ಆ್ಯಪ್ನಗರ

ಸಿಹಿ ಸಂಭ್ರಮ, ಹೂ ನೀಡಿ ಸ್ವಾಗತ

ಖಾಸಗಿ ಶಾಲೆಗಳು ಈಗಾಗಲೇ ಬಾಗಿಲು ತೆರೆದಿವೆ, ಆದರೆ, ಸರಕಾರಿ ಶಾಲೆಗಳ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ, ಅದು ಮಂಗಳವಾರ. ಶಾಲಾ ಆರಂಭೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಿದ್ಧತೆಯೂ ನಡೆದಿದೆ.

Vijaya Karnataka 27 May 2018, 5:00 am
ನರಸಿಂಹರಾಜಪುರ : ಖಾಸಗಿ ಶಾಲೆಗಳು ಈಗಾಗಲೇ ಬಾಗಿಲು ತೆರೆದಿವೆ, ಆದರೆ, ಸರಕಾರಿ ಶಾಲೆಗಳ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ, ಅದು ಮಂಗಳವಾರ. ಶಾಲಾ ಆರಂಭೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಿದ್ಧತೆಯೂ ನಡೆದಿದೆ.
Vijaya Karnataka Web welcome to the sweet celebration and flower
ಸಿಹಿ ಸಂಭ್ರಮ, ಹೂ ನೀಡಿ ಸ್ವಾಗತ


ಮೇ 29 ರಂದು ನಡೆಯುವ ಶಾಲಾ ಪ್ರಾರಂಭೋತ್ಸವದಲ್ಲಿ ಎಲ್ಲ ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಹೂ ನೀಡಿ ಸ್ವಾಗತಿಸಬೇಕು. ಮಕ್ಕಳು ಸಂತೋಷದಿಂದ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್‌ ಅವರು ಶುಕ್ರವಾರ ಶಿಕ್ಷಣಾ ಇಲಾಖೆಯ ಬಿ.ಆರ್‌.ಸಿ.ಸಭಾಂಗಣದಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸರಕಾರಿ ಶಾಲೆ ಮತ್ತು ಅನುದಾನಿತ ಶಾಲಾ ಮುಖ್ಯಶಿಕ್ಷಕಕರು, ಕ್ಲಸ್ಟರ್‌ ಗಳ ಸಂಪನ್ಮೂಲ ವ್ಯಕ್ತಿಗಳ ಪೂರ್ವಭಾವಿ ಸಭೆಯಲ್ಲಿ ಸೂಚಿಸಿದರು.

ಮೇ 28 ರಂದು ಎಲ್ಲಾ ಶಾಲೆಗಳು ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಮೇ 29 ರ ಪ್ರಾರಂಭೋತ್ಸವದ ದಿನ ಎಲ್ಲ ಶಾಲೆಗಳಲ್ಲೂ ತಳಿರು ತೋರಣದಿಂದ ಕಂಗೊಳಿಸುವಂತೆ ನೋಡಿಕೊಳ್ಳಬೇಕು.ಸಹ ಶಿಕ್ಷಕರು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಹಕಾರ ಪಡೆದುಕೊಳ್ಳಬೇಕು. ಬಿಸಿಯೂಟದಲ್ಲಿ ಸಿಹಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಮಕ್ಕಳಿಗೆ ಶೂ, ಸಾಕ್ಸ್ಸ್‌ ಕೊಳ್ಳಲು ಶಾಲೆಯ ಎಸ್‌ಡಿಎಂಸಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ, ಇಲಾಖೆಯ ನಿಯಮದಂತೆ ಉತ್ತಮ ಗುಣ ಮಟ್ಟವಿರುವ ಕಂಪನಿಗಳ ಶೂ, ಸಾಕ್ಸ್‌ ನೀಡುವಂತೆ ಅವರು ಸೂಚಿಸಿದರು.ಸಭೆಯಲ್ಲಿ ಕ್ಷೇತ್ರ ಸಮನ್ವಯ್ಕಾೃಕಾರಿ ಮಥಾಯ್‌, ತಾಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೋಗಣ್ಣಗೌಡ, ಶಿಕ್ಷಣ ಸಂಯೋಜಕ ಕೆ.ಎಸ್‌.ರಾಜಕುಮಾರ್‌,ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ ಇದ್ದರು.ಮಂಜುಳಾ ಪ್ರಾರ್ಥಿಸಿದರು. ಸೇವಾನಾಯಕ್‌ ಸ್ವಾಗತಿಸಿದರು.ರಾಜಾನಾಯಕ್‌ ನಿರೂಪಿಸಿದರು. ವಿಜಯಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ