ಆ್ಯಪ್ನಗರ

ನ.19ರ ವರೆಗೆ ವನ್ಯಜೀವಿ ಸಪ್ತಾಹ, ಆನೆ ದಿನಾಚರಣೆ

ಅಕ್ಟೋಬರ್‌ 2ರಿಂದ ನವೆಂಬರ್‌ 19ರ ವರೆಗೆ ವನ್ಯಜೀವಿ ಸಪ್ತಾಹ ಮತ್ತು ಆನೆ ದಿನಾಚರಣೆ ನಡೆಸುತ್ತಿದ್ದು, ಈ ನಡುವೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಭದ್ರಾ ಹುಲಿ ಯೋಜನೆಯ ಅರಣ್ಯ ಸಂರಕ್ಷ ಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಎಸ್‌.ಧನಂಜಯ್‌ ಹೇಳಿದರು.

Vijaya Karnataka 2 Oct 2018, 5:00 am
ಚಿಕ್ಕಮಗಳೂರು : ಅಕ್ಟೋಬರ್‌ 2ರಿಂದ ನವೆಂಬರ್‌ 19ರ ವರೆಗೆ ವನ್ಯಜೀವಿ ಸಪ್ತಾಹ ಮತ್ತು ಆನೆ ದಿನಾಚರಣೆ ನಡೆಸುತ್ತಿದ್ದು, ಈ ನಡುವೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಭದ್ರಾ ಹುಲಿ ಯೋಜನೆಯ ಅರಣ್ಯ ಸಂರಕ್ಷ ಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಎಸ್‌.ಧನಂಜಯ್‌ ಹೇಳಿದರು.
Vijaya Karnataka Web CKM-1rudrap3


ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿ, ಚಿಕ್ಕಮಗಳೂರಿನಿಂದ ಹಿಂದಿನಿಂದಲೂ ವನ್ಯಜೀವಿ ಸಪ್ತಾಹವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. 64ನೇ ವನ್ಯಜೀವಿ ಸಪ್ತಾಹಕ್ಕೆ ಅ.2ರಂದು ಮುತ್ತೋಡಿ ಅಭಯಾರಣ್ಯದ ನೇಚರ್‌ ಕ್ಯಾಂಪಿನಲ್ಲಿ ಬೆಳಗ್ಗೆ 9ಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಎನ್‌.ದೇಸಾಯಿ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದರು.

ವನ್ಯಜೀವಿ ಸಪ್ತಾಹ ಮತ್ತು ಆನೆ ದಿನಾಚರಣೆ ಅಂಗವಾಗಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ.

ನ.3ರಂದು ಬೆಳಗ್ಗೆ 9ಗಂಟೆಗೆ ಮುತ್ತೋಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಬಿರ ಏರ್ಪಡಿಸಲಾಗಿದೆ. ನ. 7ರಂದು ಭದ್ರಾ ಹುಲಿ ಯೋಜನೆ, ಚಿಕ್ಕಮಗಳೂರು ಕಚೇರಿಯಲ್ಲಿ ವನ್ಯಜೀವಿಗಳ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ. ನ.12ರಂದು ಬೆಳಗ್ಗೆ 10ರಿಂದ 1ರ ವರೆಗೆ ಸ್ಕೌಟ್ಸ್‌ ಭವನದಲ್ಲಿ ಪರಿಸರ ಗೀತೆಗಳು ಹಾಗೂ ಮಧ್ಯಾಹ್ನ 2.30ರಿಂದ 5 ಗಂಟೆಯವರೆಗೆ ಕಿರುನಾಟಕ, ನೃತ್ಯ ಸ್ಪರ್ಧೆ ನಡೆಯಲಿದೆ ಎಂದರು.

ನ.13ರಂದು ನಗರದ ಸ್ಕೌಟ್ಸ್‌ ಭವನದಲ್ಲಿ ಬೆಳಗ್ಗೆ 10.30ರಿಂದ 1.30ರ ವರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಕವಿಗೋಷ್ಠಿ ಹಾಗೂ ಮಧ್ಯಾಹ್ನ 2.30ರಿಂದ 5ರ ವರೆಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ನ.14ರಂದು ಬೆಳಗ್ಗೆ 10.30ರಿಂದ 1 ಗಂಟೆಯವರೆಗೆ ಒಂದನೇ ತರಗತಿಯಿಂದ ಕಾಲೇಜ್‌ ಹಾಗೂ ವೃತ್ತಿಪರ ಕಲಾವಿದರವರೆಗೂ ಆಫೀಸರ್‌ ಕ್ಲಬ್‌ನಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಇದೆ. ಮಧ್ಯಾಹ್ನ 2.30ರಿಂದ 5 ಗಂಟೆಯವರೆಗೆ ಸ್ಕೌಟ್ಸ್‌ ಭವನದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

ನ.17ರಂದು ಬೆಳಗ್ಗೆ 7ರಿಂದ 4 ಗಂಟೆಯವರೆಗೆ ಸುಭಾಷ್‌ ಚಂದ್ರ ಬೋಸ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ, ಕಾಲೇಜ್‌ ವಿದ್ಯಾರ್ಥಿಗಳಿಗೆ ಸೈಕಲ್‌ ಜಾಥಾ ಹಾಗೂ ಸಂಜೆ 4 ಗಂಟೆಗೆ ಹುಲಿ ವೇಷ ಸ್ಪರ್ಧೆ, ನವೆಂಬರ್‌ 19ರಂದು ಮಧ್ಯಾಹ್ನ 1.30ರಿಂದ 3.30ರವರೆಗೆ ಕುವೆಂಪು ಕಲಾ ಮಂದಿರದಲ್ಲಿ ಕ್ಲೇ ಮಾಡೆಲಿಂಗ್‌ ಮತ್ತು ಅದೇ ಮಧ್ಯಾಹ್ನ 2.30ರಿಂದ 4ರ ವರೆಗೆ ತಾಲೂಕು ಕಚೇರಿಯಿಂದ ಕುವೆಂಪು ಕಲಾ ಮಂದಿರದವರೆಗೆ ವನ್ಯಜೀವಿ ಸಂರಕ್ಷ ಣೆ ನಡಿಗೆ ಹಾಗೂ ಸಂಜೆ 4ರಿಂದ 6 ಗಂಟೆಯವರೆಗೆ ಕುವೆಂಪು ಕಲಾಮಂದಿರದಲ್ಲಿ ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಎಸ್‌.ಧನಂಜಯ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ