ಆ್ಯಪ್ನಗರ

ಮೂಡಿಗೆರೆಯ ಬಿದಿರುತಳದಲ್ಲಿಕಾಡುಪ್ರಾಣಿಗಳ ಪೋಸು

ಕಾಡು ಪ್ರಾಣಿಗಳ ಪಾಲಿಗೆ ಚಿಕ್ಕಮಗಳೂರು ಜಿಲ್ಲೆಅತ್ಯಂತ ಸುರಕ್ಷಿತ ಎಂಬುದರಲ್ಲಿಅನುಮಾನವೇ ಇಲ್ಲ. ಅದರಲ್ಲೂಮಲೆನಾಡು ತಾಲೂಕುಗಳು ವನ್ಯಮೃಗಗಳ ನೆಲೆವೀಡಾಗಿ ಪರಿವರ್ತನೆಗೊಂಡಿದೆ.

Vijaya Karnataka 20 Oct 2019, 5:00 am
ಚಿಕ್ಕಮಗಳೂರು : ಕಾಡು ಪ್ರಾಣಿಗಳ ಪಾಲಿಗೆ ಚಿಕ್ಕಮಗಳೂರು ಜಿಲ್ಲೆಅತ್ಯಂತ ಸುರಕ್ಷಿತ ಎಂಬುದರಲ್ಲಿಅನುಮಾನವೇ ಇಲ್ಲ. ಅದರಲ್ಲೂಮಲೆನಾಡು ತಾಲೂಕುಗಳು ವನ್ಯಮೃಗಗಳ ನೆಲೆವೀಡಾಗಿ ಪರಿವರ್ತನೆಗೊಂಡಿದೆ.
Vijaya Karnataka Web 19ARAGAP5_35


ಭದ್ರಾ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನಗಳಿಗೆ ಪೂರಕವಾಗಿ ಕಾಫಿ ತೋಟಗಳು ಸುತ್ತುವರಿದಿರುವುದರಿಂದ ವನ್ಯಮೃಗಗಳು ಸುರಕ್ಷಿತ ಮತ್ತು ಸ್ವಚ್ಛಂದವಾಗಿ ಬದುಕು ಕಂಡುಕೊಂಡಿವೆ. ಪ್ರಾಣಹಾನಿ, ಬೆಳೆಹಾನಿ ಬಗ್ಗೆ ಪದೇ ಪದೆ ದೂರುಗಳು ಕೇಳಿಬಂದರೂ ಕಾಡುಪ್ರಾಣಿಗಳ ಸಂತತಿ ಹೆಚ್ಚಾಗಿರುವುದಕ್ಕೆ ಸಾಕಷ್ಟು ನಿದರ್ಶನಗಳು ಸಿಕ್ಕಿವೆ.

ಮೂಡಿಗೆರೆ ತಾಲೂಕಿನ ಬಿದಿರುತಳದಲ್ಲಿಒಂದೇ ಪರಿಸರದಲ್ಲಿವಿವಿಧ ಬಗೆಯ ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದು, ಸತೀಶ್‌ ಎಂಬುವವರು ಮೊಬೈಲ್‌ನಲ್ಲಿದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕಾಡುಪ್ರಾಣಿಗಳ ಸ್ವಚ್ಛ ಬದುಕಿಗೆ ಈ ಭಾಗದಲ್ಲಿಸಿಕ್ಕುವ ಆಹಾರ, ನೀರು, ದಟ್ಟ ಕಾಡು ಪೂರಕವಾಗಿದೆ.

ಜನ ಕಣ್ಣಿಗೆ ಬೀಳುತ್ತಿದ್ದಂತೆ ಕಾಡಾನೆಯೊಂದು ತನ್ನ ಕಾಲಿನಿಂದಲೇ ಮರಿಯನ್ನು ಬದಿಗೆ ತಳ್ಳಿ ರಕ್ಷಿಸುವ ದೃಶ್ಯ ಒಂದೆಡೆಯಾದರೆ, ಬೆಟ್ಟದಲ್ಲಿಸಾಗುವ ಕಾಡಾನೆಯ ಹಿಂಡು ಕೂಡ ಕ್ಯಾಮೆರಾದಲ್ಲಿಸೆರೆಯಾಗಿದೆ.

ಜನರನ್ನು ಕಂಡ ಕಾಟಿಗಳ ಹಿಂಡು ಕಾಲ್ಕೀಳುವುದು, ಅಲ್ಲೇ ಅನತಿ ದೂರದಲ್ಲಿಹಿಂಡು ಹಿಂಡಾಗಿ ಕುಳಿತ ನರಿಗಳ ಸನಿಹದಲ್ಲೇ ಸೊಂಪಾಗಿ ಬೆಳೆದ ಕಡವೆಯೊಂದು ಗದ್ದೆಯ ಕೋಗಿನಲ್ಲಿನೇರಾನೇರ ಪೋಸು ಕೊಟ್ಟಿದೆ. ಇಷ್ಟೆಲ್ಲಇದ್ದ ಮೇಲೆ ನಾವೇನು ಕಮ್ಮಿ ಎಂದು ಜಿಂಕೆಗಳೂ ಸಾಥ್‌ ನೀಡಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ