ಆ್ಯಪ್ನಗರ

ಮೌಲ್ಯಯುತ ಜೀವನ ಯುವಪೀಳಿಗೆ ಆದರ್ಶವಾಗಲಿ

ಆಧುನಿಕತೆ ಹಾಗೂ ವೈಚಾರಿಕತೆ ನೆಪದಲ್ಲಿ ಯುವಪೀಳಿಗೆ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರ ಮೌಲ್ಯಗಳಿಂದ ದೂರಾಗುತ್ತಿದ್ದು, ಮಕ್ಕಳಲ್ಲಿ ಬಾಲ್ಯದಿಂದಲೇ ಸನಾತನ ಸಂಸ್ಕೃತಿ ಮೌಲ್ಯಗಳ ಪರಿಚಯ ಮಾಡಿಕೊಡಿ ಎಂದು ನಿವೃತ್ತ ಉಪನ್ಯಾಸಕ ಎಚ್‌.ಎಸ್‌.ಕೃಷ್ಣಮೂರ್ತಿ ಹೇಳಿದರು.

Vijaya Karnataka 14 Jul 2019, 5:00 am
ಬೀರೂರು: ಆಧುನಿಕತೆ ಹಾಗೂ ವೈಚಾರಿಕತೆ ನೆಪದಲ್ಲಿ ಯುವಪೀಳಿಗೆ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರ ಮೌಲ್ಯಗಳಿಂದ ದೂರಾಗುತ್ತಿದ್ದು, ಮಕ್ಕಳಲ್ಲಿ ಬಾಲ್ಯದಿಂದಲೇ ಸನಾತನ ಸಂಸ್ಕೃತಿ ಮೌಲ್ಯಗಳ ಪರಿಚಯ ಮಾಡಿಕೊಡಿ ಎಂದು ನಿವೃತ್ತ ಉಪನ್ಯಾಸಕ ಎಚ್‌.ಎಸ್‌.ಕೃಷ್ಣಮೂರ್ತಿ ಹೇಳಿದರು.
Vijaya Karnataka Web CKM-12BRR3


ದೇವಾಲಯ ಆವರಣದಲ್ಲಿ ಬುಧವಾರ ಯದುಗಿರಿಯಮ್ಮಾಳ್‌ ಮತ್ತು ಅರ್ಚಕ ಶೇಷಾಚಾರ್ಯ ಶೈಕ್ಷ ಣಿಕ ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಹಿರಿಯ ಅರ್ಚಕ ಶ್ರೀ ನಿವಾಸಮೂರ್ತಿ ದಂಪತಿಗಳ ಭೀಮರಥ ಶಾಂತಿ ಕಾರ್ಯಕ್ರಮದಲ್ಲಿ ಹಿರಿಯರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

1200ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವುಳ್ಳ ಪುರಾತನ ದೇವಾಲಯದ ಅರ್ಚಕ ಕುಟುಂಬದ ಶ್ರೀ ನಿವಾಸಮೂರ್ತಿ ರಂಗನಾಥನ ಸೇವೆಯಲ್ಲಿ ತಮ್ಮ ಜೀವನ ಸಾರ್ಥಕಗೊಳಿಸಿಕೊಂಡಿದ್ದಾರೆ. 82ವರ್ಷಗಳ ಸಹಸ್ರ ಚಂದ್ರದರ್ಶನದ ಮೂಲಕ ಉತ್ತಮ ಬದುಕಿನ ಮಾರ್ಗದರ್ಶಿಯಾಗಿದ್ದಾರೆ. ಅವರ ಆರೋಗ್ಯಯುತ ಬದುಕಿನ ಗುಟ್ಟನ್ನು ನಾವೆಲ್ಲಾ ಅನುಸರಿಸಬೇಕಿದೆ ಎಂದರು.

ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಅಶ್ವಥ್ಥನಾರಾಯಣ ಶ್ರೇಷ್ಠಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಧರ್ಮ ಇಂದಿಗೂ ಉತ್ತಮ ಬದುಕಿಗೆ ಮಾರ್ಗದರ್ಶಿಯಾಗಿದೆ. ವೇದ ವಿಧ್ವಾಂಸರ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮನ್ನು ನಿಸ್ವಾರ್ಥವಾಗಿ ಅರ್ಪಿಸಿಕೊಳ್ಳುವ ಸಜ್ಜನರಿಂದಾಗಿ ಇಂದಿಗೂ ನಮ್ಮ ಜೀವನಮೌಲ್ಯ ಉಳಿದಿದೆ ಎಂದು ಹೇಳಿದರು.

ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಮಹಾಬಲರಾವ್‌, ರಾಘವೇಂದ್ರ, ಗೋಪಿನಾಥ್‌, ಮತ್ತಿತರರು ಇದ್ದರು. ಟ್ರಸ್ಟ್‌ ವತಿಯಿಂದ ಹಿರಿಯರಾದ ಪಾಂಡುರಂಗಯ್ಯ, ತಿರುಮಲಯ್ಯ, ಶೇಷಣ್ಣ, ಸುನಿಲ್‌ ರಂಗಾಚಾರ್ಯ ಸೇರಿದಂತೆ ಹಲವು ಗಣ್ಯರನ್ನು ಗೌರವಿಸಲಾಯಿತು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿವಿಧ ಹೋಮ ಹಾಗೂ ಪೂರ್ಣಾಹುತಿ ಹಾಗೂ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಪ್ರಾಕಾರೋತ್ಸವ ನೆರವೇರಿಸಲಾಯಿತು.

ಗೋಪಿನಾಥ್‌ ಸ್ವಾಗತಿಸಿ, ಕೃಷ್ಣಮೂರ್ತಿ ನಿರೂಪಿಸಿ, ವಂದಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ