ನೀರಿನ ಟ್ಯಾಂಕರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ತಾಲೂಕಿನ ಲಕ್ಯಾ ಗ್ರಾಮದಲ್ಲಿ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
Vijaya Karnataka 25 Jun 2019, 5:00 am
ಚಿಕ್ಕಮಗಳೂರು : ತಾಲೂಕಿನ ಲಕ್ಯಾ ಗ್ರಾಮದಲ್ಲಿ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕಡೂರು ತಾಲೂಕು ಎಸ್.ಬಿದರೆ ಗ್ರಾಮದ ಲತಾಮಣಿ (25) ಅವರ ಮೈದುನ ಅಶೋಕ್(30) ಮೃತಪಟ್ಟವರು. 2 ವರ್ಷದ ಮಗು ಅನ್ವಿತ್ಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ನಲ್ಲಿ ಚಿಕ್ಕಮಗಳೂರು ಕಡೆಗೆ ಆಗಮಿಸುತ್ತಿದ್ದ ಸಂದರ್ಭ ನೀರಿನ ಟ್ರ್ಯಾಕ್ಟರ್ಗೆ ಅಳವಡಿಸಿದ್ದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದವರು ನೆಲಕ್ಕೆ ಉರುಳಿದ್ದು, ಅವರ ಮೇಲೆ ಟ್ಯಾಂಕರ್ ಚಕ್ರ ಹತ್ತಿ ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಟ್ಯಾಂಕರ್ ಚಾಲಕನೇ ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾನೆ. ಲಕ್ಯಾ ಗ್ರಾಮದ ಪಾಂಡು ಎಂಬುವರಿಗೆ ಸೇರಿದ ನೀರಿನ ಟ್ಯಾಂಕರ್ ಇದಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಡೂರು ತಾಲೂಕು ಎಸ್.ಬಿದರೆ ಗ್ರಾಮದ ಲತಾಮಣಿ (25) ಅವರ ಮೈದುನ ಅಶೋಕ್(30) ಮೃತಪಟ್ಟವರು. 2 ವರ್ಷದ ಮಗು ಅನ್ವಿತ್ಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ನಲ್ಲಿ ಚಿಕ್ಕಮಗಳೂರು ಕಡೆಗೆ ಆಗಮಿಸುತ್ತಿದ್ದ ಸಂದರ್ಭ ನೀರಿನ ಟ್ರ್ಯಾಕ್ಟರ್ಗೆ ಅಳವಡಿಸಿದ್ದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದವರು ನೆಲಕ್ಕೆ ಉರುಳಿದ್ದು, ಅವರ ಮೇಲೆ ಟ್ಯಾಂಕರ್ ಚಕ್ರ ಹತ್ತಿ ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಟ್ಯಾಂಕರ್ ಚಾಲಕನೇ ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾನೆ. ಲಕ್ಯಾ ಗ್ರಾಮದ ಪಾಂಡು ಎಂಬುವರಿಗೆ ಸೇರಿದ ನೀರಿನ ಟ್ಯಾಂಕರ್ ಇದಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.