ಆ್ಯಪ್ನಗರ

ಇಸ್ರೊದಿಂದ ವಿಶ್ವ ಬೆರಗಾಗುವ ಸಾಧನೆ: ವಿಜ್ಞಾನಿ ಹಿರಿಯಣ್ಣ

ಜಾಗೃತ ಮನಸ್ಸಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮಕ್ಕಳು ಸಾಧನೆಗೆ ಮುಂದಾಗಬೇಕು ಎಂದು ಇಸ್ರೊ ವಿಜ್ಞಾನಿ ಎಸ್‌.ಹಿರಿಯಣ್ಣ ಹೇಳಿದರು.

Vijaya Karnataka 27 Jun 2019, 5:00 am
ಬೀರೂರು : ಜಾಗೃತ ಮನಸ್ಸಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮಕ್ಕಳು ಸಾಧನೆಗೆ ಮುಂದಾಗಬೇಕು ಎಂದು ಇಸ್ರೊ ವಿಜ್ಞಾನಿ ಎಸ್‌.ಹಿರಿಯಣ್ಣ ಹೇಳಿದರು.
Vijaya Karnataka Web CKM-26BRR1


ಅವರು ಪಟ್ಟಣ ಸಮೀಪದ ದೋಗೆಹಳ್ಳಿ ವಾಗ್ದೇವಿ ಶಾಲೆ ಆವರಣದಲ್ಲಿ ಮಕ್ಕಳಿಗೆ ಕಲಿಕಾ ಮಾರ್ಗದರ್ಶನ ಹಾಗೂ ವೈಜ್ಞಾನಿಕ ಅನ್ವೇಷಣೆಗಳ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ಬುಧವಾರ ಮಾಹಿತಿ ನೀಡಿದರು.

ಎಪ್ಪತ್ತು ಎಂಬತ್ತರ ದಶಕದಲ್ಲಿ ಇಸ್ರೊ ಸಹ ಕಲಿಕಾ ಹಂತದ ಅಂಬೆಗಾಲಿನ ಶಿಶುವಾಗಿತ್ತು. ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆ ಮಾಡಿದೆ. ವೈಜ್ಞಾನಿಕ ಕ್ಷೇತ್ರದ ಮಹತ್ವವನ್ನು ಹೆಚ್ಚಿಸಿದೆ. ಗ್ರಾಮೀಣ ಮಕ್ಕಳು ಬುದ್ಧಿವಂತರಿದ್ದು ಅವರಲ್ಲಿನ ಪ್ರತಿಭೆಯನ್ನು ಹೆಕ್ಕಿತೆಗೆಯುವ, ಹೊಳಪು ನೀಡುವ ಕೆಲಸ ಆಗಬೇಕಿದೆ ಎಂದರು.

ಮಕ್ಕಳಿಗೆ ಗಣಿತ ಹಾಗೂ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಕಲಿಯಲು ಪ್ರೇರಕವಾಗುವಂತೆ ಹಾಸ್ಯಭರಿತ ವಿವರಣೆಗಳ ಮೂಲಕ ವಿವರಿಸಿದ ಹಿರಿಯಣ್ಣ, ನಿಖರ ಫಲಿತಾಂಶ ಪಡೆಯುವ ಪ್ರಯತ್ನ ನಡೆಸಿದರು. ರಾಕೇಟ್‌ ಲಾಂಚರ್‌, ಸೆಟಲೈಟ್‌ ಮೇಕಿಂಗ್‌ ಸೇರಿದಂತೆ ಹಲವು ಮಾಡಲ್‌ಗಳನ್ನು ವಿವರಗಳೊಂದಿಗೆ ಪ್ರದರ್ಶಿಸಿ ಮಕ್ಕಳಿಗೆ ಆಸಕ್ತಿ ಮೂಡುವಂತೆ ಮಾಡಿದರು. ಶಾಲಾ ಮಕ್ಕಳು ಆಸಕ್ತಿದಾಯಕ ವಿಷಯಗಳನ್ನು ಗ್ರಹಿಸುವ, ಉತ್ತರರಿಸುವ ಮೂಲಕ ಪುಳಕಿತಗೊಂಡರು.

ವಾಗ್ದೇವಿ ಶಾಲಾ ವ್ಯವಸ್ಥಾಪಕ, ನಿವೃತ್ತ ವಿಜ್ಞಾನಿ ಕೆ.ಹರೀಶ್‌ ಮಾತನಾಡಿ, ಮಕ್ಕಳ ಜ್ಞಾನ ವಿಕಾಸಕ್ಕೆ ಹೊಳಪು ನೀಡುವ ಕೆಲಸ ಆಗಬೇಕಿದೆ. ಬಾಲ್ಯದಲ್ಲಿ ಮಕ್ಕಳ ಮನಸ್ಸಿನ ಭಾವನೆಗಳಿಗೆ ಪೂರಕ ರೀತಿಯಲ್ಲಿ ಕಲಿಕಾ ಆಸಕ್ತಿ ಮೂಡಿಸುವ ಪ್ರಯತ್ನಗಳು ಹೆಚ್ಚಾಗಿ ನಡೆದರೆ ವಿಜ್ಞಾನ ಹಾಗೂ ಗಣಿತ ಸರಳ ಹಾಗೂ ಸುಲಲಿತವಾಗುತ್ತದೆ. ಯಾವುದೇ ಕೆಲಸವನ್ನು ಸಮರ್ಥವಾಗಿ ಮಾಡಲು ಪೂರ್ವಭಾವಿ ಯೋಜನೆ ಮುಖ್ಯ. ಮಕ್ಕಳು ತಮ್ಮ ಚಿಂತನೆಗಳನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಂಡು ಭವಿಷ್ಯದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕೆಂದರು.

ವಾಗ್ದೇವಿ ಶಾಲಾ ಸಮೂಹದ ಸಿಇಒ ಶಾಲೆಟ್‌, ಪ್ರಾಚಾರ್ಯ ಎಲ್‌.ವಿನೋದ್‌, ಆಡಳಿತಾಧಿಕಾರಿ ವಿನಯ್‌ ಭಟ್‌, ಶ್ರೀನಿಧಿ, ಪರಮೇಶ್ವರಪ್ಪ, ವಿಜಯಕುಮಾರ್‌, ಪ್ರಮೋದ್‌ ಇದ್ದರು.

ಜ್ಯೋತಿ ಅನಂತ್‌ ಪ್ರಾರ್ಥಿಸಿ, ಹರೀಶ್‌ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ