ಆ್ಯಪ್ನಗರ

ಭದ್ರಾ ಚಾನೆಲ್‌ ಪಾಲಾದ ಬಾಲಕ

ಎಂ.ಸಿ.ಹಳ್ಳಿ ಸಮೀಪದ ಭದ್ರಾ ಚಾನೆಲ್‌ನಲ್ಲಿ ಬಾಲಕನೋರ್ವ ಮುಳುಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

Vijaya Karnataka 23 May 2019, 5:00 am
ತರೀಕೆರೆ ಗ್ರಾಮಾಂತರ: ಎಂ.ಸಿ.ಹಳ್ಳಿ ಸಮೀಪದ ಭದ್ರಾ ಚಾನೆಲ್‌ನಲ್ಲಿ ಬಾಲಕನೋರ್ವ ಮುಳುಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
Vijaya Karnataka Web young boy died in bhadra canal
ಭದ್ರಾ ಚಾನೆಲ್‌ ಪಾಲಾದ ಬಾಲಕ


ದೋರನಾಳು ಗ್ರಾಮದ ಸುಹಾಸ್‌ (14) ಚಾನಲ್‌ನಲ್ಲಿ ಮುಳುಗಿರುವ ಬಾಲಕ. ಭದ್ರಾ ಚಾನಲ್‌ನಲ್ಲಿ ಬಟ್ಟೆ ತೊಳೆಯಲೆಂದು ತೆರಳಿದ್ದ ಪೋಷಕರೊಂದಿಗೆ ಈತ ಹೋಗಿದ್ದ. ಬಟ್ಟೆ ತೊಳೆಯುತ್ತಿದ್ದ ಪೋಷಕರು ನೋಡುತ್ತಿದ್ದಂತೆಯೇ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಬಾಲಕನನ್ನು ಕಾಪಾಡಲು ಮಾಡಿದ ಪ್ರಯತ್ನ ವಿಫಲವಾಗಿದ್ದು, ಬಾಲಕ ನಾಪತ್ತೆಯಾಗಿದ್ದಾನೆ.

ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂಧಿ ಬಾಲಕನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ನಿರೀಕ್ಷ ಕ ಜಯಂತ್‌ ಎಲ್‌.ಗೌಳಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ