ಆ್ಯಪ್ನಗರ

ದತ್ತ ಮಾಲಾ: ಸಂಕಿರ್ತನ ಯಾತ್ರೆ

ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ದತ್ತ ಮಾಲಾ ಅಭಿಯಾನದ ಪ್ರಯುಕ್ತ ಸೋಮವಾರ ನಗರದಲ್ಲಿ ಸಂಕಿರ್ತನ ಯಾತ್ರೆ ನಡೆಯಿತು.

ವಿಕ ಸುದ್ದಿಲೋಕ 13 Dec 2016, 8:41 am
ಚಿತ್ರದುರ್ಗ : ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ದತ್ತ ಮಾಲಾ ಅಭಿಯಾನದ ಪ್ರಯುಕ್ತ ಸೋಮವಾರ ನಗರದಲ್ಲಿ ಸಂಕಿರ್ತನ ಯಾತ್ರೆ ನಡೆಯಿತು.
Vijaya Karnataka Web
ದತ್ತ ಮಾಲಾ: ಸಂಕಿರ್ತನ ಯಾತ್ರೆ


ನಗರದ ಜೆಸಿಆರ್‌ ಬಡಾವಣೆಯ ಶ್ರೀಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಗಣಪತಿ ದೇವಸ್ಥಾನದ ಬಳಿ ಬಂದು ಮುಕ್ತಾಯವಾಯಿತು. ನೂರಾರು ಸಂಖ್ಯೆಯ ದತ್ತ ಮಾಲಾಧಾರಿಗಳು ಸಂಕಿರ್ತನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಇದಕ್ಕೂ ಮೊದಲು ಮೆರವಣಿಗೆಗೆ ಚಾಲನೆ ನೀಡಿದ ವಿಶ್ವ ಹಿಂದೂ ಪರಿಷತ್‌ ರಾಜ್ಯ ಕಾರ್ಯಕಾರಿಣಿ ಸದಸ್ಯ ಜ.ರಾ.ರಾಮಮೂರ್ತಿ ಮಾತನಾಡಿ, ಹಿಂದೂ ದತ್ತ ಪೀಠವು ಕಾರಣಾಂತರಗಳಿಂದ ಅನ್ಯ ಮತೀಯರ ಪಾಲಾಗಿದೆ. ದತ್ತಪೀಠದಿಂದ ಬಾಬಾ ಬುಡನ್‌ಗಿರಿ ಏಳೆಂಟು ಕಿ.ಮೀ. ದೂರವಿದೆ. ಹಾಗಾಗಿ ದತ್ತ ಗುರುಪೀಠ ಹಾಗೂ ಬಾಬಾ ಬುಡನ್‌ಗಿರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ದತ್ತ ಮಾಲಾಧಾರಿಗಳು ವರ್ಷಕ್ಕೊಮ್ಮೆ ಅಲ್ಲಿಗೆ ತೆರಳಿ ದತ್ತಪೀಠದಲ್ಲಿ ಹೋಮ ಹವನ ನಡೆಸುತ್ತಾರೆ. ಅಲ್ಲಿನ ದೇವರಿಗೆ ಅರ್ಚನೆ ಮಾಡಿಸುತ್ತಾರೆ. ಅಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳನ್ನು ಈಗ ಮುಸ್ಲಿಂ ಸಮುದಾಯದವರು ನೆರವೇರಿಸುತ್ತಿದ್ದಾರೆ. ಹಿಂದೂಗಳ ಆಸ್ತಿಯಾದ ದತ್ತಪೀಠದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲು ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ಇದಕ್ಕಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾವುದೇ ಧಾರ್ಮಿಕ ಕ್ಷೇತ್ರಗಳು ಮುಜರಾಯಿಗೆ ಸೇರಿಲ್ಲ. ದತ್ತಪೀಠ ಸರಕಾರದ ಮುಜರಾಯಿಗೆ ಸೇರಿದೆ. ಹಾಗಾಗಿ ಅದು ಹಿಂದೂ ಸಮಾಜದ ಆಸ್ತಿ. ಈ ಕುರಿತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ ಪರಿಣಾಮ ಹಿಂದೂಗಳಿಗೆ ವರ್ಷಕ್ಕೊಮ್ಮೆ ದತ್ತಪೀಠಕ್ಕೆ ಹೋಗಲು ಅವಕಾಶ ಕಲ್ಪಿಸಲಾಯಿತು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ