ಆ್ಯಪ್ನಗರ

ಒತ್ತಡದ ಬದುಕಲ್ಲಿ ಯೋಗ ಅನಿವಾರ‍್ಯ

ಆರೋಗ್ಯ ಪೂರ್ಣ ಮತ್ತು ಚೈತನ್ಯ ಪೂರ್ಣ ಮನಸ್ಸು ಪ್ರತಿಯೊಬ್ಬರಲ್ಲಿಯೂ ಇರಬೇಕಾದರೆ ಯೋಗದ ಮಹತ್ವ ಅರಿಯಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಎಸ್‌. ರವಿ ಪ್ರಕಾಶ್‌ ಹೇಳಿದರು.

Vijaya Karnataka 24 Jun 2019, 5:00 am
ಕಡೂರು : ಆರೋಗ್ಯ ಪೂರ್ಣ ಮತ್ತು ಚೈತನ್ಯ ಪೂರ್ಣ ಮನಸ್ಸು ಪ್ರತಿಯೊಬ್ಬರಲ್ಲಿಯೂ ಇರಬೇಕಾದರೆ ಯೋಗದ ಮಹತ್ವ ಅರಿಯಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಎಸ್‌. ರವಿ ಪ್ರಕಾಶ್‌ ಹೇಳಿದರು.
Vijaya Karnataka Web CKM-23KDR2


ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕಚೇರಿಯಲ್ಲಿ ಭಾನುವಾರ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭ ಹಾಗೂ ಯೋಗ-ಧ್ಯಾನ- ಆಧ್ಯಾತ್ಮ ಮತ್ತು ಅಮ್ಮ ಎಂಬ ವಿಷಯಗಳ ಮೇಲೆ ಆಯೋಜಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಕಾರದ ಬದುಕು ನಮ್ಮದಾಗಬೇಕು. ಜಂಜಡದ ಬದುಕಿನಲ್ಲಿ ಯೋಗ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳುತ್ತಾ ಸಾಗಿದೆ ಎಂದು ಹೇಳಿದರು.

ಅಮ್ಮ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ. ವಿರೂಪಾಕ್ಷ ಪ್ಪ ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅಮ್ಮ ಕಲಿಸುತ್ತಾಳೆ. ತ್ಯಾಗಮು ಬದುಕಿಗೆ ಅಮ್ಮ ಬಹುದೊಡ್ಡ ಉದಾಹರಣೆ. ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಅಮ್ಮನ ವಾತ್ಸಲ್ಯ ಮಾತ್ರ ಹಾಗೆಯೇ ಇರುತ್ತದೆ ಎಂದರು.

ವೈದ್ಯ ಡಾ. ಪ್ರದೀಪ್‌ ಮಾತನಾಡಿ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಪರಿಪೂರ್ಣತೆಯೇ ನೈಜವಾದ ಆರೋಗ್ಯ. ಇಂತಹ ಆರೋಗ್ಯ ನಮ್ಮದಾಗಬೇಕಾದರೆ ಯೋಗ ಮತ್ತು ಧ್ಯಾನ ಅತಿ ಅವಶ್ಯಕ. ವೈದ್ಯರು ವ್ಯಕ್ತಿಯ ರೋಗವನ್ನು ಗುಣಪಡಿಸಲು ಎಷ್ಟೇ ಸಾಹಸಪಟ್ಟರೂ ಆತನ ಮಾನಸಿಕ ಸದೃಢತೆಯೇ ರೋಗ ನಿವಾರಣೆಗೆ ಮೊದಲ ಮೆಟ್ಟಿಲು ಎಂದರು.ಆರಕ್ಷ ಕ ಸಹಾಯಕ ನಿರೀಕ್ಷ ಕ ಬಿ.ಟಿ. ಚಂದ್ರಪ್ರಕಾಶ್‌ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ಶ್ರೀನಿವಾಸ್‌ಮೂರ್ತಿ ಅಧ್ಯಕ್ಷ ತೆ ವಹಿಸಿದ್ದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ. ಜ್ಞಾನೇಶ್ವರಿ, ಬಿ.ಕೆ. ಪವಿತ್ರಾ, ಜಿ.ಬಿ. ಆನಂದ್‌ಮೂರ್ತಿ, ಅಣ್ಣೇಗೆರೆ ಯೋಗ ಗುರು ಪಿ.ಸಿ ದೇವೇಂದ್ರಪ್ಪ, ರಾಣಿಬೆನ್ನೂರಿನ ಕೋಮಾಲಾಚಾರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ