ಆ್ಯಪ್ನಗರ

​ ಪಾಕ್‌ನಿಂದ ಭಾರತಕ್ಕೆ ಡ್ರಗ್ಸ್‌ ಸಪ್ಲೆ !

ಭಾರತವನ್ನು ಡ್ರಗ್ಸ್‌ ಮುಕ್ತ ದೇಶವಾಗಿಸಲು ಯುವ ಸಮೂಹ ಪಣ ತೊಡಬೇಕಿದೆ. ಆಗ ದೇಶ ವಿಶ್ವಕ್ಕೆ ಮಾದರಿ ಆಗಲಿದೆ ಎಂದು ಶ್ರೀಸ್ವರೂಪ ಆನಂದ ಸರಸ್ವತಿಜೀ ಮಹರಾಜ್‌ ತಿಳಿಸಿದರು.

ವಿಕ ಸುದ್ದಿಲೋಕ 14 Oct 2016, 6:45 pm
ಚಿತ್ರದುರ್ಗ : ಭಾರತವನ್ನು ಡ್ರಗ್ಸ್‌ ಮುಕ್ತ ದೇಶವಾಗಿಸಲು ಯುವ ಸಮೂಹ ಪಣ ತೊಡಬೇಕಿದೆ. ಆಗ ದೇಶ ವಿಶ್ವಕ್ಕೆ ಮಾದರಿ ಆಗಲಿದೆ ಎಂದು ಶ್ರೀಸ್ವರೂಪ ಆನಂದ ಸರಸ್ವತಿಜೀ ಮಹರಾಜ್‌ ತಿಳಿಸಿದರು.
Vijaya Karnataka Web
​ ಪಾಕ್‌ನಿಂದ ಭಾರತಕ್ಕೆ ಡ್ರಗ್ಸ್‌ ಸಪ್ಲೆ !


ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಉತ್ತರಾಯಣ ಜ್ಯೋತಿರ್‌ಮಠ, ಬದ್ರಿನಾಥದ 2500ನೇ ವಾರ್ಷಿಕೋತ್ಸವದ ವಿಜಯಯಾತ್ರೆ ಅಂಗವಾಗಿ ಬುಧವಾರ ನಡೆದ ಧರ್ಮ ಪ್ರಚಾರದಲ್ಲಿ ಮಾತನಾಡಿದರು.

ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್‌ ಬರುತ್ತಿದ್ದು, ನಮ್ಮ ದೇಶದ ಯುವಕರನ್ನು ವ್ಯಸನಿಗಳನ್ನಾಗಿಸಿ ದೇಶದ ಶಕ್ತಿ ಕುಂದಿಸುವ ಕುತಂತ್ರ ಅಡಗಿದೆ ಎಂದು ಹೇಳಿದರು.

ಸಿಗರೇಟ್‌ ಮೂಲಕವೂ ಡ್ರಗ್ಸ್‌ ಸಪ್ಲæ್ಲ ಆಗುತ್ತಿದೆ. ವ್ಯಸನಿಗಳಾಗುವ ನಮ್ಮ ದೇಶದ ಯುವಕರು ಒಂದೊಮ್ಮೆ ಡ್ರಗ್ಸ್‌ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಾರೆ. ಭಯೋತ್ಪಾದನೆ ಜತೆ ನಮ್ಮ ಯುವಸಮೂಹದ ಶಕ್ತಿಯನ್ನು ಕುಗ್ಗಿಸುವ ಆತಂಕವೂ ನಮ್ಮನ್ನು ಕಾಡುತ್ತಿದೆ. ಹಾಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಸಲಹೆ ನೀಡಿದರು.

ಪರೋಪಕಾರದ ಗುಣ ಬೆಳೆಸಿಕೊಳ್ಳಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಮೋಕ್ಷ ಪಡೆಯಲಿಕ್ಕಾಗಿ ಪರಮಾತ್ಮನನ್ನು ಸ್ಮರಿಸುತ್ತಾ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಆಧುನಿಕ ಮನುಷ್ಯನ ಜೀವನ ಅರ್ಥ, ಕಾಮ ಇವರೆಡರ ನಡುವೆ ಇದೆ. ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳನ್ನು ಸರಿಯಾಗಿ ನಿಭಾಯಿಸಬೇಕು. ಅರ್ಥಪೂರ್ಣ ಜೀವನ ನಡೆಸಬೇಕು. ಧರ್ಮಪಾಲನೆಯಲ್ಲಿ ಮುನ್ನಡೆಯಬೇಕು. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ, ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಧರ್ಮದ ಮಾರ್ಗದಲ್ಲಿ ನಡೆದರೆ ಭಗವಂತನ ಬಳಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.

ಶ್ರೀಗೋವಿಂದಾನಂದ ಸರಸ್ವತಿ ಸ್ವಾಮೀಜಿ, ಶ್ರೀಅಮೃತಾನಂದ ಸ್ವರಸ್ವತಿ ಸ್ವಾಮೀಜಿ, ಶ್ರೀಸುಬುದ್ದಾನಂದ ಬ್ರಹ್ಮಚಾರಿ, ಬ್ರಹ್ಮವಿದ್ಯಾನಂದ ಬ್ರಹ್ಮಚಾರಿ, ಚಿದಾನಂದ ಸ್ವಾಮೀಜಿ, ವಿಶುದಾನಂದ ಸ್ವಾಮೀಜಿ ಮತ್ತಿತರರಿದ್ದರು.


-------

ಪಾಕಿಸ್ತಾನದಿಂದ ಭಾರತದ ಮೇಲೆ ಯುದ್ಧ ಭೀತಿ ಎದುರಾಗಿದೆ. ಅವರಾಗಿಯೇ ಕಾಲು ಕೆರೆದು ಬಂದರೆ ಯುದ್ಧ ಅನಿವಾರ್ಯ. ಅದು ನಮ್ಮ ಧರ್ಮ ಕೂಡ. ರಾಮಾಯಣ, ಮಹಾಭಾರತ ನಮಗೆ ಆದರ್ಶ. ಧರ್ಮ ಪಾಲನೆಯಲ್ಲಿ ನಡೆದವರು ಕಷ್ಟ ಅನುಭವಿಸಿ ಕೊನೆಗೆæ ಜಯಶಾಲಿ ಆಗಿದ್ದಾರೆ. ಅಧರ್ಮೀಯರಿಗೆ ಆರಂಭದಲ್ಲಿ ಜಯ ಸಿಕ್ಕರೂ ಕೊನೆಗೆ ಪರಾಭವ ಖಂಡಿತ.

-ಶ್ರೀಸ್ವರೂಪ ಸರಸ್ವತಿಜೀ ಮಹರಾಜ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ