ಆ್ಯಪ್ನಗರ

ಪಶ್ನೆ ಪತ್ರಿಕೆ ಅದಲು ಬದಲು, ಪರೀಕ್ಷೆ ಗಂಟೆ ತಡ

ದಾವಣಗೆರೆ ವಿಶ್ವವಿದ್ಯಾಲಯದ ಅಪರಾ ತಪರಾ, ನಿರ್ಲಕ್ಷ್ಯ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ, ಪ್ರಶ್ನೆಪತ್ರಿಕೆಯೇ ಅದಲು ಬದಲಾಗಿ ಕೆಲ ಕಡೆ ಪರೀಕ್ಷೆ ಒಂದು ಗಂಟೆ ತಡವಾದ ಹೊಸ ಅವಘಡವೊಂದು ಮಂಗಳವಾರ ಹೊರ ಬಿದ್ದಿದೆ.

ವಿಕ ಸುದ್ದಿಲೋಕ 23 Nov 2016, 8:51 pm
ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದ ಅಪರಾ ತಪರಾ, ನಿರ್ಲಕ್ಷ್ಯ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ, ಪ್ರಶ್ನೆಪತ್ರಿಕೆಯೇ ಅದಲು ಬದಲಾಗಿ ಕೆಲ ಕಡೆ ಪರೀಕ್ಷೆ ಒಂದು ಗಂಟೆ ತಡವಾದ ಹೊಸ ಅವಘಡವೊಂದು ಮಂಗಳವಾರ ಹೊರ ಬಿದ್ದಿದೆ.
Vijaya Karnataka Web
ಪಶ್ನೆ ಪತ್ರಿಕೆ ಅದಲು ಬದಲು, ಪರೀಕ್ಷೆ ಗಂಟೆ ತಡ


ವಿವಿ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳಲ್ಲಿ ಮಂಗಳವಾರ ಆರನೇ ಸೆಮಿಸ್ಟರ್‌ನ ಇಂಗ್ಲಿಷ್‌ ಐಚ್ಛಿಕ ವಿಷಯದ ಪರೀಕ್ಷೆಯಿತ್ತು. ಆದರೆ ಪ್ರಶ್ನೆ ಪತ್ರಿಕೆಯೇ ಬದಲಾಗಿ ಒಂದು ಗಂಟೆ ವಿಳಂಬವಾಗಿದೆ.

ಈ ಬದಲಾದ ವಿಷಯವನ್ನು ವಿವಿಯ ಪರೀಕ್ಷಾಂಗ ವಿಭಾಗಕ್ಕೆ ತಿಳಿಸಲು ಪ್ರಾಚಾರ್ಯರು ಸತತ ಒಂದು ತಾಸು ಫೋನ್‌ಗೆ ಪ್ರಯತ್ನಿಸಿದ್ದಾರೆ. ಯಾರೂ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಸರಿಯಾದ ಪ್ರಶ್ನೆ ಪತ್ರಿಕೆ ಇ ಮೇಲ್‌ನಲ್ಲಿ ತರಿಸಿಕೊಂಡು ಜೆರಾಕ್ಸ್‌ ಮಾಡಿಸಿ ಕೊಟ್ಟು ಪರೀಕ್ಷೆ ಬರೆಸಿದ್ದಾರೆ.

ಗಮನಿಸಿಯೇ ಇಲ್ಲ : ಪುನಾವರ್ತಿತ ವಿದ್ಯಾರ್ಥಿಗಳು ಕೂಡ 2013-14 ರ ನೂತನ ಪಠ್ಯಕ್ರಮ ಆಧರಿಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ವಿವಿ 2012-13 ರ ಹಳೇ ಸಿಲಬಸ್‌ನ ಪ್ರಶ್ನೆ ಪತ್ರಿಕೆ ನೀಡಿದೆ. ಮಧ್ಯಾಹ್ನ 2 ಗಂಟೆಗೆ ಶುರುವಾದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ನೋಡಿದ ವಿದ್ಯಾರ್ಥಿಗಳು ಕಂಗಾಲಾಗಿದ್ಧಾರೆ. ಗೊಂದಲಕ್ಕೆ ಬಿದ್ದು ಮೇಲ್ವಿಚಾರಕರ ಗಮನಕ್ಕೆ ತಂದಾಗ ಅದಲು ಬದಲು ಆಗಿರುವುದು ಬಯಲಾಗಿದೆ.

ಕೊನೆಗೆ ವಿವಿಯಿಂದ ಹೊಸ ಸಿಲಬಸ್‌ನ ಪ್ರಶ್ನೆ ಪತ್ರಿಕೆ ಇ ಮೇಲ್‌ ಮೂಲಕ ಬಂದಿವೆ. ಅಲ್ಲಿವರೆಗೂ ವಿದಾರ್ಥಿಗಳು ಪರೀಕ್ಷೆ ಕೊಠಡಿಯಲ್ಲಿಯೇ ಕೂತಿದ್ದು ನಂತರ ಪರೀಕ್ಷೆ ಬರೆದಿದ್ದಾರೆ. ಇದರ ಜತೆ ಹಳೇ ಸಿಲಬಸ್‌ನ ಪ್ರಶ್ನೆಪತ್ರಿಕೆಯಲ್ಲಿ ಕೂಡ ದೋಷಗಳಿವೆ ಎಂದು ಹೆಸರು ಬಹಿರಂಗ ಪಡಿಸದ ಪ್ರಾಚಾರ್ಯರೊಬ್ಬರು ವಿಜಯ ಕರ್ನಾಟಕ್ಕೆ ತಿಳಿಸಿದರು.

ಕೈ ಬರಹದ ಪತ್ರಿಕೆ : ಇ ಮೇಲ್‌ನಲ್ಲಿ ಬಂದ ಪತ್ರಿಕೆ ಕೂಡ ಕೈ ಬರಹದ್ದಾಗಿದೆ, ಪರೀಕ್ಷಾಂಗ ವಿವಿ ಹೊಸ ಸಿಲಬಸ್‌ನ ಪಶ್ನೆಪತ್ರಿಕೆಯನ್ನೇ ಸಿದ್ಧಪಡಿಸಿಲ್ಲದಿರುವುದು ಗೊತ್ತಾಗಿದೆ. ಕೈ ಬರಹದ ಪ್ರಶ್ನೆಪತ್ರಿಕೆಯನ್ನೇ ಜೆರಾಕ್ಸ್‌ ಮಾಡಿಸಿ ಕೊಟ್ಟು ಪರೀಕ್ಷೆ ಬರೆಸಲಾಗಿದೆ. ದಾವಣಗೆರೆ ಸರಕಾರಿ ಪದವಿ ಕಾಲೇಜಿನಲ್ಲಿ 10 ಮಂದಿ ರಿಪೀಟರ್ಸ್‌ವಿದ್ಯಾರ್ಥಿಗಳು ಈ ಗೊಂದಲದ ನಡುವೆ ಪರೀಕ್ಷೆ ಬರೆದಿದ್ದಾರೆ.


--
--

ಪ್ರಶ್ನೆಪತ್ರಿಕೆ ಬದಲಾಗಿ ಪರೀಕ್ಷೆ ಕೊಂಚ ತಡವಾಗಿದೆ, ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಲ್ಲ, ಪ್ರಶ್ನೆ ಪತ್ರಿಕೆ ಹೇಗೆ ಬದಲಾದವು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ, ಕಾಲೇಜುಗಳಿಂದಲೂ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ.

-ಪ್ರೊ.ಟಿ.ವಿ.ವೆಂಕಟೇಶ್‌, ಪರೀಕ್ಷಾಂಗ ಕುಲಸಚಿವ.

--

ಚಿತ್ರದುರ್ಗ: ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲೂ ಇಂಥ ಯಡವಟ್ಟು ನಡೆದಿದೆ. ಅಂತಿಮ ಬಿಎ, ಬಿಕಾಂ, ಬಿಬಿಎಂ ಕೋರ್ಸ್‌ಗಳ ಆರನೆ ಸೆಮಿಸ್ಟರ್‌ನ ಐಚ್ಛಿಕ ಇಂಗ್ಲಿಷ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯೇ ಅದಲು ಬದಲಾದ

ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಪರೀಕ್ಷಾ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಕೂಡಲೇ ವಿವಿ ರಿಜಿಸ್ಟ್ರಾರ್‌ಗೆ ಫೋನ್‌ ಮಾಡಿ ಸುದ್ದಿ ತಿಳಿಸಿದ್ದು ತಕ್ಷ ಣ ಎಚ್ಚೆತ್ತುಕೊಂಡ ವಿವಿ ಪರೀಕ್ಷಾಂಗ ವಿಭಾಗ ಕಾಲೇಜುಗಳಿಗೆ ಇ-ಮೇಲ್‌ ಮೂಲಕ ಅಸಲಿ ಪ್ರಶ್ನೆಪತ್ರಿಕೆ ಕಳುಹಿಸಿದೆ.

ಇದರಿಂದ ಜಿಲ್ಲೆಯಲ್ಲಿ ಮುಕ್ಕಾಲು ತಾಸು ತಡವಾಗಿ ಪರೀಕ್ಷೆ ನಡೆಯಿತು. ಕೊನೆಗೆ ಬರೆಯಲು ಮುಕ್ಕಾಲು ತಾಸು ಹೆಚ್ಚುವರಿ ಸಮಯ ಮಾಡಿಕೊಡಲಾಗಿತ್ತು.

ಬೆಳಗಿನ ಹೊತ್ತು ಫ್ರೆಶರ್ಸ್‌ಗಳಿಗೆ, ಮಧ್ಯಾಹ್ನ ರಿಪೀಟರ್ಸ್‌ಗೆ ಪರೀಕ್ಷೆ ನಡೆಯುತ್ತಿದೆ. ರಿಪೀಟರ್ಸ್‌ ಸಂಖ್ಯೆ ಕಡಿಮೆ ಇದ್ದ ಕಾರಣ ಜೆರಾಕ್ಸ್‌ ಮಾಡಿಕೊಡಲು ತೊಂದರೆ ಆಗಿಲ್ಲ ಎಂದು ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಸುಧಾಕರ ತಿಳಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ