ಆ್ಯಪ್ನಗರ

ದೇವರ ಮುಂದೆ ನಾವೆಲ್ಲರೂ ಸೇವಕರು

ದೇವರ ಮುಂದೆ ನಾವೆಲ್ಲರೂ ಸೇವಕರೇ ವಿನಾ ರಾಜರಲ್ಲ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.

Vijaya Karnataka 17 Jul 2019, 5:00 am
ಚಿಕ್ಕಮಗಳೂರು : ದೇವರ ಮುಂದೆ ನಾವೆಲ್ಲರೂ ಸೇವಕರೇ ವಿನಾ ರಾಜರಲ್ಲ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.
Vijaya Karnataka Web CKM-16SHIVUP5


ನಗರದ ಪೇಟೆ ಆಂಜನೇಯ ಬನಶಂಕರಿ ದೇವಾಲಯದಲ್ಲಿ ಮಂಗಳವಾರ ಬನಶಂಕರಿ ಮಹಿಳಾ ಸಂಘದಿಂದ ಗುರುಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಸಂಸಾರ-ಸಂಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಾವುದೇ ವೃತ್ತಿಯಲ್ಲಿ ನಮಗೆ ತಿಳಿದಿರುವ ಒಳ್ಳೆಯ ವಿಚಾರವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಮನಸ್ಸು ಬರಬೇಕು. ಇದೇ ಸಂಸ್ಕಾರ. ಹೃದಯದಲ್ಲಿ ಮಡುಗಟ್ಟಿರುವ ಭಾವನೆಗಳನ್ನು ಮತ್ತೊಬ್ಬರ ಬಳಿ ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ ಎಂದರು.

ದೇವರ ಕೃಪೆಯ ಜತೆಗೆ ನಮ್ಮ ಪರಿಶ್ರಮವೂ ಇದ್ದರೆ ಯಶಸ್ಸು ಲಭಿಸುತ್ತದೆ. ಪರಿಶ್ರಮಕ್ಕಾಗಿ ಒಂದೆಡೆ ಕುಳಿತು ಸಂಸ್ಕಾರ ಕಲಿಯಬೇಕು. ಬಿಸಿಲಿನಲ್ಲಿ ನೆರಳಾಗಬೇಕೇ ವಿನಾ ನೆರಳಿನಲ್ಲಿ ನೆರಳಾಗುವುದಲ್ಲ. ಅಮೂಲ್ಯವಾದ ಬದುಕನ್ನು ಚೆನ್ನಾಗಿಟ್ಟುಕೊಳ್ಳಬೇಕಾದರೆ ಸಂಸಾರ-ಸಂಸ್ಕಾರ ಎರಡೂ ಬೇಕು ಎಂದು ಹೇಳಿದರು.

ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಕೇಶವಮೂರ್ತಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಸಂಘದ ಮೂಲಕ ಸಮಾಜಮುಖಿ ಕಾರ‍್ಯದಲ್ಲಿ ತೊಡಗುವ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಮಹಿಳೆಯರು ಒಗ್ಗೂಡಿ ಹಲವು ಕಾರ‍್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಉಪಾಧ್ಯಕ್ಷೆ ರಾಧಾರಾಜಕುಮಾರ್‌, ಹೇಮಾರಂಗಪ್ಪ, ಕಾರ‍್ಯದರ್ಶಿ ಧನಲಕ್ಷ್ಮಿಗೋಕುಲ್‌, ಮಂಜುಳಪುಟ್ಟರಾಜು, ಖಜಾಂಚಿ ರತ್ನರವಿಕುಮಾರ್‌, ಶ್ಯಾಮಲಾರಾಜು, ನಿರ್ದೇಶಕರಾದ ನಾಗಶ್ರೀತ್ಯಾಗರಾಜ್‌, ಭಾಗ್ಯ, ಕಾವೇರಿ, ಶಾರದಮ್ಮ, ಭಾರತಿ, ಉಮಾ ಹಾಜರಿದ್ದರು.


ವಿಜ್ಞಾನಿ ಬುದ್ಧಿ, ತತ್ತ್ವಜ್ಞಾನಿಯ ಮನಸ್ಸು, ಕವಿ ಹೃದಯ ಅಚ್ಚುಕಟ್ಟಾಗಿರಬೇಕು. ಆ ದೃಷ್ಟಿಯಲ್ಲಿ ಸಂಸ್ಕಾರ ಪಡೆಯಬೇಕು. ಮನುಷ್ಯನಿಗೆ ನಡವಳಿಕೆ ಅಗತ್ಯ. ಒಂದು ದೀಪದಿಂದ ಮತ್ತೊಂದು ದೀಪ ಬೆಳಗಿಸುವುದೇ ಸಂಸ್ಕಾರ. ಒಬ್ಬರು ಸಂಸ್ಕಾರ ಪಡೆದು ಬೇರೆಯವರಿಗೂ ಅದನ್ನು ಧಾರೆ ಎರೆದರೆ ಅವರೂ ಸಂಸ್ಕಾರವಂತರಾಗುತ್ತಾರೆ. ಕಲಿತ ವಿದ್ಯೆಯನ್ನು ಹೃದಯಪೂರ್ವಕವಾಗಿ ಹಂಚಿಕೊಳ್ಳುವುದೇ ಗುರುಪರಂಪರೆಯ ಸಂಸ್ಕಾರ.

-ಹಿರೇಮಗಳೂರು ಕಣ್ಣನ್‌,ಕನ್ನಡ ಪೂಜಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ