ಆ್ಯಪ್ನಗರ

ಲಸಿಕೆಗೆ ಮಗು ಸಾವು: ವೈದ್ಯೆ ವಿರುದ್ದ ಪೋಷಕರ ದೂರು

ನಾಲ್ಕೂವರೆ ತಿಂಗಳ ಮಗು ಸಾವಿಗೆ ನಗರ ಆರೋಗ್ಯ ಕೇಂದ್ರದ ವೈದ್ಯೆ ಮತ್ತು ನರ್ಸ್‌ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಪೋಷಕರು ದೂರು ದಾಖಲಿಸಿದ್ದಾರೆ.

ವಿಕ ಸುದ್ದಿಲೋಕ 23 Nov 2016, 9:41 pm
ಚಿತ್ರದುರ್ಗ : ನಾಲ್ಕೂವರೆ ತಿಂಗಳ ಮಗು ಸಾವಿಗೆ ನಗರ ಆರೋಗ್ಯ ಕೇಂದ್ರದ ವೈದ್ಯೆ ಮತ್ತು ನರ್ಸ್‌ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಪೋಷಕರು ದೂರು ದಾಖಲಿಸಿದ್ದಾರೆ.
Vijaya Karnataka Web
ಲಸಿಕೆಗೆ ಮಗು ಸಾವು: ವೈದ್ಯೆ ವಿರುದ್ದ ಪೋಷಕರ ದೂರು


ನಗರದ ಅಲಿಮೊಹಲ್ಲಾ ಬಡಾವಣೆಯ ಅಮೃತಲಕ್ಷ್ಮೀ ಮತ್ತು ಅಂಜನಕುಮಾರ್‌ ದಂಪತಿಯ ಹೆಣ್ಣು ಮಗು ಅನಿ ಮೃತಪಟ್ಟಿರುವುದು.

ಡಿಆರ್‌ಎಂ ಆಸ್ಪತ್ರೆ ಕಟ್ಟಡದಲ್ಲಿನ ನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ ಪೆಂಟಾ ಇಂಜಕ್ಷ ನ್‌, ಪೊಲಿಯೋ ಲಸಿಕೆ ಹಾಕಿಸಲು ಹೋಗಲಾಗಿತ್ತು. ಮಂಗಳವಾರ ಬೆಳಗಿನ ಜಾವ ಸುಮಾರು 2.30ಗೆ ಅಸುನೀಗಿದೆ.

ತಂದೆ ಅನಿಲ್‌ಕುಮಾರ್‌ ನಗರ ಕೋಟೆ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ದಾಖಲಿಸಿದ್ದಾರೆ. ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಟಿಎಚ್‌ಒ ಡಾ.ಪಾಲಾಕ್ಷ ಪರಿಶೀಲನೆ ನಡೆಸಿದ್ದಾರೆ.

ಅಂದು 74 ಮಕ್ಕಳಿಗೆ ಬೇರೆ ಬೇರೆ ಲಸಿಕೆ ಹಾಕಲಾಗಿದ್ದು ಇದರಲ್ಲಿ 42 ಮಕ್ಕಳಿಗೆ ಪೆಂಟಾ ಇಂಜಕ್ಷ ನ್‌ ನೀಡಲಾಗಿದೆ. ಯಾವ ಮಕ್ಕಳಿಗೂ ಏನೂ ತೊಂದರೆ ಆಗಿಲ್ಲ, ಆದರೆ ಈ ಮಗುವಿನ ಪೋಷಕರು ಲಸಿಕೆಯಿಂದಲೇ ಸಾವನ್ನಪ್ಪಿದೆ ಎಂದು ಹೇಳುತ್ತಾರೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ವಾಸ್ತವಾಂಶ ತಿಳಿಯಲಿದೆ. ಮಗು ಏಳನೆ ತಿಂಗಳಲ್ಲಿ ಅಂದರೆ ಅವಧಿಗೆ ಮುಂಚೆ ಹುಟ್ಟಿದೆ. ಹುಟ್ಟಿದ ವೇಳೆ 1.6 ಕೆ.ಜಿ. ತೂಕ ಇತ್ತು. ಮಗುವಿಗೆ ಪ್ರತಿ ತಿಂಗಳು ಇಂಜಕ್ಷ ನ್‌, ಲಸಿಕೆ ಹಾಕಿಸಬೇಕಿತ್ತು. ಆದರೆ, ನಾಲ್ಕೂವರೆ ತಿಂಗಳಿಗೆ ಎರಡನೆ ಲಸಿಕೆ ಹಾಕಿಸಿದ್ದಾರೆ ಎಂದು ಟಿಎಚ್‌ಒ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ