ಆ್ಯಪ್ನಗರ

ಚಾರ್ಮಾಡಿ ಘಾಟಿಯಲ್ಲಿ ಜಲವೈಭವ

ಮಲೆನಾಡಿನಲ್ಲಿ ಮಳೆಗಾಲ ಆರಂಭವಾದರೆ ಸಾಕು. ಎಲ್ಲೆಲ್ಲೂ ಜಲಪಾತಗಳ ವೈಭವದ ಚಿತ್ತಾರ ಅನಾವರಣಗೊಳ್ಳುತ್ತದೆ. ಮಳೆ ಹನಿಗಳ ಜತೆಗೆ ಜಲಪಾತಗಳ ವೈಭವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಹಸಿರುಟ್ಟ ಬೆಟ್ಟಗಳ ಗಿರಿಶೃಂಗಗಳ ಸಾಲು, ಧುಮ್ಮಿಕ್ಕಿ ಹರಿಯುವ ಕವಲು, ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳು ನೋಡುಗರ ಕಣ್ಣಿಗೆ ತಂಪೆರೆಯುತ್ತದೆ. ಪ್ರಕೃತಿ ಸಿರಿಯ ಕಣ್ತುಂಬ ಕಾಣಲು ಮೂಡಿಗೆರೆ ತಾಲೂಕಿನ ಗಡಿ ಭಾಗದಲ್ಲಿರುವ ಚಾರ್ಮಾಡಿ ಘಾಟಿಗೆ ಬರಬೇಕು.

Vijaya Karnataka 25 Jun 2018, 5:00 am
ಎ.ಆರ್‌.ಉದಯಶಂಕರ್‌
Vijaya Karnataka Web waterfall in charmedi ghati
ಚಾರ್ಮಾಡಿ ಘಾಟಿಯಲ್ಲಿ ಜಲವೈಭವ

ಮೂಡಿಗೆರೆ :
ಮಲೆನಾಡಿನಲ್ಲಿ ಮಳೆಗಾಲ ಆರಂಭವಾದರೆ ಸಾಕು. ಎಲ್ಲೆಲ್ಲೂ ಜಲಪಾತಗಳ ವೈಭವದ ಚಿತ್ತಾರ ಅನಾವರಣಗೊಳ್ಳುತ್ತದೆ. ಮಳೆ ಹನಿಗಳ ಜತೆಗೆ ಜಲಪಾತಗಳ ವೈಭವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಹಸಿರುಟ್ಟ ಬೆಟ್ಟಗಳ ಗಿರಿಶೃಂಗಗಳ ಸಾಲು, ಧುಮ್ಮಿಕ್ಕಿ ಹರಿಯುವ ಕವಲು, ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳು ನೋಡುಗರ ಕಣ್ಣಿಗೆ ತಂಪೆರೆಯುತ್ತದೆ. ಪ್ರಕೃತಿ ಸಿರಿಯ ಕಣ್ತುಂಬ ಕಾಣಲು ಮೂಡಿಗೆರೆ ತಾಲೂಕಿನ ಗಡಿ ಭಾಗದಲ್ಲಿರುವ ಚಾರ್ಮಾಡಿ ಘಾಟಿಗೆ ಬರಬೇಕು.
ಚಾರ್ಮಾಡಿ ಘಾಟ್‌ನ ರಸ್ತೆಯಲ್ಲಿ ಸಾಗುತ್ತಿದ್ದರೆ ಮೋಡಗಳ ಚಿತ್ತಾರ, ಮಳೆಹನಿಗಳ ಸ್ವಾಗತ, ಪ್ರಕೃತಿ ವಿಶಿಷ್ಟತೆಯೆ ನವರೂಪ ಕಾಣಬಹುದು. ಸುತ್ತಲಿರುವ ವನರಾಶಿಯ ನಡುವೆ ಹರಿಯುವ ಚಾರ್ಮಾಡಿ ಫಾಲ್ಸ್‌, ಜಲಧಾರೆಯ ಸೊಬಗು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಚಾರಣ ಮಾಡುವವರಿಗಂತೂ ಸೂಕ್ತ ಸ್ಥಳ. ಮಳೆಗಾಲ ಪ್ರಾರಂಭವಾದ ಸ್ವಲ್ಪ ದಿನಗಳಲ್ಲಿಯೇ ಕಂಡುಬರುವ ಕಾರಂಜಿಯಂತಹ ನೀರಿನ ತೊರೆಗಳು ಕೆಲವೊಮ್ಮೆ ಜಲಪಾತಗಳಾಗಿ ಧುಮ್ಮಿಕ್ಕುವುದನ್ನು ನೋಡುವುದು ಮನಸ್ಸಿಗೆ ಮುದನೀಡುತ್ತದೆ.
ಇಲ್ಲಿನ ಶಿಖರಗಳಿಂದ ಕೆಲವೆಡೆ ರಭಸವಾಗಿ ಚಿಮ್ಮುವ ಜಲಪಾತಗಳು ರಮಣೀಯ ನೋಟವನ್ನು ಸೃಷ್ಟಿಸಿದರೆ, ದಟ್ಟ ಕಾನನದ ನಡುವೆ ಕೆಲವೆಡೆಗಳಲ್ಲಿ ಜುಳುಜುಳು ನಿನಾದಗೈಯ್ಯುತ್ತವೆ. ಮುಗಿಲು ಚುಂಬಿಸುವ ಹಸಿರು ಬೆಟ್ಟದ ಮೇಲೆಲ್ಲಾ ರಾಶಿ ಬಿದ್ದ ಹಿಮ, ಅದರ ನಡುವೆ ಯಾವಾಗಲೋ ಒಮ್ಮೆ ತನ್ನ ಬಂಗಾರದ ಕಿರಣಗಳನ್ನು ಹೊರ ಸೂಸುವ ಸೂರ್ಯನ ಚಿತ್ತಾರ, ಬಂಡೆಗೆ ಜಿಗಿಯುವ ಜಲಧಾರೆಯ ಮಂಜುಳಗಾನ, ಮೈಕೊರೆಯುವ ಕುಳಿರ್ಗಾಳಿ, ಎದೆ ಝಲ್‌ ಎನಿಸುವ ಕಡಿದಾದ ರಸ್ತೆಯ ತಳದಲ್ಲಿ ಇರುವ ಪ್ರಪಾತ, ಪ್ರಶಾಂತವಾಗಿ ಹಸಿರು ಹೊದ್ದು ಮಲಗಿರುವ ದಟ್ಟ ಕಾನನ ಹೊಸ ಲೋಕವನ್ನು ತೆರೆದಿಟ್ಟಿರುತ್ತದೆ. ಚಾರ್ಮಾಡಿ ಘಾಟಿ ಮೂಡಿಗೆರೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು, ಇದು ರಾಷ್ಟ್ರೀಯ ಹೆದ್ದಾರಿಯಾಗಿದೆ. ಧರ್ಮಸ್ಥಳ, ಮಂಗಳೂರಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ