ಆ್ಯಪ್ನಗರ

ಡ್ರಗ್ಸ್‌ ಮಾಫಿಯಾ ಕೇಸ್‌ನಲ್ಲಿ ಹೋಂ ಸ್ಟೇಗಳ ಮೇಲೂ ಕಣ್ಣಿಟ್ಟಿದ್ದೇವೆ; ಪ್ರವೀಣ್ ಸೂದ್

ಡ್ರಗ್ಸ್‌ ಕಂಟ್ರೋಲ್ ಮಾಡೋದು ವಿಶೇಷ ವಿಂಗ್ ಮಾತ್ರವಲ್ಲ ಎಂದಿರುವ ಪ್ರವೀಣ್ ಸೂದ್, ಮಾದಕ ದ್ರವ್ಯದ ಕಂಟ್ರೋಲ್ ಕೆಲಸ ಪ್ರತಿಯೊಂದು ಪೊಲೀಸ್‌ ಠಾಣೆಯದ್ದು, ಯಾವ ಲಿಮಿಟ್‍ನಲ್ಲೂ ಡ್ರಗ್ಸ್ ಹಾವಳಿ ಇರಬಾರದು ಎಂದು ಹೇಳಿದರು.

Vijaya Karnataka Web 14 Sep 2020, 4:38 pm
ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ಪ್ರಕರಣ ಭಾರೀ ಸದ್ದು ಮಾಡ್ತಿದ್ದು, ಪೊಲೀಸರು ಕೂಡ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.
Vijaya Karnataka Web State police chief Praveen Sood, DG-IGP


ಪ್ರವಾಸಿ ತಾಣಗಳತ್ತಲೂ ಕರ್ನಾಟಕ ಪೊಲೀಸರು ಒಂದು ಕಣ್ಣಿಟ್ಟಿದ್ದು, ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣ ಆಗಿರುವುದರಿಂದ ಹೋಂ ಸ್ಟೇ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಅವರು ಸೋಮವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಾಹನ ನಿಲ್ಲಿಸದೆ ಮನವಿ ಸ್ವೀಕರಿಸದ ಶೋಭಾ ಕರಂದ್ಲಾಜೆ, ಕಳಸದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

ಪ್ರವಾಸಿ ತಾಣಗಳಲ್ಲಿರುವ ಹೋಂ ಸ್ಟೇಗಳ ಬಗ್ಗೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ ಎಂದಿರುವ ಪ್ರವೀಣ್ ಸೂದ್ ಅವರು, ಹೋಂ ಸ್ಟೇನಲ್ಲಿ ಮಾದಕ ದ್ರವ್ಯ ಇರುವ ಬಗ್ಗೆ ಕೇಸ್ ಬಂದರೆ ಅದಕ್ಕೆ ಮಾಲೀಕರೆ ಹೊಣೆಯಾಗುತ್ತಾರೆ. ಹೋಂ ಸ್ಟೇ ಮಾಲೀಕರು ಮಾಹಿತಿ ಕೊಟ್ರೆ ರಿವಾರ್ಡ್ ಕೊಡ್ತೀವಿ. ಪ್ರಕರಣ ಮುಚ್ಚಿ ಹಾಕಿದ್ರೆ ಹೋಂ ಸ್ಟೇ ಮಾಲಿಕರ ವಿರುದ್ಧವೂ ಕ್ರಮ ಕೈಗೊಳ್ಳುತ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

ದೇಶದ ಇತರೆ ಭಾಷಿಕರು ದಂಗೆ ಏಳುವ ಮುನ್ನ ಹಿಂದಿ ಹೇರಿಕೆ ನಿಲ್ಲಿಸಿ; ಕೇಂದ್ರಕ್ಕೆ ಎಚ್‌ಡಿಕೆ ಎಚ್ಚರಿಕೆ..!

ಇನ್ನು ಡ್ರಗ್ಸ್‌ ಕಂಟ್ರೋಲ್ ಮಾಡೋದು ವಿಶೇಷ ವಿಂಗ್ ಮಾತ್ರವಲ್ಲ ಎಂದಿರುವ ಪ್ರವೀಣ್ ಸೂದ್, ಮಾದಕ ದ್ರವ್ಯದ ಕಂಟ್ರೋಲ್ ಕೆಲಸ ಪ್ರತಿಯೊಂದು ಪೊಲೀಸ್‌ ಠಾಣೆಯದ್ದು, ಯಾವ ಲಿಮಿಟ್‍ನಲ್ಲೂ ಡ್ರಗ್ಸ್ ಹಾವಳಿ ಇರಬಾರದು ಎಂದು ಹೇಳಿದರು. ಇದೇ ವೇಳೆ ಕೊರೊನಾ ನಿಯಂತ್ರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಶರ ಕಾರ್ಯ ಶ್ಲಾಘನೀಯ ಎಂದ ಪೊಲೀಸ್ ಮಹಾ ನಿರ್ದೇಶಕರು, ಜಿಲ್ಲಾ ಪೊಲೀಸರಿಗೆ ಅಭಿನಂದನೆ ಹೇಳಲು ಚಿಕ್ಕಮಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ