ಆ್ಯಪ್ನಗರ

ವಂಚಿಸಿದ್ದ ಆರೋಪಿಗೆ ಆರು ವರ್ಷ ಸಜೆ

ಬಂಗಾರ ಖರೀದಿ ಸಮಯದಲ್ಲಿ ಖೋಟಾ ನೋಟು ನೀಡಿ ವಂಚಿಸಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ವರ್ಷ, ಆರು ತಿಂಗಳ ಸಜೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ.

ವಿಕ ಸುದ್ದಿಲೋಕ 24 May 2017, 7:26 pm
ಚಿತ್ರದುರ್ಗ : ಬಂಗಾರ ಖರೀದಿ ಸಮಯದಲ್ಲಿ ಖೋಟಾ ನೋಟು ನೀಡಿ ವಂಚಿಸಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ವರ್ಷ, ಆರು ತಿಂಗಳ ಸಜೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ.
Vijaya Karnataka Web
ವಂಚಿಸಿದ್ದ ಆರೋಪಿಗೆ ಆರು ವರ್ಷ ಸಜೆ


ಮಸ್ತಾನ್‌ ಸಾಬ್‌ ಈ ಖೋಟಾನೋಟು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಆರೋಪಿ. ಈತ ನಕಲಿ ಸ್ಟಾಂಪ್‌ ಹಗರಣದಲ್ಲಿ ಏಳು ವರ್ಷ ಶಿಕ್ಷೆಗೊಳಗಾಗಿದ್ದ. ತುರ್ತು ಪೆರೋಲ್‌ ಮೇಲೆ ಕಾರಾಗೃಹದಿಂದ ಹೊರ ಬಂದು ವಾಪಾಸ್‌ ಹೋಗದೆ ತಲೆಮರೆಸಿಕೊಂಡು ಖೋಟಾನೋಟು ಚಲಾವಣೆ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ.

ಈ ಪ್ರಕರಣದ ದಾಖಲಿಸಿಕೊಂಡಿದ್ದ ಕೋಟೆ ಪೊಲೀಸ್‌ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಆರು ವರ್ಷ, ಆರು ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಬಿ.ಜಯರಾಂ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ