ಆ್ಯಪ್ನಗರ

ಭಾರತೀಯತೆ ಜಗತ್ತಿಗೆ ಸಾರಿದ ವಿವೇಕಾನಂದ

ವಿಶ್ವಮಟ್ಟದಲ್ಲಿ ಭಾರತೀಯ ಸಾಂಸ್ಕೃತಿಕ ಮಹತ್ವವನ್ನು ಎತ್ತಿಹಿಡಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಅಭಿನವ ರಾಮಾನಂದ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಹರಿಹರಪುರದ ರಾಮಪ್ರಸಾದ್‌ ಹೇಳಿದರು.

Vijaya Karnataka 19 Jan 2019, 5:00 am
ಶೃಂಗೇರಿ : ವಿಶ್ವಮಟ್ಟದಲ್ಲಿ ಭಾರತೀಯ ಸಾಂಸ್ಕೃತಿಕ ಮಹತ್ವವನ್ನು ಎತ್ತಿಹಿಡಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಅಭಿನವ ರಾಮಾನಂದ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಹರಿಹರಪುರದ ರಾಮಪ್ರಸಾದ್‌ ಹೇಳಿದರು.
Vijaya Karnataka Web vivekananda proclaimed to the world of indianism
ಭಾರತೀಯತೆ ಜಗತ್ತಿಗೆ ಸಾರಿದ ವಿವೇಕಾನಂದ


ಶ್ರೀಜೆಸಿಬಿಎಂ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆಧ್ಯಾತ್ಮಿಕ ಮತ್ತು ನೈತಿಕ ವೇದಿಕೆ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಮತ್ತು ಯುವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ನುಡಿಗಳು ಯುವಕರಿಗೆ ಸದಾ ಸ್ಫೂರ್ತಿದಾಯಕ ಹಾಗೂ ಮಾರ್ಗದರ್ಶಿ. ಯುವ ಶಕ್ತಿಯಿಂದಲೇ ದೇಶದ ಉನ್ನತಿ ಸಾಧ್ಯ ಎಂದು ಗಾಢವಾಗಿ ನಂಬಿದ್ದ ಅವರು, ಯುವಜನತೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ, ಬಲಿಷ್ಠ ಭಾರತ ನಿರ್ಮಿಸಬೇಕು ಎಂಬ ಆಶಯ ಹೊಂದಿದ್ದರು ಎಂದರು.

ತಾಯಿ ಭುವನೇಶ್ವರಿ ದೇವಿಯವರಿಂದ ಪುರಾಣ ಕಥೆಗಳನ್ನು ಕೇಳಿಕೊಂಡೇ ಬೆಳೆದ ನರೇಂದ್ರರು, ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾಗಿ ಅವರ ಶಿಷ್ಯತ್ವವನ್ನು ಪಡೆದು ಭಗವಂತನ ಮಹಿಮೆಯನ್ನು ಅರಿತರು. ದೊಡ್ಡವರು ತಪ್ಪು ಮಾಡಿದಾಗ ಚಿಕ್ಕವರು ತಿದ್ದದಿದ್ದರೆ ರಾಮಾಯಣವಾಗುತ್ತದೆ. ಚಿಕ್ಕವರು ತಪ್ಪ್ಪು ಮಾಡಿದಾಗ ಹಿರಿಯರು ತಿದ್ದದಿದ್ದರೆ ಅದು ಮಹಾಭಾರತವಾಗುತ್ತದೆ. ಇದು ಪುರಾಣಗಳು ಜಗತ್ತಿಗೆ ಸಾರಿದ ಮೌಲ್ಯಗಳು. ವೇದ, ಉಪನಿಷತ್ತು, ಪುರಾಣ- ಮಹಾಕಾವ್ಯಗಳ ಮಹತ್ವವನ್ನು ಜಗತ್ತಿಗೆ ತಿಳಿಹೇಳಿದ್ದಾರೆ ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಎಚ್‌.ಜಿ.ನಾಗರಾಜ ನಾಯಕ್‌ ಅಧ್ಯಕ್ಷ ತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ನೈತಿಕ ಆಧ್ಯಾತ್ಮಿಕ ವೇದಿಕೆ ಸಂಚಾಲಕ ಡಾ ಪ್ರಕಾಶ್‌, ಎನ್‌ಎಸ್‌ಎಸ್‌ ಅಧಿಕಾರಿಗಳಾದ ಎ.ಜಿ.ಪ್ರಶಾಂತ್‌, ಬಿ.ಡಿ.ಸಂತೋಷ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ