ಆ್ಯಪ್ನಗರ

ನೀತಿ ಸಂಹಿತೆ ಹೆಸರಲ್ಲಿ ಮತದಾನದ ಫ್ಲೆಕ್ಸೂ ತೆರವು !

ಈಗಾಗಲೇ ಲೋಕ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಮತದಾನವನ್ನು ಕಡ್ಡಾಯವಾಗಿ ಎಲ್ಲರೂ ಮಾಡುವ ನಿಟ್ಟಿನಲ್ಲಿ ಸರಕಾರವೇ ಮತ ಜಾಗೃತಿಗಾಗಿ ನ್ನಿಲ್ಲದ ಕಸರತ್ತು ಮಾಡುತ್ತಿರುವುದು ಒಂದೆಡೆಯಾದರೆ, ನೀತಿ ಸಂಹಿತೆ ಹೆಸರಿನಲ್ಲಿ ಮತದಾನವನ್ನು ಜಾಗೃತಗೊಳಿಸುವ ಫ್ಲೆಕ್ಸ್‌ಗಳನ್ನೇ ಕಿತ್ತು ಹಾಕುವ ಮೂಲಕ ಪಟ್ಟಣ ಪಂಚಾಯಿತಿ ಕಾನೂನು ವಿರುದ್ಧವಾಗಿ ನಡೆದುಕೊಂಡಿದೆ.

Vijaya Karnataka 14 Mar 2019, 5:00 am
ಕೊಪ್ಪ : ಈಗಾಗಲೇ ಲೋಕ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಮತದಾನವನ್ನು ಕಡ್ಡಾಯವಾಗಿ ಎಲ್ಲರೂ ಮಾಡುವ ನಿಟ್ಟಿನಲ್ಲಿ ಸರಕಾರವೇ ಮತ ಜಾಗೃತಿಗಾಗಿ ನ್ನಿಲ್ಲದ ಕಸರತ್ತು ಮಾಡುತ್ತಿರುವುದು ಒಂದೆಡೆಯಾದರೆ, ನೀತಿ ಸಂಹಿತೆ ಹೆಸರಿನಲ್ಲಿ ಮತದಾನವನ್ನು ಜಾಗೃತಗೊಳಿಸುವ ಫ್ಲೆಕ್ಸ್‌ಗಳನ್ನೇ ಕಿತ್ತು ಹಾಕುವ ಮೂಲಕ ಪಟ್ಟಣ ಪಂಚಾಯಿತಿ ಕಾನೂನು ವಿರುದ್ಧವಾಗಿ ನಡೆದುಕೊಂಡಿದೆ.
Vijaya Karnataka Web CKM-13kph2


ಪಟ್ಟಣದ ಹೃದಯಾಭಾಗದ ವೃತ್ತದಲ್ಲಿದ್ದ ಮತದಾನದ ಪ್ರಕ್ರಿಯೆಯ ಬ್ರಾಂಡ್‌ ಅಂಬಾಸಿಡರ್‌ ರಾಹುಲ್‌ ದ್ರಾವಿಡ್‌ ಚಿತ್ರವಿರುವ ಬ್ಯಾನರ್‌ ಈಗ ಮಾಯವಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವ ಭರದಲ್ಲಿ ಪಟ್ಟಣ ಪಂಚಾಯಿತಿ, ಯಾವ ಜಾಹೀರಾತು ಫಲಕ, ಫ್ಲೆಕ್ಸ್‌ಗಳನ್ನು ತೆರವು ಮಾಡಬೇಕೆಂಬ ಕನಿಷ್ಟ ಜ್ಞಾನವವೂ ಇಲ್ಲದೇ ಈಎಡವಟ್ಟು ಮಾಡಿದೆ.

ಪಟ್ಟಣದ ಎಲ್ಲ ಕಡೆ ತೂಗುತ್ತಿದ್ದ ಬ್ಯಾನರ್‌ಗಳೆಲ್ಲ ನೀತಿ ಸಂಹಿತೆ ಜಾರಿಯಾದ ದಿನದಿಂದ ನಾಪತ್ತೆಯಾಗಿವೆ. ನೀತಿ ಸಂಹಿತೆ ಎಂದಾಕ್ಷ ಣ ಅಧಿಕಾರಿ ವರ್ಗ ಯಾವುದೆ ಹಿಂದು ಮುಂದು ನೋಡದೆ ಸಿಕ್ಕಿದ ಎಲ್ಲ ಬ್ಯಾನರ್‌ ತೆಗೆದು ಹಾಕಿದ್ದು ಜನರಿಗೆ ಅಚ್ಚರಿಯಾಗಿದೆ. ಪಟ್ಟಣದ ತಾಲೂಕು ಕಚೇರಿ ಹೊರತು ಪಡಿಸಿ ಮತ್ತೆಲ್ಲ ಕಡೆ ಬ್ಯಾನರ್‌ ತೆಗೆಯಲಾಗಿದೆ.ಕೆಲವು ದಿನ ಹಿಂದೆ ಬಸ್‌ ನಿಲ್ದಾಣ ಮತ್ತಿತರ ಪ್ರಮುಖ ಸ್ಥಳದಲ್ಲಿ ಸುತ್ತಲಿನ ಗ್ರಾಮಗಳಲ್ಲಿ ಆಯೋಜಿಸುವ ಜಾತ್ರಾ ಮಹೋತ್ಸವ, ಹರಕೆ ಯಕ್ಷ ಗಾನ ಬಯಲಾಟ ಬ್ಯಾನರ್‌ ಹಾಕಿದ್ದರು. ವಿಶೇಷವೆಂದರೆ ಕೆಲವು ದಿನದ ಹಿಂದೆ ಶಿಕ್ಷ ಕರೊಬ್ಬರು ನಿಧನ ಹೊಂದಿದ್ದರು.ಅವರ ಫೋಟೊ ಸಹಿತ ಶ್ರದ್ಧಾಂಜಲಿ ಫ್ಲೆಕ್ಸ್‌ ಹಾಕಲಾಗಿತ್ತು. ಅವು ಯಾವುದೇ ರಾಜಕೀಯ ಪಕ್ಷ ಕ್ಕೆ ಸೇರಿದ ಬ್ಯಾನರ್‌ ಆಗಿರಲಿಲ್ಲ, ಆದರೂ ಕಣ್ಣಿಗೆ ಕಾಣದಂತಾಗಿವೆ. ನೀತಿ ಸಂಹಿತೆ ಕುರಿತು ಕನಿಷ್ಠ ಅಧಿಕಾರಿಗಳಿಗೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ