ಆ್ಯಪ್ನಗರ

​ದೇಸೀ ಉಡುಗೆ ತೊಡುಗೆಯ ಮಿಂಚು

ನಗರದ ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ‘ಸ್ಫೂರ್ತಿ - 2017’ ಸಾಂಸ್ಕೃತಿಕ ಕ್ರೀಡಾ ಉತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸಾಂಪ್ರ ದಾಯಿಕ ದಿನಾಚರಣೆ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ದೇಸೀ ಉಡುಗೆ ತೊಡುಗೆ ಧರಿಸಿ ಸಂಭ್ರಮಿಸಿದರು.

ವಿಕ ಸುದ್ದಿಲೋಕ 26 Apr 2017, 8:56 am
ಚಿತ್ರದುರ್ಗ : ನಗರದ ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ‘ಸ್ಫೂರ್ತಿ - 2017’ ಸಾಂಸ್ಕೃತಿಕ ಕ್ರೀಡಾ ಉತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸಾಂಪ್ರ ದಾಯಿಕ ದಿನಾಚರಣೆ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ದೇಸೀ ಉಡುಗೆ ತೊಡುಗೆ ಧರಿಸಿ ಸಂಭ್ರಮಿಸಿದರು.
Vijaya Karnataka Web
​ದೇಸೀ ಉಡುಗೆ ತೊಡುಗೆಯ ಮಿಂಚು


ಇಡೀ ಕಾಲೇಜಿನ ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣವಿತ್ತು. ವಿದ್ಯಾರ್ಥಿ ಗಳು ಸಾಂಪ್ರದಾಯಿಕ ಉಡುಗೆಗಳಾದ ಪಂಚೆ, ಶಲ್ಯ, ಪೇಟ, ಜುಬ್ಬಾ, ಪೈಜಾಮು ಧರಿಸಿ ಗಮನ ಸೆಳೆದರು. ವಿದ್ಯಾರ್ಥಿನಿ ಯರು ರೇಷ್ಮೆ ಸೀರೆ, ಮೊಗ್ಗಿನ ಜಡೆ ಧರಿಸಿ ಭಾರತೀಯ ಸಂಸ್ಕೃತಿ ಬಿಂಬಿಸುವ ನಾರಿಯರಂತೆ ಕಂಗೊಳಿಸಿದರು. ಅತ್ಯು ತ್ತಮ ಡ್ರೆಸ್ ಧರಿಸಿದ ವಿದ್ಯಾರ್ಥಿಗಳು ಬಹುಮಾನ ಕೂಡ ಗಿಟ್ಟಿಸಿಕೊಂಡರು.

ಪ್ರಾಚಾರ್ಯ ಡಾ.ಜಿ.ಎಸ್.ರಾಜಣ್ಣ ಮಾತನಾಡಿ, ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಯುವಜನ ತೆಯದ್ದಾಗಿದೆ. ಆಧುನಿಕತೆಗೆ ಮಾರು ಹೋಗದೆ ನಮ್ಮ ನಡೆ ನುಡಿ
ಸಂಸ್ಕೃತಿ ಉಳಿಸಬೇಕು ಎಂದು ನುಡಿದರು.

ಎಸ್‌ಜೆಎಂ ಮಹಾ ವಿದ್ಯಾಲಯದ ಅಧ್ಯಾಪಕಿ ಗಾಯತ್ರಿ ಮಾತನಾಡಿ,ಭಾರತ ಹಲವು ಸಂಸ್ಕೃತಿಗಳ ತವರೂರು. ಜಾಗತೀಕರಣ ದ ಪ್ರಭಾವದಿಂದ ಭಾರತೀಯ ಸಂಸ್ಕೃತಿ ಅಳಿವಿನ ಅಂಚಿ ನಲ್ಲಿದೆ. ಸಾಂಸ್ಕೃತಿಕ ವೈಭವವನ್ನು ಮರಳಿ ತರುವ ವಿದ್ಯಾರ್ಥಿಗಳ ಈ ಪ್ರಯತ್ನ ಸ್ವಾಗತಾರ್ಹ ಎಂದರು.

ಉತ್ಸವದ ಪ್ರಯುಕ್ತ ದೇಸೀ ಕ್ರೀಡೆಗ ಳಾದ ಚಿನ್ನಿ ದಾಂಡು, ಹಗ್ಗ ಜಗ್ಗಾಟ, ಲಗೋರಿ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೊ.ಹಾಲಸ್ವಾಮಿ, ಡಾ.ಬಿ.ಜಿ.ಕುಮಾರ ಸ್ವಾಮಿ ಹಾಗೂ ನಾನಾ ವಿಭಾಗದ ಮುಖ್ಯಸ್ಥರಾದ ಪ್ರೊ.ಶ್ರೀಧರ್, ಪ್ರೊ. ಪಿ.ಬಿ.ಭರತ್, ಡಾ.ನಾಗಭೂಷಣ್, ಡಾ. ಎಚ್.ಜೆ ಲೋಕೇಶ್ ಮತ್ತು ಪ್ರೊ.ಟಿ.ಗುರುರಾಜ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ