ಆ್ಯಪ್ನಗರ

ಮೈತ್ರಿಕೂಟದ ಜನಪರ ಯೋಜನೆಯಿಂದ ಗೆಲುವು: ಧರ್ಮೇಗೌಡ

ಕೇಂದ್ರ ಸರಕಾರದ 5 ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಅವರು ಅತೀ ಹೆಚ್ಚು ವಿದೇಶ ಪ್ರವಾಸ ನಡೆಸಿದ್ದು, ಸುಳ್ಳನ್ನು ಹೇಳುತ್ತಾ ಆಕಾಶದಲ್ಲಿ ಹಾರಾಡಿದ್ದೇ ಅವರ ಬಹುದೊಡ್ಡ ಸಾಧನೆ ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.

Vijaya Karnataka 14 Apr 2019, 5:00 am
ಕಡೂರು : ಕೇಂದ್ರ ಸರಕಾರದ 5 ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಅವರು ಅತೀ ಹೆಚ್ಚು ವಿದೇಶ ಪ್ರವಾಸ ನಡೆಸಿದ್ದು, ಸುಳ್ಳನ್ನು ಹೇಳುತ್ತಾ ಆಕಾಶದಲ್ಲಿ ಹಾರಾಡಿದ್ದೇ ಅವರ ಬಹುದೊಡ್ಡ ಸಾಧನೆ ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.
Vijaya Karnataka Web CKM-13KDR1


ತಾಲೂಕಿನ ಲಕ್ಷ್ಮೀಪುರ, ದೊಡ್ಡಬುಕ್ಕಸಾಗರ, ಕೊರಚರಹಟ್ಟಿ, ಇಸ್ಲಾಂಪುರ, ಶಿವಪುರ, ಗೊಲ್ಲರಹಳ್ಳಿ, ಚಿಕ್ಕಾಲಘಟ್ಟ, ಮುಸ್ಲಾಪುರ, ಲಕ್ಕೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಶನಿವಾರ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಪರ ಮತಯಾಚಿಸಿದ ಅವರು, ವೈ.ರಂಗೇನಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಸಂವಿಧಾನವನ್ನೇ ಬುಡಮೇಲು ಮಾಡುವಂತಹ ಸರ್ವಾಧಿಕಾರ ಧೋರಣೆಯ ಆಡಳಿತದ ಮೂಲಕ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪ್ಪಚುಕ್ಕಿಯಾದವರು ಮೋದಿ ಎಂದು ಬಣ್ಣಿಸಿದರು.

ಎಮ್ಮೆದೊಡ್ಡಿ ಭಾಗದ ಮದಗದಕೆರೆ ಮತ್ತು ಅಯ್ಯನಕೆರೆಗಳಿಗೆ ನೀರು ಹರಿಸುವ ಶಾಶ್ವತ ಯೋಜನೆಗಳಾದ ಗೊಂದಿ ಅಣೆಕಟ್ಟು ಯೋಜನೆ ಹಾಗೂ ಹೆಬ್ಬೆ ಹಳ್ಳ ಯೋಜನೆ ಎರಡೂ ಯೋಜನೆಗಳು ತಾಲೂಕಿನ 34 ಕೆರೆಗಳಿಗೆ ನೀರುಣಿಸುವ ಕೆಲಸ ಮಾಡುತ್ತವೆ. ಈಗಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಹೆಬ್ಬೆ ಯೋಜನೆಗೆ 100 ಕೊಟಿ ಮಂಜೂರು ಮಾಡಿರುವುದು ಜನರ ಅರಿವಿಗೆ ಬಂದಿದೆ. ಈ ಎಲ್ಲಾ ಯೋಜನೆಗಳಿಗೆ ಒಂದು ಶಕ್ತಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ನಿಲ್ಲಲಿದೆ. ಅದಕ್ಕಾಗಿ ಪ್ರಜ್ವಲ್‌ರೇವಣ್ಣ ಅವರನ್ನು ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಕೋರಿದರು.

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆಗಳನ್ನು ನೀಡಿದ್ದು, ಅನ್ನಭಾಗ್ಯ, ಕ್ಷೀರಭಾಗ್ಯ, ಬಡವರಿಗೆ ಉಚಿತ ಅಕ್ಕಿ, ಹಾಲು, ಇಂದಿರಾಕ್ಯಾಂಟೀನ್‌ ಅವರ ಯೋಜನೆಗಳು. ಇವು ಮೈತ್ರಿಕೂಟದ ಚುನಾವಣೆಯ ಪ್ರಮುಖ ಮಾನದಂಡವಾಗಿ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದರು.

ಈ ಸಂದರ್ಭ ತಾ.ಪಂ. ಮಾಜಿ ಸದಸ್ಯ ಶಶಿಕುಮಾರ್‌, ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ, ಶಾಂತಕುಮಾರ್‌, ಛಾಯಣ್ಣ, ಸ್ನೇಹಜೀವಿ ಕೃಷ್ಣ, ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ