ಚಿತ್ರದುರ್ಗ : ಮಹಿಳೆಯೊಬ್ಬಳ ಸಾವಿಗೆ ಕಾರಣನಾದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಶುಕ್ರವಾರ ತೀರ್ಪು ನೀಡಿದ್ದಾರೆ.
ಮೊಳಕಾಲ್ಮುರು ತಾಲೂಕಿನ ರಾಯಾಪುರ ಗ್ರಾಮದ ಮಹಾದೇವಿ ಎಂಬಾಕೆಯನ್ನು ಕಳೆದ 11 ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಯರ್ರೋಬ್ಬಯ್ಯನಹಟ್ಟಿ ಗ್ರಾಮದ ಓಬಯ್ಯಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ 16 ದಿನಗಳಲ್ಲಿ ಗಂಡನನ್ನು ಬಿಟ್ಟು ತವರಿಗೆ ವಾಪಸ್ ಬಂದಳು. ಕಳೆದ ಆರು ವರ್ಷದಿಂದ ರಾಯಾಪುರದ ಸಿ.ಎಂ.ಬಸವರಾಜ ಎಂಬಾತನ ಜತೆ ಬೇರೆಯೇ ಮನೆ ಮಾಡಿಕೊಂಡು ಒಟ್ಟಿಗೆ ಜೀವನ ಸಾಗಿಸುತ್ತಿದ್ದಳು.
ಇತ್ತೀಚೆಗೆ ಬಸವರಾಜ ಮಹಾದೇವಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದ. 2015ರ ಜ.11ರ ಸಂಜೆ ಹಣ ಹಾಗೂ ಒಡವೆಗೆ ಒತ್ತಾಯಿಸಿದ. ಆದರೆ ಹಣ ಕೊಡಲು ನಿರಾಕರಿಸಿದ ಮಹಾದೇವಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಆಕೆ ಚಿಕಿತ್ಸೆ ಫಲಿಸದೆ 2015 ಜ.21ರಂದು ಸಾವಿಗೀಡಾದರು.
ಮೊಳಕಾಲ್ಮುರು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಷೀಟ್ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಎಂ.ಚಂದ್ರಪ್ಪ ವಾದ ಮಂಡಿಸಿದ್ದಾರೆ.
ಮೊಳಕಾಲ್ಮುರು ತಾಲೂಕಿನ ರಾಯಾಪುರ ಗ್ರಾಮದ ಮಹಾದೇವಿ ಎಂಬಾಕೆಯನ್ನು ಕಳೆದ 11 ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಯರ್ರೋಬ್ಬಯ್ಯನಹಟ್ಟಿ ಗ್ರಾಮದ ಓಬಯ್ಯಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ 16 ದಿನಗಳಲ್ಲಿ ಗಂಡನನ್ನು ಬಿಟ್ಟು ತವರಿಗೆ ವಾಪಸ್ ಬಂದಳು. ಕಳೆದ ಆರು ವರ್ಷದಿಂದ ರಾಯಾಪುರದ ಸಿ.ಎಂ.ಬಸವರಾಜ ಎಂಬಾತನ ಜತೆ ಬೇರೆಯೇ ಮನೆ ಮಾಡಿಕೊಂಡು ಒಟ್ಟಿಗೆ ಜೀವನ ಸಾಗಿಸುತ್ತಿದ್ದಳು.
ಇತ್ತೀಚೆಗೆ ಬಸವರಾಜ ಮಹಾದೇವಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದ. 2015ರ ಜ.11ರ ಸಂಜೆ ಹಣ ಹಾಗೂ ಒಡವೆಗೆ ಒತ್ತಾಯಿಸಿದ. ಆದರೆ ಹಣ ಕೊಡಲು ನಿರಾಕರಿಸಿದ ಮಹಾದೇವಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಆಕೆ ಚಿಕಿತ್ಸೆ ಫಲಿಸದೆ 2015 ಜ.21ರಂದು ಸಾವಿಗೀಡಾದರು.
ಮೊಳಕಾಲ್ಮುರು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಷೀಟ್ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಎಂ.ಚಂದ್ರಪ್ಪ ವಾದ ಮಂಡಿಸಿದ್ದಾರೆ.