ಆ್ಯಪ್ನಗರ

ಸರಕಾರಿ ಐಟಿಐಗೆ ಕೋಟಿ ವೆಚ್ಚದ ಕಟ್ಟಡ

ಐಟಿಐ ವಿದ್ಯಾರ್ಥಿಗಳ ಶಿಕ್ಷಣಕ್ಕ್ಕೆ ಬೇಕಾದ ಉತ್ತಮ ಉಪಕರಣಗಳು, ಕಟ್ಟಡದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂತನ ತರಬೇತಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ವಿಕ ಸುದ್ದಿಲೋಕ 5 Oct 2016, 7:37 pm
ಚಳ್ಳಕೆರೆ : ಐಟಿಐ ವಿದ್ಯಾರ್ಥಿಗಳ ಶಿಕ್ಷಣಕ್ಕ್ಕೆ ಬೇಕಾದ ಉತ್ತಮ ಉಪಕರಣಗಳು, ಕಟ್ಟಡದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂತನ ತರಬೇತಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
Vijaya Karnataka Web
ಸರಕಾರಿ ಐಟಿಐಗೆ ಕೋಟಿ ವೆಚ್ಚದ ಕಟ್ಟಡ


ನಗರದ ಪಾವಗಡ ರಸ್ತೆಯ ಸರಕಾರಿ ಐಟಿಐ ಕಾಲೇಜಿನ ಆವರಣದಲ್ಲಿ ಒಂದು ಕೋಟಿ ರೂ. ವೆಚ್ಚದ ತರಬೇತಿ ಕೇಂದ್ರ ಮತ್ತು ಸೋಮಗುದ್ದು ರಸ್ತೆಯಲ್ಲಿ ಕೃಷಿ ಉಪ ನಿರ್ದೇಶಕರ ಕಚೇರಿ ಕಟ್ಟಡದ ಎರಡು ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸರಕಾರಿ ಐಟಿಐ ಕಾಲೇಜಿನಲ್ಲಿ 110 ವಿದ್ಯಾರ್ಥಿಗಳಿಂದ ಈಗ 157ಕ್ಕೆ ಏರಿದ್ದು, ಕಟ್ಟಡದ ಕೊರತೆಯಿತ್ತು.ಇದರಿಂದ ಕಲಿಕೆಗೆ ತೊಂದರೆಯಾಗುತ್ತಿತ್ತು. ಹೊಸ ಕಟ್ಟಡದ ನಂತರ ಸಮಸ್ಯೆ ಬಗೆಹರಿಯಲಿದೆ. ತರಬೇತಿ ವೇಳೆ ತಂತ್ರಜ್ಞಾನದ ಜ್ಞಾನ ಪಡೆದುಕೊಂಡಲ್ಲಿ ಮುಂದೆ ಉದ್ಯೋಗ ಪಡೆಯಲು ಸಹಕಾರಿಯಾಗುವುದು ಎಂದು ತಿಳಿಸಿದರು.

ಡಿಡಿ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ, ಪಕ್ಕದಲ್ಲೆ ರೈತ ಸಂಪರ್ಕ ಕೇಂದ್ರವಿದ್ದು, ರೈತರಿಗೆ ಉಪಯೋಗವಾಗಲಿದೆ. ಕಚೇರಿಯನ್ನು ಮುಖ್ಯ ರಸ್ತೆಗೆ ಅಭಿಮುಖವಾಗಿ ನಿರ್ಮಿಸುವಂತೆ ಎಂಜಿನಿಯರ್‌ಗೆ ಸೂಚಿಸಿದರು.

ಕೃಷಿ ಉಪನಿರ್ದೇಶಕಿ ಡಾ.ಸುಜಾತ ಮಾತನಾಡಿ, ಕಳೆದ ವರ್ಷ ಚಳ್ಳಕೆರೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕೃಷಿ ಉಪ ನಿರ್ದೇಶಕ ಕಚೇರಿ ಪ್ರಾರಂಭಿಸಲಾಗಿತ್ತು. ಈಗ ರೈತ ಸಂಪರ್ಕ ಕೇಂದ್ರದ ಜಾಗದಲ್ಲಿ 90 ಲಕ್ಷ ರೂ.ವೆಚ್ಚದಲ್ಲಿ ಡಿಡಿ ಕಚೇರಿ ಕಟ್ಟಡ ನಿರ್ಮಿಸಲಾಗುತ್ತಿದೆ. ರೈತರಿಗೆ ಒಂದೇ ಕಡೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಜಿ.ವೀರೇಶ್‌, ನಗರಸಭೆ ಅಧ್ಯಕ್ಷೆ ರೇಷ್ಮಬಾನು, ಉಪಾಧ್ಯಕ್ಷೆ ಮಹದೇವಮ್ಮ, ಮಾಜಿ ಜಿಪಂ ಅಧ್ಯಕ್ಷ ರವಿಕುಮಾರ್‌, ತಹಸೀಲ್ದಾರ್‌ ಶ್ರೀಧರಮೂರ್ತಿಪಂಡಿತ್‌. ಲೋಕೋಪಯೋಗಿ ಎಇಇ ಸತೀಶ್‌ಬಾಬು, ಕೃಷಿ ಡಿಡಿ ಡಾ.ಸುಜಾತ, ಎಡಿ ಡಾ.ಮಾರುತಿ, ಕೃಷಿ ಅಧಿಕಾರಿಗಳಾದ ರವಿ, ಅಶೋಕ್‌, ಕಿರಣ್‌ಕುಮಾರ್‌, ಗಿರೀಶ್‌, ತಿಪ್ಪೇಸ್ವಾಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ