ಆ್ಯಪ್ನಗರ

ಮೂರ್ಖರಿಗೆ ಉಪದೇಶ ಮಾಡಿದರೆ ಉಪಯೋಗವಿಲ್ಲ

ಭಗವಂತನ ಅನುಗ್ರಹ ಪಡೆಯಬೇಕಾದರೆ ಯಾವು ಫಲಾಪೇಕ್ಷೆ ಇಲ್ಲದೇ ಸಾವಧಾನ ಚಿತ್ತದಿಂದ ಪೂಜೆ ಮಾಡಬೇಕು ಎಂದು ಮಧ್ವಾಚಾರ್ಯ ಮೂಲ ಸಂಸ್ಥಾನ ತಂಬಿಹಳ್ಳಿಯ ಮಾಧವತೀರ್ಥ ಮಠದ ಪೀಠಾಧಿಪತಿ ವಿದ್ಯಾಸಿಂಧು ಮಾಧವ ತೀರ್ಥ ಪಾದಂಗಳವರು ಹೇಳಿದರು.

ವಿಕ ಸುದ್ದಿಲೋಕ 19 Jan 2017, 8:05 am
ಚಿತ್ರದುರ್ಗ : ಭಗವಂತನ ಅನುಗ್ರಹ ಪಡೆಯಬೇಕಾದರೆ ಯಾವು ಫಲಾಪೇಕ್ಷೆ ಇಲ್ಲದೇ ಸಾವಧಾನ ಚಿತ್ತದಿಂದ ಪೂಜೆ ಮಾಡಬೇಕು ಎಂದು ಮಧ್ವಾಚಾರ್ಯ ಮೂಲ ಸಂಸ್ಥಾನ ತಂಬಿಹಳ್ಳಿಯ ಮಾಧವತೀರ್ಥ ಮಠದ ಪೀಠಾಧಿಪತಿ ವಿದ್ಯಾಸಿಂಧು ಮಾಧವ ತೀರ್ಥ ಪಾದಂಗಳವರು ಹೇಳಿದರು.
Vijaya Karnataka Web
ಮೂರ್ಖರಿಗೆ ಉಪದೇಶ ಮಾಡಿದರೆ ಉಪಯೋಗವಿಲ್ಲ


ನಗರದ ವಾಸವಿ ಆವರಣದಲ್ಲಿ ಶ್ರೀಹರಿವಾಯು ಸೇವಾಸಂಘದಿಂದ ಆಯೋಜಿಸಿರುವ ಹರಿವಾಯು ಸ್ತುತಿ ಪಾರಾಯಣದ 16ನೇ ವಾರ್ಷಿಕೋತ್ಸವ ಹರಿದಾಸ ಹಬ್ಬದಲ್ಲಿ ಮಂಗಳವಾರ ಶ್ರೀಮದ್‌ ಭಾಗವತ ಸಂದೇಶ ಕುರಿತು ಪ್ರವಚನ ನೀಡಿದರು.

'ನಾವು ಪೂಜೆ ಮಾಡಿದ್ದೇವೆ. ನೀನು ಫಲ ಕೊಡು ಎಂದು ಕೇಳಿದರೆ ವ್ಯಾಪಾರಿಗಳಿಗೂ ನಮಗೂ ಏನು ವ್ಯತ್ಯಾಸ? ಅಂಗಡಿಗೆ ಹೋಗಿ ರೊಕ್ಕ ಕೊಟ್ಟು ಇಂತಹ ಸಾಮಾನು ಕೊಡು ಅಂದರೆ ಕೊಡುತ್ತಾರೆ. ನಾವು ಸಂಧ್ಯಾವಂದನೆ ಮಾಡಿದ್ದೇವೆ, ಫಲ ಕೊಡು ಅಂತ ಕೇಳಿದರೆ ವ್ಯಾಪಾರ ಆಯಿತೇ ವಿನಃ ಪರಮಾತ್ಮಕ ಪ್ರೀತಿಗಾಗಿ ಮಾಡಿದ ಕಾರ್ಯ ಆಗುವುದಿಲ್ಲ' ಎಂದರು.

'ಮೂರ್ಖರಿಗೆ ಉಪದೇಶ ಮಾಡಿದರೆ ಉಪಯೋಗ ಆಗುವುದಿಲ್ಲ ಎನ್ನುವುದಕ್ಕೆ ರಾವಣ ಮತ್ತು ದುರ್ಯೋಧನನೇ ಉದಾಹರಣೆ. ಆತನ ಹಿತವನ್ನು ಬಯಸಿ ಸಲಹೆ ನೀಡಿದವರನ್ನೂ ನಿಕೃಷ್ಣವಾಗಿ ಅವಮಾನಿಸಿದವ ದುರ್ಯೋಧನ. ತುಂಬಿದ ಸಭೆಯಲ್ಲಿ ಶ್ರೀಕೃಷ್ಣನನ್ನೂ ಅವಮಾನಿಸಿದ. ಪ್ರತಿ ಹಂತದಲ್ಲೂ ಕೇಡನ್ನೇ ಚಿಂತಿಸುತ್ತಿದ್ದ. ಪಾಂಡವರ ರಾಜ್ಯ ವಾಪಸು ಕೊಡಬೇಕೆನ್ನುವ ಹಿರಿಯರ ಸಲಹೆ ಧಿಕ್ಕರಿಸಿ ದುರಂತದ ಅವನತಿ ಕಂಡ' ಎಂದು ವಿವರಿಸಿದರು.

'ದುರ್ಯೋಧನ ತನ್ನ ಸಾವಿನ ಕೊನೆಯ ಕ್ಷಣಗಳಲ್ಲೂ ಪಾಂಡವರ ವಂಶ ನಿರ್ವಂಶವಾಗಬೇಕೆಂದು ಬಯಸಿ, ಆ ಕೆಲಸವನ್ನು ಅಶ್ವತ್ಥಾಮರಿಂದ ಉಪ ಪಾಂಡವರನ್ನು ಕೊಂದು ಆ ಕೆಲಸ ಮಾಡಿಸಿದ. ಭೂಲೋಕದಲ್ಲಿ ಅವರ ಹೆಸರೇ ಇಲ್ಲದಂತೆ ಮಾಡಬೇಕೆಂಬುದು ಅವನ ಬಯಕೆ ಆಗಿತ್ತು.

ಭೀಮಸೇನ ಮೋಸದ ವಿಧಾನದಲ್ಲಿ ದುರ್ಯೋಧನನ್ನು ಕೊಲ್ಲಲಿಲ್ಲ. ದುರ್ಯೋಧನ ಯುದ್ದ ನಿಯಮಾವಳಿ ಮೀರಿ ಮೋಸದ ಯುದ್ಧ ಮಾಡಿದ್ದರಿಂದಲೇ ಭೀಮಸೇನ ದುರ್ಯೋಧನನ ತೊಡೆಗೆ ಹೊಡೆದು ಕೊಲ್ಲುವ ಪರಿಸ್ಥಿತಿ ಬಂತು. ಕೆಟ್ಟ ಕೆಲಸ ಮಾಡಬೇಕು ಎನ್ನುವ ಆಲೋಚನೆ ನಮ್ಮ ಮನಸ್ಸಿನಲ್ಲಿ ಬಂದರೂ ನಮ್ಮ ಜೀವನ ಅವ್ಯವಸ್ಥೆಗೆ ಈಡಾಗುತ್ತದೆ' ಎಂದು ವಿಶ್ಲೇಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ