ಹೊಳಲ್ಕೆರೆ : ಕಾಯಕ ಯೋಗಿ ನುಲಿಯ ಚಂದಯ್ಯ ನೆಲೆಯೂರಿರುವ ತಾಲೂಕಿನ ಆರ್.ನುಲೇನೂರು ಗ್ರಾಮದಲ್ಲಿ ಅ.4ರ ಮಂಗಳವಾರ ನಂದಿ ಜಾತ್ರೆ ಜರುಗಲಿದೆ.
ಜಾತ್ರೆಯಲ್ಲಿ ಸ್ವಾಮಿಗೆ ಮುತ್ತೈದೆಯರಿಂದ 101 ಕುಂಬಳ ಗಂಗಾ ಪೂಜೆ ಕೂಡ ನಡೆಯಲಿದೆ. ಗ್ರಾಮಕ್ಕೆ ಮೊದಲ ವರ್ಷ ಸೊಸೆಯಾಗಿ ಬಂದವರು ಉಪವಾಸವಿದ್ದು ಪೂಜೆ ಸಲ್ಲಿಸುತ್ತಾರೆ.
ಕರಿಬಸವೇಶ್ವರಸ್ವಾಮಿ, ವೀರಭದ್ರೇಶ್ವರಸ್ವಾಮಿ ಕೆಂಡೋತ್ಸವ ಕೂಡ ಜರುಗಲಿದೆ. ಜನಪದ ಕಲಾ ತಂಡಗಳ ಮೂಲಕ ಹೂವಿನ ಪಲ್ಲಕ್ಕಿ ಉತ್ಸವ ಕೂಡ ನಡೆಯಲಿದೆ.
ಜಗಳಕ್ಕೆ ಮುಕ್ತಿ ನೀಡಿದ ನಂದಿ: ಹಿಂದೆ ಪೂರ್ವಜರ ಕಾಲದಲ್ಲಿ ನಿವೇಶನದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಕಗ್ಗಂಟಾಗಿದ್ದ ಜಗಳ ಕಟಕಟೆಯ ಹತ್ತಿ ಅಂದಿನ ಶ್ಯಾನುಭೋಗರಾಗಿದ್ದ ಶೇಷಪ್ಪ ಅವರ ಅಂಗಳಕ್ಕೆ ಹೋಗಿದೆ. ಅದೇ ಸಂದರ್ಭದಲ್ಲಿ ಶೇಷಪ್ಪ ಅವರ ಕನಸಿಗೆ ನಂದಿಯೊಂದು ಬಂದು ಅಲ್ಲಿನ ನಿವೇಶನದಲ್ಲಿ ನಾನಿದ್ದೇನೆ. ಅಲ್ಲಿ ಮನೆ ಕಟ್ಟಬಾರದು ಎಂದು ತಿಳಿಸಿದೆ.
ಶೇಷಪ್ಪ ತಮ್ಮ ಕನಸಿನಲ್ಲಿ ನಡೆದ ಘಟನೆ ಪಂಚಾಯಿತಿಯಲ್ಲಿ ಊರಿನ ಜನರಿಗೆ ತಿಳಿಸಿದ್ದಾರೆ. ಇದು ಕಟ್ಟು ಕತೆ ಎಂದು ಜಗಳ ನಿರತ ಎರಡು ಕುಟುಂಬದವರು ದೂರಿದ್ದಾರೆ. ಕೊನೆಗೆ ಜಾಗ ಅಗೆಯಲಾಗಿ ಅಲ್ಲಿ ನಂದಿ ಹೋಲುವ ಕರಿ ಬಣ್ಣದ ಉದ್ಭವ ಮೂರ್ತಿ ದೊರೆತಿದೆ.
ಕೆರೆ ತುಂಬಿಸಿದ ನಂದಿ:ಗ್ರಾಮದ ಪಕ್ಕದಲ್ಲಿಯೇ ಕೆರೆ ಇದ್ದು ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಪವಾಡ ಪುರುಷ ನಂದಿಯನ್ನು ಗ್ರಾಮದ ಮುಖಂಡರೆಲ್ಲರೂ ಸೇರಿ ಸುಮಾರು 35 ವರ್ಷಗಳ ಹಿಂದೆ ಕೆರೆ ತುಂಬಿಸುವಂತೆ ಪ್ರಾರ್ಥಿಸಿದರು. ಪವಾಡವೆಂಬಂತೆ ರಾತ್ರಿ ಇಡೀ ಮಳೆ ಸುರಿದು ಕೆರೆ ತುಂಬಿತು. ಆಗ ಗ್ರಾಮಸ್ಥರೆಲ್ಲರೂ ಅಂದಿನಿಂದ ಪ್ರತಿ ವರ್ಷ ನಂದಿ ಜಾತ್ರೆ ನಡೆಸುತ್ತಾ ಬಂದಿದ್ದಾರೆ.
ಜಾತ್ರೆಯಲ್ಲಿ ಸ್ವಾಮಿಗೆ ಮುತ್ತೈದೆಯರಿಂದ 101 ಕುಂಬಳ ಗಂಗಾ ಪೂಜೆ ಕೂಡ ನಡೆಯಲಿದೆ. ಗ್ರಾಮಕ್ಕೆ ಮೊದಲ ವರ್ಷ ಸೊಸೆಯಾಗಿ ಬಂದವರು ಉಪವಾಸವಿದ್ದು ಪೂಜೆ ಸಲ್ಲಿಸುತ್ತಾರೆ.
ಕರಿಬಸವೇಶ್ವರಸ್ವಾಮಿ, ವೀರಭದ್ರೇಶ್ವರಸ್ವಾಮಿ ಕೆಂಡೋತ್ಸವ ಕೂಡ ಜರುಗಲಿದೆ. ಜನಪದ ಕಲಾ ತಂಡಗಳ ಮೂಲಕ ಹೂವಿನ ಪಲ್ಲಕ್ಕಿ ಉತ್ಸವ ಕೂಡ ನಡೆಯಲಿದೆ.
ಜಗಳಕ್ಕೆ ಮುಕ್ತಿ ನೀಡಿದ ನಂದಿ: ಹಿಂದೆ ಪೂರ್ವಜರ ಕಾಲದಲ್ಲಿ ನಿವೇಶನದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ. ಕಗ್ಗಂಟಾಗಿದ್ದ ಜಗಳ ಕಟಕಟೆಯ ಹತ್ತಿ ಅಂದಿನ ಶ್ಯಾನುಭೋಗರಾಗಿದ್ದ ಶೇಷಪ್ಪ ಅವರ ಅಂಗಳಕ್ಕೆ ಹೋಗಿದೆ. ಅದೇ ಸಂದರ್ಭದಲ್ಲಿ ಶೇಷಪ್ಪ ಅವರ ಕನಸಿಗೆ ನಂದಿಯೊಂದು ಬಂದು ಅಲ್ಲಿನ ನಿವೇಶನದಲ್ಲಿ ನಾನಿದ್ದೇನೆ. ಅಲ್ಲಿ ಮನೆ ಕಟ್ಟಬಾರದು ಎಂದು ತಿಳಿಸಿದೆ.
ಶೇಷಪ್ಪ ತಮ್ಮ ಕನಸಿನಲ್ಲಿ ನಡೆದ ಘಟನೆ ಪಂಚಾಯಿತಿಯಲ್ಲಿ ಊರಿನ ಜನರಿಗೆ ತಿಳಿಸಿದ್ದಾರೆ. ಇದು ಕಟ್ಟು ಕತೆ ಎಂದು ಜಗಳ ನಿರತ ಎರಡು ಕುಟುಂಬದವರು ದೂರಿದ್ದಾರೆ. ಕೊನೆಗೆ ಜಾಗ ಅಗೆಯಲಾಗಿ ಅಲ್ಲಿ ನಂದಿ ಹೋಲುವ ಕರಿ ಬಣ್ಣದ ಉದ್ಭವ ಮೂರ್ತಿ ದೊರೆತಿದೆ.
ಕೆರೆ ತುಂಬಿಸಿದ ನಂದಿ:ಗ್ರಾಮದ ಪಕ್ಕದಲ್ಲಿಯೇ ಕೆರೆ ಇದ್ದು ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಪವಾಡ ಪುರುಷ ನಂದಿಯನ್ನು ಗ್ರಾಮದ ಮುಖಂಡರೆಲ್ಲರೂ ಸೇರಿ ಸುಮಾರು 35 ವರ್ಷಗಳ ಹಿಂದೆ ಕೆರೆ ತುಂಬಿಸುವಂತೆ ಪ್ರಾರ್ಥಿಸಿದರು. ಪವಾಡವೆಂಬಂತೆ ರಾತ್ರಿ ಇಡೀ ಮಳೆ ಸುರಿದು ಕೆರೆ ತುಂಬಿತು. ಆಗ ಗ್ರಾಮಸ್ಥರೆಲ್ಲರೂ ಅಂದಿನಿಂದ ಪ್ರತಿ ವರ್ಷ ನಂದಿ ಜಾತ್ರೆ ನಡೆಸುತ್ತಾ ಬಂದಿದ್ದಾರೆ.