ಆ್ಯಪ್ನಗರ

ಭಗವಂತನಂತೆ ಅರಣ್ಯ ಸಂಪತ್ತನ್ನು ಪೂಜಿಸಿ

ಒಳ್ಳೆಯ ಮನಸ್ಸು ಇರುವ ಕಡೆ ಭಗವಂತ ನೆಲೆಸುತ್ತಾನೆ ಎಂದು ಸಿಂಹನಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷೀ್ಮಸೇನ ಭಟ್ಟಾರಕ ಸ್ವಾಮೀಜಿಗಳು ತಿಳಿಸಿದರು.

Vijaya Karnataka 26 Jun 2019, 5:00 am
ನರಸಿಂಹರಾಜಪುರ : ಒಳ್ಳೆಯ ಮನಸ್ಸು ಇರುವ ಕಡೆ ಭಗವಂತ ನೆಲೆಸುತ್ತಾನೆ ಎಂದು ಸಿಂಹನಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷೀ್ಮಸೇನ ಭಟ್ಟಾರಕ ಸ್ವಾಮೀಜಿಗಳು ತಿಳಿಸಿದರು.
Vijaya Karnataka Web CKM-24nrp1


ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ದೇವತೆಗಳ ಪ್ರಥಮ ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಾಚನ ನೀಡಿದರು.

ದೇವಸ್ಥಾನಗಳು ಮನುಷ್ಯರಿಗೆ ಪರಿವರ್ತನಾ ಕೇಂದ್ರಗಳಾಗಿವೆ. ಮನುಷ್ಯ ಕಷ್ಟ ಕಾಲದಲ್ಲಿ ದೇವರು ಪರಿಹಾರ ನೀಡುತ್ತಾನೆ ಎಂಬ ನಂಬಿಕೆಯಿಂದ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾನೆ. ಪ್ರತಿಯೊಬ್ಬ ಮನುಷ್ಯ ಭಗವಂತನ ಮೇಲೆ ತೋರುವ ಭಕ್ತಿಯನ್ನು ಅರಣ್ಯದ ಮೇಲೂ ತೋರಬೇಕು. ಅರಣ್ಯ ಸಂಪತ್ತು ಸಾಕಷ್ಟು ಇದ್ದರೆ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ. ಮನುಷ್ಯ ತಾನು ಬದುಕುವಂತೆ ಇನ್ನೊಂದು ಜೀವಿ ಬದುಕಲು ಕರುಣೆ ತೋರಬೇಕು. ಮರ, ಗಿಡಗಳಿಗೆ ಸಕರಾತ್ಮಕ ಶಕ್ತಿಯಿದೆ. ಅನೇಕ ಸಾಧಕರಿಗೆ ಜ್ಞಾನೋದಯವಾಗಿರುವುದು ಮರದ ಕೆಳಗೆ ಕುಳಿತಾಗಲೇ ಎಂದು ಅವರು ತಿಳಿಸಿದರು.

ನಂತರ ಎಲ್ಲಾ ಭಕ್ತರಿಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ಸಂಪಿಗೆ, ಹಲವು, ನೆಲ್ಲಿ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಿದರು.

ಈ ಸಂದರ್ಭ ಅಯ್ಯಪ್ಪಸ್ವಾಮಿ ಭಜನಾ ಸಂಘದ ಅಧ್ಯಕ್ಷ ಬಿ.ಕೆ.ಜಯಕರ್‌, ಕಾರ್ಯದರ್ಶಿ ಎಂ.ಮಹೇಶ್‌, ಸದಸ್ಯರಾದ ಎನ್‌.ಎಂ.ಕಾಂತರಾಜ್‌, ಎಂ.ಟಿ.ಕುಮಾರ್‌, ಎ.ಬಿ.ಚಂದ್ರಶೇಖರ್‌, ಕೆ.ನಾಗರಾಜ್‌, ತಾ.ಪಂ. ಸದಸ್ಯ ಸುಧಾಕರ ಆಚಾರ್‌, ಗ್ರಾ.ಪಂ. ಸದಸ್ಯ ಎ.ಎಲ್‌.ಮಹೇಶ್‌, ಉಪ ವಲಯ ಅರಣ್ಯಾಧಿಕಾರಿ ಮನೋಹರ್‌ ನಾಯಕ್‌ ಇದ್ದರು.

ಇದಕ್ಕೂ ಮೊದಲು ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಟಾಪನೆಗೊಂಡ ಪ್ರಥಮ ವರ್ಷದ ಅಂಗವಾಗಿ ಕಲಾಹೋಮ, ಕುಂಭಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ