ಆ್ಯಪ್ನಗರ

ಗುಂಡೇಟು ತಗುಲಿ ಕೂಲಿಕಾರ್ಮಿಕ ಸಾವು

ಬಣಕಲ್‌ ಠಾಣೆ ವ್ಯಾಪ್ತಿಯ ಬೆಳಗೋಡು ಬಿ.ಹೊಸಳ್ಳಿಯ ಕೂಲಿಕಾರ್ಮಿಕ ಗೋಪಾಲ(35) ಎಂಬುವವರು ಗುಂಡೇಟಿನಿಂದ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

Vijaya Karnataka 2 Feb 2019, 5:00 am
ವಿಕ ಸುದ್ದಿಲೋಕ ಬಣಕಲ್‌ (ಚಿಕ್ಕಮಗಳೂರು) : ಬಣಕಲ್‌ ಠಾಣೆ ವ್ಯಾಪ್ತಿಯ ಬೆಳಗೋಡು ಬಿ.ಹೊಸಳ್ಳಿಯ ಕೂಲಿಕಾರ್ಮಿಕ ಗೋಪಾಲ(35) ಎಂಬುವವರು ಗುಂಡೇಟಿನಿಂದ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
Vijaya Karnataka Web harsh_fire_17_04_2018


ಈ ಬಗ್ಗೆ ಮೃತ ಗೋಪಾಲ ಅವರ ಪತ್ನಿ ಗೀತಾ, ಬಣಕಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತಿಬೈಲ್‌ನ ಮಂಜುನಾಥ್‌ ಎಂಬುವವರು ಗುರುವಾರ ಮಧ್ಯಾಹ್ನ ಗೋಪಾಲ್‌ ಅವರನ್ನು ಕಾಫಿ ಕಣ ಕಾಯಲೆಂದು ಕರೆದುಕೊಂಡು ಹೋಗಿದ್ದರು. ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗುಂಡೆಟಿನಿಂದಾಗಿ ಗಾಯಗೊಂಡಿದ್ದ ಗೋಪಾಲ್‌ ಅವರು ಮೂಡಿಗೆರೆ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಜುನಾಥ್‌ ಅವರು ದುರುದ್ದೇಶದಿಂದ ಗೋಪಾಲ್‌ ಅವರನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ