ಆ್ಯಪ್ನಗರ

ಉಡ ಬೇಟೆ ; ನಾಲ್ವರ ಬಂಧನ

ತಾಲೂಕಿನ ಬೆಟ್ಟಗೆರೆ ಮತ್ತು ತ್ರಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಡವನ್ನು ಕೊಂದು ಮಾಂಸ ಮತ್ತು ರಕ್ತ ಮಾರಾಟ ಮಾಡುವ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

Vijaya Karnataka 18 Nov 2018, 9:32 pm
ಮೂಡಿಗೆರೆ : ತಾಲೂಕಿನ ಬೆಟ್ಟಗೆರೆ ಮತ್ತು ತ್ರಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಡವನ್ನು ಕೊಂದು ಮಾಂಸ ಮತ್ತು ರಕ್ತ ಮಾರಾಟ ಮಾಡುವ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
Vijaya Karnataka Web wildfire four arrested
ಉಡ ಬೇಟೆ ; ನಾಲ್ವರ ಬಂಧನ


ಆರೋಪಿಗಳಾದ ಚಿದಾನಂದ (30), ಸುನಿಲ್‌ (31) ದಿನೇಶ್‌ (32) ರಾಮಣ್ಣ (45) ಬಂಧಿತರು. ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಡವನ್ನು ಕೊಂದು ಅದರ ರಕ್ತ ಮತ್ತು ಮಾಂಸ ಮಾರಾಟ ಮಾಡುತ್ತಿದ್ದರು.

ಶುಕ್ರವಾರ ಬೆಳಗ್ಗೆ ಬೇಟೆಗಾರರು ಉಡವನ್ನು ಹೊಡೆದು ಕೊಲ್ಲುವುದನ್ನು ನೋಡಿದ ದಾರಿಹೋಕರು ಅದರ ವೀಡಿಯೋ ತೆಗೆದು ಸಾಮಾಜಿಕ ಜಲತಾಣಕ್ಕೆ ಹರಿಬಿಟ್ಟಿದ್ದರು. ಅದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಆರೋಪಿಗಳ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ಸಮಯದಲ್ಲಿ ಸ್ನೇಹಿತರ ಹಾಗೂ ಪರಿಚಯಸ್ಥರ ಸಹಾಯದಿಂದ ಫೋನ್‌ ಮೂಲಕ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ