ಆ್ಯಪ್ನಗರ

ಕೊಟ್ಟಿಗೆಹಾರ ಸುತ್ತಮುತ್ತ ಗಾಳಿಮಳೆ

ಶನಿವಾರ ಕೊಟ್ಟಿಗೆಹಾರ, ಬಣಕಲ್‌, ಬಾಳೂರು, ಚಾರ್ಮಾಡಿ ಘಾಟ್‌ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಮರ ಹಾಗೂ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತು.

Vijaya Karnataka 7 Jul 2019, 5:00 am
ಕೊಟ್ಟಿಗೆಹಾರ : ಶನಿವಾರ ಕೊಟ್ಟಿಗೆಹಾರ, ಬಣಕಲ್‌, ಬಾಳೂರು, ಚಾರ್ಮಾಡಿ ಘಾಟ್‌ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಮರ ಹಾಗೂ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತು.
Vijaya Karnataka Web CKM-06KTG9


ಜಾವಳಿಯ ಮೂಲೆಮನೆ ಸಮೀಪ ಶನಿವಾರ ಮಧ್ಯಾಹ್ನ ಕೊಟ್ಟಿಗೆಹಾರ ಹೊರನಾಡು ರಸ್ತೆಗೆ ಬೃಹತಾಕಾರದ ಮರವೊಂದು ಉರುಳಿದೆ. ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಸ್ಥಳೀಯರು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಾಹನಗಳ ಮುಕ್ತ ಸಂಚಾರಕ್ಕೆ ರಸ್ತೆಯನ್ನು ತೆರವು ಮಾಡಿಕೊಟ್ಟರು.

ಕಾರ್ಯಚರಣೆಯಲ್ಲಿ ಜಾವಳಿ ಗ್ರಾ.ಪಂ ಸದಸ್ಯ ಪ್ರತೀಶ್‌, ರಾಜಸ್ವ ನಿರೀಕ್ಷ ಕ ಸಂತೋಷ್‌, ಗ್ರಾಮ ಲೆಕ್ಕಿಗ ರವಿಕುಮಾರ್‌, ಗ್ರಾ.ಪಂ ಸಿಬ್ಬಂದಿ ಆದರ್ಶ, ಗ್ರಾಮಸ್ಥರಾದ ಸುಧಾಕರ, ಸುಂದರೇಶ್‌, ವಿಜಯಬಾಳೂರು ಮುಂತಾದವರು ಇದ್ದರು.

ಚಾರ್ಮಾಡಿ ಘಾಟ್‌ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಶೌಚಾಲಯದ ಮೇಲೆ ಬೃಹತ್‌ ಮರಬಿದ್ದು ಶೌಚಾಲಯದ ಚಾವಣಿ ಜಖಂಗೊಂಡಿದೆ.

ಚಾರ್ಮಾಡಿ ಘಾಟ್‌ನ ಸೋಮನಕಾಡಿನ ಸಮೀಪ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದ್ದು ಚರಂಡಿ ಮುಚ್ಚಿಹೋಗಿರುವುದರಿಂದ ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆ ಕುಸಿಯುವ ಬೀತಿ ಎದುರಾಗಿದೆ. ಕೆಲದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಮಳೆ ಇಲ್ಲದೆ ಸೊರಗಿ ಹೋಗಿದ್ದ ಹೇಮಾವತಿ ನದಿ ಬಣಕಲ್‌ ಸಮೀಪ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರು ಫೋಟೊ ತೆಗೆಯುತ್ತಿದ್ದ ದೃಶ್ಯ ಕಂಡು ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ