ಆ್ಯಪ್ನಗರ

ಮಲೆನಾಡನ್ನು ಬೆಚ್ಚಿ ಬೀಳಿಸಿದ ಕಾಡಾನೆ ಹಿಂಡು! ಆನೆಗಳ ಭಯಕ್ಕೆ ಕಾಫಿ ತೋಟದ ಕಡೆ ತೆರಳದ ಕಾರ್ಮಿಕರು

ಚಿಕ್ಕಮಗಳೂರು ತಾಲೂಕಿನಲ್ಲಿ ಮತ್ತೆ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು, ಮಲೆನಾಡಿಗರನ್ನು ಬೆಚ್ಚಿ ಬೀಳಿಸಿದೆ. ಹಾಂದಿ, ಸತ್ತಿಹಳ್ಳಿ, ಗುಲ್ಲನ್‌ಪೇಟೆ, ಹೊಸಳ್ಳಿ ಪೇಟೆ, ಯಲಗುಡಿಯ ಕಾಫಿ ತೋಟದಲ್ಲಿ 3 ಮರಿಗಳೊಂದಿಗೆ ಕಾಡಾನೆ ಹಿಂಡು ಕಾಣಿಸಿಕೊಂಡಿದೆ. ಕಾಡಾನೆ ದಾಳಿಯಿಂದ ಕಾಫಿ ತೋಟದ ಕಡೆ ಕಾರ್ಮಿಕರು ತೆರಳುತ್ತಿಲ್ಲ.

Edited byಅವಿನಾಶ ವಗರನಾಳ | Vijaya Karnataka 15 May 2022, 7:28 pm

ಹೈಲೈಟ್ಸ್‌:


  • ಚಿಕ್ಕಮಗಳೂರು ತಾಲೂಕಿನಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ ಹಿಂಡು
  • ಹಾಂದಿ, ಸತ್ತಿಹಳ್ಳಿ, ಗುಲ್ಲನ್‌ಪೇಟೆ, ಹೊಸಳ್ಳಿ ಪೇಟೆಯಲ್ಲಿ ಕಾಣಿಸಿದ ಕಾಡಾನೆ
  • ಕಾಡಾನೆ ದಾಳಿಯಿಂದ ಕಾಫಿ ತೋಟದ ಕಡೆ ತೆರಳದ ಕಾರ್ಮಿಕರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Wild Elephants
ಚಿಕ್ಕಮಗಳೂರು: ತಾಲೂಕಿನ ಕೆಳಗೂರು ಕಾಫಿ ತೋಟದಲ್ಲಿ ಕಳೆದ ವರ್ಷ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆಯನ್ನು ಒಂಟಿ ಸಲಗ ತುಳಿದು ಸಾಯಿಸಿದ್ದ ಕಹಿ ನೆನಪು ಮಾಸುವ ಮುನ್ನವೇ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷವಾಗಿದ್ದು, ಮಲೆನಾಡಿಗರನ್ನು ಬೆಚ್ಚಿ ಬೀಳಿಸುತ್ತಿದೆ.
ಆನೆ ಮತ್ತು ಮಾನವ ಸಂಘರ್ಷ ಜಿಲ್ಲೆಗೆ ಹೊಸದೇನಲ್ಲ. ಆದರೆ, ಇತ್ತೀಚೆಗೆ ಆಹಾರ ಅರಸಿ ನಾಡಿನತ್ತ ಹೆಚ್ಚು ವನ್ಯ ಜೀವಿಗಳು ಮುಖ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಬೇಸಿಗೆ ಸಂದರ್ಭ ಕಾಡಿನಲ್ಲಿ ಬಿದಿರು ಮೆಳೆಗಳಿಗೆ ಕಟ್ಟೆ ಬಂದು ನಾಶವಾಗಿರುವುದು ಮತ್ತಿತರೆ ಕಾರಣದಿಂದ ಆನೆಗಳು ಮಲೆನಾಡಿನಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡುವಂತಾಗಿದೆ.

ಕಳೆದ ಒಂದು ವಾರದಿಂದ ತಾಲೂಕಿನ ಹಾಂದಿ, ಸತ್ತಿಹಳ್ಳಿ, ಗುಲ್ಲನ್‌ಪೇಟೆ, ಹೊಸಳ್ಳಿ ಪೇಟೆ,ಯಲಗುಡಿಗೆ ಮತ್ತಿತರೆ ಕಾಫಿ ತೋಟಗಳಲ್ಲಿಆನೆ ಹಿಂಡು ಕಾಣಿಸಿಕೊಳ್ಳುತ್ತಿದ್ದು, ಇಂದು ಒಂದು ತೋಟದಲ್ಲಿದ್ದರೆ ನಾಳೆ ಐದಾರು ಕಿಮೀ ದೂರದಲ್ಲಿ ಪ್ರತ್ಯಕ್ಷವಾಗುತ್ತಿವೆ. ವಾರದ ಹಿಂದೆ ಹಗಲಿನಲ್ಲೇ ಹಾಂದಿ ರಸ್ತೆಯಲ್ಲಿ 3 ಮರಿಗಳೊಂದಿಗೆ ಕಾಡಾನೆ ಹಿಂಡು ಕಾಣಿಸಿಕೊಂಡು ಬಳಿಕ ಕಾಫಿ ತೋಟಕ್ಕೆ ಇಳಿದಿದ್ದವು. ಮರುದಿನ ಸತ್ತಿಹಳ್ಳಿ ಭಾಗದಲ್ಲಿ ಎಸ್ಟೇಟ್‌ ಮಾಲೀಕರ ಮನೆಯ ಗೇಟ್‌ ಮುರಿದು ಕಾಫಿ ತೋಟದಲ್ಲಿ ಬೀಡುಬಿಟ್ಟು ಬಗನಿ ಮರದ ಸೊಪ್ಪು, ಬಾಳೆಗಿಡ ತಿಂದು, ಕಾಫಿ ಗಿಡಗಳನ್ನು ತುಳಿದು ಬೇರೆ ಕಡೆ ಕಾಲ್ಕಿತ್ತಿದ್ದವು.

ಆಲ್ದೂರು ಸುತ್ತಮುತ್ತ ಭಾಗದಲ್ಲಿಆನೆಗಳ ಗುಂಪು ಕಾಣಿಸಿಕೊಂಡ ಹಿನ್ನೆಲೆಯಲ್ಲಿಆಲ್ದೂರು ಅರಣ್ಯ ಇಲಾಖೆ ಸಿಬ್ಬಂದಿ ಜೀಪಿನಲ್ಲಿ ಧ್ವನಿವರ್ಧಕ ಬಳಸಿ ಕಾಫಿ ತೋಟಗಳಿಗೆ ಕಾರ್ಮಿಕರು ಹೋಗದಂತೆ ಸುತ್ತಮುತ್ತ ಟಾಂಟಾಂ ಹೊಡೆಸಿದ್ದಾರೆ. ಇದರಿಂದ ಭಯಭೀತರಾದ ಕಾರ್ಮಿಕರು ಕಾಫಿ ತೋಟಕ್ಕೆ ಕಾಲಿಟ್ಟಿಲ್ಲ. ಶನಿವಾರ ಕಂಚೇನಳ್ಳಿ ಕಾಡಿಗೆ ಸಮೀಪವಿರುವ ಬಿಲ್ಲೇನನಳ್ಳಿ, ತಿರುಗುಣ ಭಾಗದಲ್ಲಿಆನೆಗಳ ಗುಂಪು ಕಾಣಿಸಿಕೊಂಡಿವೆ.
ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಕಾರ್ಮಿಕ ಬಲಿ : ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
ದಿಕ್ಕು ತೋಚದ ಆನೆಗಳು!
ಆನೆಗಳು ಬಂದಿವೆ ಎಚ್ಚರ ವಹಿಸಿ ಎಂದು ಅರಣ್ಯ ಇಲಾಖೆ ಡಂಗೂರ ಸಾರಿದ ಬೆನ್ನಲ್ಲೇ ಬಹಳ ಜಾಗರೂಕತೆಯಿಂದ ಹಳ್ಳಿಗರಿದ್ದು, ತಮ್ಮ ತೋಟ, ಜಮೀನುಗಳಲ್ಲಿಆನೆಗಳು ಕಾಣಿಸಿಕೊಂಡಾಗ ಪಟಾಕಿ, ಸಿಡಿಮದ್ದು ಸಿಡಿಸುತ್ತಿದ್ದಾರೆ. ಒಂದು ಹಳ್ಳಿಯ ಜನ ಪಟಾಕಿ ಸಿಡಿಸಿ ಒಂದು ದಿಕ್ಕಿಗೆ ಓಡಿಸಿದರೆ ಮತ್ತೊಂದು ಹಳ್ಳಿಯ ಜನ ಪಟಾಕಿ ಸಿಡಿಸಿ ಪುನಃ ವಿರುದ್ಧ ದಿಕ್ಕಿಗೆ ಬೆದರಿಸುತ್ತಿದ್ದು ಆನೆಗಳಿಗೆ ದಿಕ್ಕೇ ತೋಚದಂತಾಗಿದೆ.

ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆ ಆನೆಗಳು ಸಂಚರಿಸುತ್ತಿವೆ. ಅವುಗಳ ಚಲನವಲನಗಳ ಮೇಲೆ ಆಲ್ದೂರು ಮತ್ತು ಚಿಕ್ಕಮಗಳೂರು ಅರಣ್ಯ ಸಿಬ್ಬಂದಿ ಕಣ್ಗಾವಲಿಟ್ಟಿದ್ದಾರೆ. ಹಳ್ಳಿಗಳಲ್ಲಿ ಪಟಾಕಿ ಸಿಡಿಸಿ ಅವುಗಳಿಗೆ ಗಾಬರಿ ಹುಟ್ಟಿಸುತ್ತಿದ್ದಾರೆ. ಪಟಾಕಿ ಸಿಡಿಸಬಾರದು ಎಂದು ಹೇಳಿದ್ದೇವೆ. ಅವುಗಳನ್ನು ಬಂದ ದಾರಿಯಲ್ಲೇ ಬೇಲೂರು ಮಾರ್ಗವಾಗಿ ಸಕಲೇಶಪುರದ ಕಡೆ ಓಡಿಸುವ ಪ್ರಯತ್ನ ಮಾಡಲಾಗುತ್ತದೆ.
ಹರೀಶ್‌, ಆಲ್ದೂರು ಆರ್‌ಎಫ್‌ಒ

ಆನೆ ಮರಿಗೆ ರೇಡಿಯೋ ಕಾಲರ್‌!
ಗುಂಪಿನಲ್ಲಿಒಟ್ಟು 9 ಆನೆಗಳಿದ್ದು, ಅದರಲ್ಲಿ ಮೂರು ಮರಿಗಳಿವೆ. ಭುವನೇಶ್ವರಿ ಎಂಬ ಆನೆ ಮರಿಗೆ ರೇಡಿಯೋ ಕಾಲರ್‌ ಅಳವಡಿಸಿದ್ದು, ಇದರಿಂದ ಅರಣ್ಯ ಇಲಾಖೆಗೆ ಆನೆಗಳ ಚಲನ ವಲನ ಗುರುತಿಸಿ ಕಟ್ಟೆಚ್ಚರ ವಹಿಸಲು ಸುಲಭವಾಗಿದೆ. ಮರಿಗಳಿರುವ ಕಾರಣ ಸಿಡಿಮದ್ದು ಸಿಡಿಸಿದಲ್ಲಿಆನೆಗಳು ಬೆದರಿ ದಿಕ್ಕಾಪಾಲಾಗುತ್ತವೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಕೂಡ ಸಂಯಮದಿಂದ ವರ್ತಿಸಿ ಅವುಗಳನ್ನು ನಯವಾಗಿ ಕಾಡಿಗಟ್ಟಲು ಸೂಕ್ತ ಕಾರ್ಯಾಚರಣೆ ಕೈಗೊಂಡಿದೆ.

Viral Video: `ನನ್ನ ಬೆಡ್‌ನಿಂದ ಎದ್ದೇಳು': ಆಪ್ತನೊಂದಿಗೆ ಮುದ್ದು ಮರಿಯಾನೆಯ ಆಟ: ಖುಷಿ ನೀಡುವ ದೃಶ್ಯವಿದು
ಶನಿವಾರ ಬಿಲ್ಲೇನಹಳ್ಳಿ ಬಳಿ ಕಾಣಿಸಿಕೊಂಡಿದ್ದ ಕಾಡಾನೆ ಗುಂಪು ಭಾನುವಾರ ನಗರಕ್ಕೆ ಸಮೀಪವಿರುವ ಕದ್ರಿಮಿದ್ರಿಯ ಬಿದಿರು ಮಳೆಯಲ್ಲಿ ವಿಶ್ರಮಿಸುತ್ತಿವೆ. ಸಕಲೇಶಪುರದ ಕಡೆಯಿಂದ ಆನೆಗಳು ಬಂದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದು ಆಲ್ದೂರು ಮತ್ತು ಚಿಕ್ಕಮಗಳೂರು ಅರಣ್ಯ ಸಿಬ್ಬಂದಿ ಅವುಗಳ ಚಲನವಲನ ಗಮನಿಸುತ್ತಿದ್ದಾರೆ. ಕಳೆದ ವರ್ಷ ಕಾಡಾನೆ ಕೆಳಗೂರಿನಲ್ಲಿ ಕಾರ್ಮಿಕ ಮಹಿಳೆಯನ್ನು ತುಳಿದು ಸಾಯಿಸಿತ್ತು. ಅದರ ಹಿಂದಿನ ವರ್ಷ ಆನೆ ಕಾಡಿಗಟ್ಟಲು ಹಿಂಬಾಲಿಸುತ್ತಿದ್ದ ಅರಣ್ಯ ಇಲಾಖೆಯ ಗಾರ್ಡ್‌ ಒಬ್ಬರನ್ನು ಇದೇ ಕೆಳಗೂರಿನ ಸಮೀಪ ತುಳಿದು ಸಾಯಿಸಿದ್ದ ಕಹಿ ನೆನಪು ಹಸಿರಾಗಿರುವ ಕಾರಣ ಜನ ಜೀವ ಕೈಯಲ್ಲಿಡಿದು ದುಡಿಮೆಗೆ ಇಳಿಯುವಂತಾಗಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ