ಆ್ಯಪ್ನಗರ

ಯೋಗ್ಯ ಜೀವನ ನಡೆಸುವುದೆ ಯೋಗ

ದೇಹ ದಂಡಿಸಿ ಆಸನ ಮಾಡುವುದೊಂದೆ ಯೋಗವಲ್ಲ. ಯೋಗ್ಯವಾದ ಜೀವನ ರೂಢಿಸಿಕೊಂಡು ಜೀವನ ಪರಿವರ್ತನೆ ಮಾಡಿಕೊಳ್ಳುವುದೆ ಯೋಗ ಎಂದು ಶ್ರೀಪತಂಜಲಿ ಯೋಗ ಶಿಕ್ಷ ಣ ಸಮಿತಿ ಪ್ರಾಂತ ಪ್ರಧಾನ ಸಂಚಾಲಕ ಬೆಂಗಳೂರಿನ ಆ.ರಾ.ರಾಮಸ್ವಾಮಿ ಹೇಳಿದರು.

Vijaya Karnataka 5 Mar 2019, 5:00 am
ಚಿಕ್ಕಮಗಳೂರು : ದೇಹ ದಂಡಿಸಿ ಆಸನ ಮಾಡುವುದೊಂದೆ ಯೋಗವಲ್ಲ. ಯೋಗ್ಯವಾದ ಜೀವನ ರೂಢಿಸಿಕೊಂಡು ಜೀವನ ಪರಿವರ್ತನೆ ಮಾಡಿಕೊಳ್ಳುವುದೆ ಯೋಗ ಎಂದು ಶ್ರೀಪತಂಜಲಿ ಯೋಗ ಶಿಕ್ಷ ಣ ಸಮಿತಿ ಪ್ರಾಂತ ಪ್ರಧಾನ ಸಂಚಾಲಕ ಬೆಂಗಳೂರಿನ ಆ.ರಾ.ರಾಮಸ್ವಾಮಿ ಹೇಳಿದರು.
Vijaya Karnataka Web CKM-4rudrap8


ಶ್ರೀ ಪತಂಜಲಿ ಯೋಗ ಶಿಕ್ಷ ಣ ಸಮಿತಿಯಿಂದ ನಗರ ಹೊರವಲಯದ ಯೋಗ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಚಿಂತನಾಕೂಟದಲ್ಲಿ ಅವರು ಮಾತನಾಡಿದರು.

ನಮ್ಮ ಕುಟುಂಬದ ಜತೆ, ವೃತ್ತಿ ಜೀವನದಲ್ಲಿ, ವೈಯಕ್ತಿಕ,ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತು ಸಂತೋಷದಿಂದ ಇರುವುದೆ ಯೋಗ.ಹಿಂದಿನ ಕುಟುಂಬ ಪದ್ದತಿಯೆ ಒಂದು ಯೋಗ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಸಾಗುತ್ತಿದ್ದರು.ಆಟವಾಡಿ, ಕಥೆ ಹೇಳಿ ನಮ್ಮೊಳಗಿರುವ ಬುದ್ದಿವಂತಿಕೆಯನ್ನು ಹಾಗೂ ಒಳ್ಳೆಯ ವ್ಯಕ್ತಿತ್ವವನ್ನು ಇತರರಿಗೂ ಪರಿಚಯಿಸುವ ಕೆಲಸ ನಡೆಯಬೇಕು. ವ್ಯಕ್ತಿತ್ವ ವಿಕಸನ ಗೊಳಿಸುವುದೆ ಶ್ರೀಪತಂಜಲಿ ಯೋಗ ಶಿಕ್ಷ ಣ ಸಮಿತಿಯ ಮುಖ್ಯ ಉದ್ದೇಶ ಎಂದರು.

ಸಮಿತಿ ಸದಸ್ಯರು ತಮ್ಮ ಮನೆಯಿಂದ ತಂದ ಅಡುಗೆಯನ್ನು ಎಲ್ಲರಿಗೂ ಬಡಿಸುವ ಮೂಲಕ ಅನ್ನಪೂರ್ಣೇಶ್ವರಿ ಮಂತ್ರದೊಂದಿಗೆ ಸಹಭೋಜನ ಮಾಡಲಾಯಿತು.

ಏಕಾತ್ಮಕ ಸ್ತೋತ್ರದಿಂದ ಆರಂಭಗೊಂಡ ಚಿಂತನಾಕೂಟ ಗಣಪತಿ, ಸೂರ್ಯ,ವಿಷ್ಣು, ಶಿವ, ದುರ್ಗಾ,ಹಿಮಾಲಯ ಗಣಪತಿ ನಮಸ್ಕಾರಗಳ ಮೂಲಕ ಕೊನೆಗೊಂಡಿತು. ಪ್ರಾಂತ ಸಂಯೋಜಕ ರಾಘವೇಂದ್ರ, ಸಹಸಂಯೋಜಕ ವಿನಯ್‌ಕುಮಾರ್‌, ಜಿಲ್ಲಾ ಸಂಚಾಲಕ ಗೌತಮ್‌ಪ್ರಭು, ಸುಮಿತ್ರಾ ನಾಗಪ್ಪಗೌಡ, ನಗರ ಸಂಚಾಲಕಿ ಪುಷ್ಪಾಮೋಹನ್‌,ಶ್ರೀನಿವಾಸ್‌, ಶಿಕ್ಷ ಕರಾದ ಮಂಜುಳಾ,ಶಿವಣ್ಣ ,ಶೋಭ,ಬಾಲಸುಬ್ರಹ್ಮಣ್ಯ ,ಮುರಳಿ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ