ಆ್ಯಪ್ನಗರ

ಕೊಪ್ಪ ಹಾಸ್ಟೆಲ್‌ಗೆ ಸಿಬ್ಬಂದಿ ಕೊರತೆ

ಬಾಳಗಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಪರಿಶಿಷ್ಟ ಜಾತಿ, ಪಂಗಡದ ಬಾಲಕರ ವಿದ್ಯಾರ್ಥಿ ನಿಲಯವು ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ. ತಾಲೂಕಿನ ಎಲ್ಲ ಸರಕಾರಿ ವಸತಿ ನಿಲಯದಂತೆ ಇಲ್ಲಿ ಸರಕಾರದ ಶಾಶ್ವತ ಸಿಬ್ಬಂದಿ ಇಲ್ಲ.

Vijaya Karnataka 8 Dec 2018, 5:00 am
ಕೊಪ್ಪ : ಬಾಳಗಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಪರಿಶಿಷ್ಟ ಜಾತಿ, ಪಂಗಡದ ಬಾಲಕರ ವಿದ್ಯಾರ್ಥಿ ನಿಲಯವು ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ. ತಾಲೂಕಿನ ಎಲ್ಲ ಸರಕಾರಿ ವಸತಿ ನಿಲಯದಂತೆ ಇಲ್ಲಿ ಸರಕಾರದ ಶಾಶ್ವತ ಸಿಬ್ಬಂದಿ ಇಲ್ಲ.
Vijaya Karnataka Web CKM-3KPH2


ಹರಿಹರಪುರದ ಸರಕಾರಿ ವಿದ್ಯಾರ್ಥಿ ವಸತಿ ನಿಲಯದ ವಾರ್ಡನ್‌ ಧರ್ಮೇಶ್‌ ಅವರನ್ನು ಇಲ್ಲಿಗೆ ನಿಯೋಜಿಸಲಾಗಿದೆ. ಉಳಿದಂತೆ ಇಬ್ಬರು ಅಡುಗೆಯವರು, ಒಬ್ಬ ಸಹಾಯಕರ, ಒಬ್ಬ ರಾತ್ರಿ ಕಾವಲುಗಾರನ ಹುದ್ದೆ ಖಾಲಿಯಿದೆ. ಪ್ರಸ್ತುತ ಖಾಲಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಈ ವಸತಿ ನಿಲಯದಲ್ಲಿ ತಾಲೂಕಿನ ಬಸರೀಕಟ್ಟೆ, ಹೇರೂರು ಭಾಗದಿಂದ ಬಂದು ದಾಖಲುಗೊಂಡಿರುವ 50 ವಿದ್ಯಾರ್ಥಿಗಳು ಇದ್ದಾರೆ.

ಹಾಸಿಗೆಯಿಲ್ಲ;
ವಸತಿ ನಿಲಯದ ವಿದ್ಯಾರ್ಥಿಗಳಿಗೆ ನಿದ್ರಿಸಲು ಸೂಕ್ತ ಹಾಸಿಗೆಯಿಲ್ಲ. ಅವರು ಕಬ್ಬಿಣದ ಮಂಚದ ಮೇಲೆ ಬಟ್ಟೆ ಹಾಸಿ ಮಲಗುತ್ತಿದ್ದಾರೆ. ಈಗ ಚಳಿಗಾಲವಿದ್ದು, ವಿಪರೀತ ಥಂಡಿ ಗಾಳಿ ಬೀಸುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಹಾಸಿಗೆಯಿಲ್ಲದ ಕಬ್ಬಿಣದ ಮಂಚದ ಮೇಲೆ ಕಷ್ಟಪಟ್ಟು ನಿದ್ರಿಸಬೇಕಾಗಿದೆ.

ವಿದ್ಯಾರ್ಥಿ ಸಮೂಹದಲ್ಲಿ ಬಹಳಷ್ಟು ಮಂದಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿಗೆ ತೆರಳುವವರಿದ್ದಾರೆ. ಅವರಿಗೆ ಸುಸಜ್ಜಿತವಾದ ಜಿಮ್‌ ವ್ಯವಸ್ಥೆ ಬೇಕೆಂಬ ಹಂಬಲವಿದೆ. ಜಿಮ್‌ ಇದ್ದಲ್ಲಿ ತಾವು ಅತಿ ಹೆಚ್ಚು ಪ್ರಮಾಣದಲ್ಲಿ ಕ್ರೀಡಾ ಸಾಧನೆ ತೋರಬಹುದಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕ್ರೀಡಾ ಸಾಮಗ್ರಿ ಕೊರತೆಯಿರುವುದೂ ತಮ್ಮ ಕ್ರೀಡಾ ಚಟುವಟಿಕೆಗೆ ಅಡ್ಡಿಯಾಗಿದೆ ಎಂದಿದ್ದಾರೆ.

-----------
ನಮಗೆ ಸುಸಜ್ಜಿತವಾದ ಜಿಮ್‌ ಬೇಕು. ನಮ್ಮಲ್ಲಿ ಪ್ರತಿಭೆಯಿದೆ. ಆದರೆ ಅವಕಾಶ ಸಿಗುತ್ತಿಲ್ಲ. ಜಿಮ್‌ ಇದ್ದಲ್ಲಿ ಇತರೆ ಕ್ರೀಡೆಗೂ ಸಹಕಾರ ನೀಡಿದಂತಾಗುತ್ತದೆ.

- ಬಾಲಕರು, ಸರಕಾರಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯ, ಬಾಳಗಡಿ, ಕೊಪ್ಪ.

-----------
ಜಿಮ್‌ ಸಲಕರಣೆಗಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮನವಿ ನೀಡಲಾಗಿದೆ. ಹಾಸಿಗೆ ಒದಗಿಸುವಂತೆ ಮೇಲಧಿಕಾರಿಗೆ ಮನವಿ ಮಾಡಿದ್ದು, ಸಮಸ್ಯೆ ಬಗೆಹರಿಯಲಿದೆ. ಸರಕಾರ ಶಾಶ್ವತ ಸಿಬ್ಬಂದಿ ನೀಡಿದಲ್ಲಿ ಇನ್ನು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಕ್ರೀಡಾ ಸಾಮಗ್ರಿಯನ್ನು ಸರಕಾರ 2 ವರ್ಷಕ್ಕೊಮ್ಮೆ ನೀಡುತ್ತದೆ. ಅದು ಮಕ್ಕಳಿಗೆ ಸಾಕಾಗುತ್ತಿಲ್ಲ.
-ವಿಜಯಕುಮಾರ್‌, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಕೊಪ್ಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ