ಆ್ಯಪ್ನಗರ

ಹಳೇ ನೋಟು ಎಕ್ಸ್‌ಚೇಂಜ್‌ಗೆ ಚಪ್ಪಲಿ ಕ್ಯೂ

ಬೀದಿ ನಲ್ಲಿಗಳಲ್ಲಿ ನೀರಿಗೆ ಖಾಲಿ ಬಿಂದಿಗೆ, ಚೊಂಬು ಇಡುವುದು, ನ್ಯಾಯಬೆಲೆ ಅಂಗಡಿ ಮುಂದೆ ಕೈ ಚೀಲ, ಸೀಮೆ ಎಣ್ಣೆ ಕ್ಯಾನ್‌ ಇಡುವುದು ನೋಡಿದ್ದೇವೆ. ಆದರೆ, ಗ್ರಾಮದ ಕೆನರಾ ಬ್ಯಾಂಕ್‌ ಎದುರು ನೋಟು ಬದಲಾವಣೆ ಸರದಿಗೆ ಮಂಗಳವಾರ ಚಪ್ಪಲಿಯನ್ನೇ ಬಿಟ್ಟ ದೃಶ್ಯ ಅಚ್ಚರಿಗೊಳಿಸಿದೆ.

ವಿಕ ಸುದ್ದಿಲೋಕ 16 Nov 2016, 9:18 am
ನಿರಂಜನಮೂರ್ತಿ ಭರಮಸಾಗರ : ಬೀದಿ ನಲ್ಲಿಗಳಲ್ಲಿ ನೀರಿಗೆ ಖಾಲಿ ಬಿಂದಿಗೆ, ಚೊಂಬು ಇಡುವುದು, ನ್ಯಾಯಬೆಲೆ ಅಂಗಡಿ ಮುಂದೆ ಕೈ ಚೀಲ, ಸೀಮೆ ಎಣ್ಣೆ ಕ್ಯಾನ್‌ ಇಡುವುದು ನೋಡಿದ್ದೇವೆ. ಆದರೆ, ಗ್ರಾಮದ ಕೆನರಾ ಬ್ಯಾಂಕ್‌ ಎದುರು ನೋಟು ಬದಲಾವಣೆ ಸರದಿಗೆ ಮಂಗಳವಾರ ಚಪ್ಪಲಿಯನ್ನೇ ಬಿಟ್ಟ ದೃಶ್ಯ ಅಚ್ಚರಿಗೊಳಿಸಿದೆ.
Vijaya Karnataka Web
ಹಳೇ ನೋಟು ಎಕ್ಸ್‌ಚೇಂಜ್‌ಗೆ ಚಪ್ಪಲಿ ಕ್ಯೂ


ಹೌದು, ಇಲ್ಲಿನ ಕೆನರಾ ಬ್ಯಾಂಕ್‌ ಮುಂದೆ ಇಂದು ಬೆಳ್ಳಂಬೆಳ್ಳಗ್ಗೆ ಚಪ್ಪಲಿ ಸಾಲನ್ನು ನೋಡಿದ ಕೆಲವರಿಗೆ ಆಶ್ಚರ್ಯ ಉಂಟಾಗಿತ್ತು. ಗ್ರಾಹಕರು 500, 1000 ಮುಖಬೆಲೆಯ ನೋಟು ಬದಲಾವಣೆಗೆ ಕ್ಯೂ ನಿಲ್ಲುವುದು ಕಂಡುಬರುತ್ತಿದೆ.

ಜನ ಬಿಸಿಲು, ಗಾಳಿಯನ್ನು ಲೆಕ್ಕಿಸದೆ ಉದ್ದನೆಯ ಸಾಲಿನಲ್ಲಿ ನಿಂತಿದ್ದರು. ಬೇಗನೆ ಕ್ಯೂ ನಿಲ್ಲಬೇಕೆಂದು ಸುತ್ತಮುತ್ತಲ ಹಳ್ಳಿಗಳ ಜನರು ಬೆಳ್ಳಂಬೆಳ್ಳಗ್ಗೆಯೇ ಇನ್ನೂ 6 ಗಂಟೆಗೆ ಬ್ಯಾಂಕ್‌ ಬಾಗಿಲ ಬಳಿ ದೌಡಾಯಿಸಿ ನಿಂತಿದ್ದರು.

ಮಂಗಳವಾರ ವಾರದ ಸಂತೆ ಬೇರೆ ಇತ್ತು. ಈ ಧಾವಂತದಲ್ಲಿದ್ದ ಜನ ಬಿಸಿಲ ಜಳಕ್ಕೆ ಬಸವಳಿದು ಸರತಿ ಸಾಲಿನಲ್ಲಿ ತಮ್ಮ ಬದಲಿಗೆ ಪಾದರಕ್ಷೆಗಳನ್ನು ಕ್ಯೂನಲ್ಲಿ ಇರಿಸಿ ನೆರಳಿನ ಮೊರೆ ಹೋಗುತ್ತಿದ್ದರು. ಮಧ್ಯಾಹ್ನದ ಬಿಸಿಲ ತಾಪ ತಗ್ಗಿಸಲು ಬ್ಯಾಂಕ್‌ ವತಿಯಿಂದ 3 - 4 ಶಾಮಿಯಾನ ಕೂಡ ಹಾಕಲಾಗಿತ್ತು. ಮಂಗಳವಾರ 25 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಬಿಸಿಲ ಪ್ರಖರತೆ ಷಾಮಿಯಾನದಡಿಗೂ ಚಾಚಿತ್ತು. ಹಾಗಾಗಿ ಜನ ಚಪ್ಪಲಿಗಳನ್ನು ಕ್ಯೂಗೆ ಬಿಟ್ಟಿದ್ದರು.

ಠೇವಣಿ, ನೋಟು ಬದಲಾವಣೆಗೆ ಜನ ಮುಗಿಬಿದ್ದ ಕಾರಣ ಬ್ಯಾಂಕ್‌ಗಳ ಮುಂದೆ ದೊಡ್ಡ ಮಟ್ಟದ ಸರತಿ ಸಾಲುಗಳು ಕಂಡುಬರುತ್ತಿದೆ.

ಹಳ್ಳಿಗಳಿಂದ ವ್ಯಕ್ತಿಯೊಬ್ಬ ಹಣ ಬದಲಾವಣೆ ಮಾಡಿಕೊಡಲು ಕೆಲ ಬ್ರೋಕರ್‌ ಮೂಲಕ ನಗರಕ್ಕೆ ಬಂದರೆ 300 ರೂ. ಕೂಲಿ ಜತೆಗೆ ಬಸ್‌ ಚಾರ್ಜ್‌ ಕೂಡ ಕೊಟ್ಟು ಸತ್ಕರಿಸಲಾಗುತ್ತಿದೆ. ಹಣದಾಸೆಗೆ ಕೆಲ ಹಳ್ಳಿಗಳ ಮುಗ್ಧ ಜನರು ಬ್ಯಾಂಕ್‌ಗಳತ್ತ ಹಣದಾಸೆಗೆ ದೌಡಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆಲ ಬ್ಯಾಂಕ್‌ಗಳ ಸುತ್ತಮುತ್ತ ಹಾಗೂ ಹೈವೇ ಡಾಬಾಗಳು, ಲೇವಾದೇವಿಗಾರರು ಸೇರಿದಂತೆ ಕಿರಾಣಿ ವ್ಯಾಪಾರಸ್ಥರು ಬಳಿ ಹಳೇ ನೋಟು ಬದಲಾವಣೆಗೆ ಕಮೀಷನ್‌ ದಂಧೆ ನಡೆಯುತ್ತಿದೆ. 1000 ನೋಟಿಗೆ 150 ರೂ. ಹಾಗೂ 500 ರೂ. ನೋಟಿಗೆ 50 ರೂ. ಕಮೀಷನ್‌ ವಸೂಲಿ ಆಗುತ್ತಿದೆ ಎಂದು ಹೆಸರು ಹೇಳದ ವಿಕ ಓದುಗ ಹೇಳುತ್ತಾರೆ.

----------

ಮೋದಿ ಸರಕಾರ ಭ್ರಷ್ಟಚಾರ ತಡೆ, ಖೋಟಾ ನೋಟು ದಂಧೆ ಮಟ್ಟ ಹಾಕುಲು ಒಳ್ಳೆಯ ಕೆಲಸ ಮಾಡಿದೆ. ಒಂದಷ್ಟು ಕಿಡಿಗೇಡಿಗಳು ನೋಟು ಬದಲಾವಣೆ ವೇಳೆ ಕಮಿಷನ್‌ ದಂಧೆ ನಡೆಸುತ್ತಿದ್ದಾರೆ. ಅಂಥವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

- ಹನುಮಂತಪ್ಪ, ಭರಮಸಾಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ