ ನೀರಿನ ಕೊರತೆಯುಂಟಾಗಿದೆ. ಆದರೆ, ಇಲ್ಲಿನ ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದರೂ, ಸಾಮಾನ್ಯ ಮಟ್ಟದ ನೀರು ಹರಿಯುತ್ತಿದೆ. ತಾಲೂಕಿನಲ್ಲಿ ಈ ವರ್ಷ ಬೇಸಿಗೆಯಲ್ಲಿ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಕುಸಿತವಾಗಿದೆ. ತೋಟಗಾರಿಕಾ ಬೆಳೆಗೆ ಮೋಟಾರ್ ಮೂಲಕ ನೀರೆತ್ತುವ ಪ್ರಮಾಣ ಕಡಿಮೆಯಾಗಿರುವುದು, ನೀರಿನ ಹರಿವು ಸಾಮಾನ್ಯ ಮಟ್ಟದಲ್ಲಿರುವುದಕ್ಕೆ ಮತ್ತೊಂದು ಕಾರಣವಾಗಿದೆ.
ನದಿ ಕಲುಷಿತ: ತುಂಗೆಯಲ್ಲಿ ನೀರಿನ ಹರಿವು ಬೇಸಿಗೆಗೆ ತಕ್ಕಂತೆ ಸಾಮಾನ್ಯವಾಗಿದ್ದರೂ ನದಿಗೆ ಅಪಾರ ಪ್ರಮಾಣದ ತ್ಯಾಜ್ಯ ಸೇರ್ಪಡೆಯಾಗಿ ಕಲುಷಿತವಾಗಿದೆ. ಪಟ್ಟಣದ ಗಾಂಧೀ ಮೈದಾನದಲ್ಲಿ ಪ್ರವಾಸಿಗರು ಬಯಲು ಶೌಚಾಲಯದಿಂದ ಹಾಗೂ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುತ್ತಿರುವುದು, ಮಾಂಸದ ಅಂಗಡಿ ತ್ಯಾಜ್ಯ, ವಾಹನ ತೊಳೆದ ನೀರು ನೇರವಾಗಿ ನದಿಗೆ ಸೇರಿ ನದಿಯ ನೀರು ಕಲುಷಿತವಾಗುತ್ತಿದೆ.
ಪ್ರವಾಸಿಗರ ದಂಡು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ನೀರಿನ ಅಭಾವದಿಂದಾಗಿ ಧರ್ಮಸ್ಥಳ ಪ್ರವಾಸವನ್ನು ಮುಂದೂಡುವಂತೆ ವ್ಯಕ್ತವಾದ ಮನವಿ ಬಳಿಕ ಶ್ರೀ ಶಾರದಾ ಪೀಠಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ, ಚುನಾವಣೆ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಶೃಂಗೇರಿಗೆ ಸಾಲುಗಟ್ಟಿ ಪ್ರವಾಸಿಗರು ಬರುತ್ತಿದ್ದಾರೆ. ಶ್ರೀಮಠದ ಬಳಿ ಸಾಕಷ್ಟು ಪ್ರವಾಸಿಗರು ಕಂಡು ಬರುತ್ತಿದ್ದು, ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಸ್ಥಳ ಸದಾ ತುಂಬಿರುತ್ತದೆ.
ಅಕ್ಷ ರಭ್ಯಾಸ: ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಕ್ಷ ರಭ್ಯಾಸ ಮಾಡಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಶ್ರೀಮಠದ ಎದುರು ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನೂರಾರು ಮಕ್ಕಳಿಗೆ ಅಕ್ಷ ರಭ್ಯಾಸ ನಿರಂತರವಾಗಿ ನಡೆಯುತ್ತಿದೆ.
-------------
ಬೇಸಿಗೆಯ ಮಳೆ ಕೊರತೆಯ ನಡುವೆಯೂ ತುಂಗಾ ನದಿ ನೀರಿನ ಮಟ್ಟ ಸಾಮಾನ್ಯವಾಗಿದೆ. ಇದುವರೆಗೂ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ. ಆದರೆ, ನದಿಯ ನೀರನ್ನು ಕಲುಷಿತಗೊಳಿಸದಂತೆ ತಡೆಗಟ್ಟಬೇಕಾಗಿದೆ.
-ಉಮೇಶ್ ಪುದುವಾಳ್, ಶೃಂಗೇರಿ.
-------------
ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದ್ದರೂ ಶೃಂಗೇರಿಯಲ್ಲಿ ನದಿಯ ನೀರನ್ನು ನೋಡಿ ಸಂತೋಷವಾಗಿದೆ. ಮಠದ ಬಳಿ ಹರಿಯುವ ನೀರು ಕನ್ನಡಿಯಂತೆ ಸ್ವಚ್ಛವಾಗಿದ್ದು, ಮೀನುಗಳನ್ನು ನೋಡಲು ಖುಷಿಯಾಗುತ್ತದೆ. ನಮ್ಮ ಪ್ರವಾಸ ಉಡುಪಿ, ಧರ್ಮಸ್ಥಳಕ್ಕೆ ಮುಂದುವರಿಯುವ ಬದಲು, ಇಲ್ಲಿಂದ ಸಿರಿಮನೆ ಜಲಪಾತ ಹಾಗೂ ಹೊರನಾಡಿಗೆ ತೆರಳಲಿದ್ದೇವೆ.
-ಶೋಭಾ, ಬೆಂಗಳೂರು.