ಆ್ಯಪ್ನಗರ

ವದ್ದಿಗೆರೆ ಗೋಶಾಲೆಗೆ ಬಿ.ಎಸ್‌.ವೈ.ಭೇಟಿ: ಮೇವಿನ ಕೊರತೆಗೆ ಕಿಡಿ

ಜಿಲ್ಲಾ ಪ್ರವಾಸ ಕಾರ್ಯಕ್ರಮದಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಿರಿಯೂರು ತಾಲೂಕಿನ ವದ್ದಿಗೆರೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿ ನೆಟ್ಟರು. ಬಳಿಕ ಗೋಶಾಲೆಗೆ ತೆರಳಿ ಮೇವಿನ ವ್ಯವಸ್ಥೆ ವೀಕ್ಷಿಸಿದರು.

ವಿಕ ಸುದ್ದಿಲೋಕ 20 May 2017, 8:25 pm
ಚಿತ್ರದುರ್ಗ : ಜಿಲ್ಲಾ ಪ್ರವಾಸ ಕಾರ್ಯಕ್ರಮದಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಿರಿಯೂರು ತಾಲೂಕಿನ ವದ್ದಿಗೆರೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿ ನೆಟ್ಟರು. ಬಳಿಕ ಗೋಶಾಲೆಗೆ ತೆರಳಿ ಮೇವಿನ ವ್ಯವಸ್ಥೆ ವೀಕ್ಷಿಸಿದರು.
Vijaya Karnataka Web
ವದ್ದಿಗೆರೆ ಗೋಶಾಲೆಗೆ ಬಿ.ಎಸ್‌.ವೈ.ಭೇಟಿ: ಮೇವಿನ ಕೊರತೆಗೆ ಕಿಡಿ


'ದಿನಕ್ಕೆ ಏಳೇ ಕೆ.ಜಿ. ಮೇವು ಕೊಡ್ತಾರೆ ಇಷ್ಟು ಸಾಕಾಗಲ್ಲ, ಹಗಲು ಐದು ಕೆ.ಜಿ, ರಾತ್ರಿ ಉಳಿದರೆ ಮಾತ್ರ ಎರಡು ಕೆ.ಜಿ. ಕೊಡ್ತಾರೆ' ಎಂದು ರೈತರು ಅಲವತ್ತುಕೊಂಡರು. 'ಇಷ್ಟು ದೊಡ್ಡ ದನಕ್ಕೆ ಐದೇ ಕೆ.ಜಿ. ಕೊಡೋದಾ' ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು. ರೈತರು, 'ಹೌದು ಮೇಡಂ ಇಷ್ಟೇ ಕೊಡೋದು' ಎಂದರು.

ಜಾನುವಾರುಗಳಿಗೆ ಅಗತ್ಯ ಮೇವು ಏಕೆ ಕೊಡ್ತಿಲ್ಲ ಎಂದು ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರು. ಸರಕಾರದ ಆದೇಶದಂತೆ ಹಗಲು ಐದು ಕೆ.ಜಿ, ರಾತ್ರಿ ಎರಡು ಕೆ.ಜಿ ಕೋಡ್ತೀವಿ ಎಂದು ಕಂದಾಯ ಅಧಿಕಾರಿ ಹೇಳಿದರು. ಗೋಶಾಲೆಯಲ್ಲೇ ಇರುವ ನಮಗೆ ಸರಿಯಾಗಿ ಊಟ ಕೊಡುತ್ತಿಲ್ಲ ಎಂದು ಕೆಲ ರೈತರು ದೂರಿದರು.

ಸರಕಾರ ಕೊಡದಿದ್ರೆ ಏನಂತೆ, ನಮ್ಮ ಪಕ್ಷದವರು ಊಟ ಕೊಡುತ್ತಾರೆ. ನಾಳೆಯಿಂದಲೇ ಊಟದ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲೇ ಇದ್ದ ಬಿಜೆಪಿ ಮುಖಂಡ ಶ್ರೀನಿವಾಸ್‌ಗೆ ಸೂಚಿಸಿದರು.

ನಂತರ ಉದ್ಯೋಗ ಖಾತ್ರಿಯಡಿ ನಿರ್ಮಿಸಲಾದ ಗೋಕಟ್ಟೆ ವೀಕ್ಷಿಸಿದರು. ರೈತರಿಗೆ ಬೀಜದುಂಡೆಗಳನ್ನು ವಿತರಿಸಿದರು. ಕೆಲ ರೈತರು ಪರಿಹಾರ ಸಿಕ್ಕಿಲ್ಲ, ಕೊಡಿಸುವಂತೆ ಮನವಿ ಮಾಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಒಂದು ಜಾನುವಾರಿಗೆ ದಿನಕ್ಕೆ ಕನಿಷ್ಠ ಹದಿನೈದು ಕೆ.ಜಿ. ಮೇವು ವಿತರಿಸಬೇಕು ಎಂದು ಆಗ್ರಹಿಸಿದರು.

ಅಗತ್ಯ ಮೇವು ವಿತರಣೆ ಮಾಡುತ್ತಿಲ್ಲ, ರೈತರಿಗೆ ಊಟದ ವ್ಯವಸ್ಥೆ ಮಾಡುವ ಯೋಗ್ಯತೆ ಸರಕಾರಕ್ಕಿಲ್ಲವೇ ಎಂದು ಹರಿಹಾಯ್ದರು.

ಮುಖ್ಯಮಂತ್ರಿಯಾಗಲಿ, ಕೃಷಿ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇಂಥ ಕಡೆ ಬಂದು ರೈತರ ಸಂಕಷ್ಟ ಅರಿತು ವಾಸ್ತವ ತಿಳಿದುಕೊಳ್ಳದೆ, ಬೆಂಗಳೂರಲ್ಲೇ ಕುಳಿತುಕೊಂಡು, ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ ಮಾತನಾಡುವ ಸರಕಾರದ ನಡವಳಿಕೆಗೆ ಧಿಕ್ಕಾರ ಹೇಳ್ತೇನೆ ಎಂದರು.

ರಾಜ್ಯದ ನಾನಾ ಕಡೆ ಇನ್ನೂ ಬರಗಾಲವಿದೆ. ತುಮಕೂರು, ಚಿತ್ರದುರ್ಗದಲ್ಲಿ ಇನ್ನೂ ಭೀಕರ ಬರ ಪರಿಸ್ಥಿತಿ ಇದೆ. ಹಾಗಾಗಿ ಸರಕಾರ ಇದರ ಗಂಭೀರತೆ ಅರಿತು ಜಾನುವಾರುಗಳಿಗೆ ದಿನಕ್ಕೆ ಕನಿಷ್ಠ 15 ಕೆ.ಜಿ. ಹಸಿ ಮೇವು ವಿತರಿಸಬೇಕು. ರೈತರಿಗೆ ಊಟವೂ ಕೊಡಬೇಕು ಎಂದು ಆಗ್ರಹಿಸಿದರು.

ಗೋವಿಂದ ಕಾರಜೋಳ, ಶೋಭ ಕರಂದ್ಲಾಜೆ, ಬಿಜೆಪಿ ಜಿಲ್ಲಾ ಉಸ್ತುವಾರಿ ಪೂರ್ಣಿಮಾ ಶ್ರೀನಿವಾಸ್‌, ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಸ್‌.ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ್‌, ಮಹಿಳಾ ಜಿಲ್ಲಾಧ್ಯಕ್ಷೆ ಶ್ಯಾಮಲಾ ಶಿವಪ್ರಕಾಶ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ