ಚಿತ್ರದುರ್ಗ : ದೇಶದಲ್ಲಿ ಜು.1 ರಿಂದ ಜಾರಿಗೆ ಬಂದಿರುವ ಸುಧಾರಿತ ತೆರಿಗೆ ಪದ್ಧತಿ ಜಿಎಸ್ಟಿ ಜಾರಿಯಿಂದ ಎಲ್ಲಾ ವಸ್ತುಗಳಿಗೆ ಒಂದೇ ತೆರಿಗೆ ಹಾಕಲಾಗುತ್ತಿದ್ದು ಇನ್ನು ಮುಂದೆ ಕೇಂದ್ರ ತೆರಿಗೆ, ರಾಜ್ಯ ತೆರಿಗೆ ಎನ್ನುವ ಪ್ರತ್ಯೇಕ ತೆರಿಗೆಗಳಿರುವುದಿಲ್ಲ. ವ್ಯವಹರಿಸುವ ಗ್ರಾಹಕರು ಬಿಲ್ ಕೇಳಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಎಸ್ಟಿ ಕುರಿತಂತೆ ಸಂಘ ಸಂಸ್ಥೆಯವರಿಗೆ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದರು. ಗ್ರಾಹಕರು ಮತ್ತು ಮಾರಾಟಗಾರರು ಸಹ ಜಿಎಸ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶಾದ್ಯಂತ ಒಂದೇ ಕಾನೂನು ಜಾರಿಯಲ್ಲಿದ್ದು ತೆರಿಗೆಗಳ್ಳರ ಮೇಲೆ ಕಠಿಣ ಕ್ರಮಗಳು ಜರುಗಲಿವೆ ಎಂದರು.
ಜಿಎಸ್ಟಿ ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆಯಾಗಿದ್ದು ಅತ್ಯಂತ ಸರಳವಾಗಿದೆ. ತೆರಿಗೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಸೇವಾ ತೆರಿಗೆ ಇಲಾಖೆ ಜಾಗೃತಿ ಮೂಡಿಸಲಿದೆ. ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿ ಮಾಡಿದಾಗ ಪಡೆಯದಿದ್ದಲ್ಲಿ ನಿಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಬಿಲ್ ಪಡೆದರೆ ತೆರಿಗೆ ಬೀಳುತ್ತದೆ ಎಂದು ಮಾರಾಟಗಾರರು ಗ್ರಾಹಕರಿಗೆ ಗೊಂದಲ ಮೂಡಿಸುವ ಸಂಭವವಿರುತ್ತದೆ. ಇದರಿಂದ ಗ್ರಾಹಕರು ಎಚ್ಚರದಿಂದಿದ್ದು ಬಿಲ್ ಪಡೆಯಲೇಬೇಕು ಎಂದು ತಿಳಿಸಿದರು.
ಕೇಂದ್ರ ಸೇವಾ ತೆರಿಗೆ ಇಲಾಖೆ ಸಹಾಯಕ ಆಯುಕ್ತ ದ್ಯಾಮಣ್ಣ ಮಾತನಾಡಿ, ಜಿಎಸ್ಟಿ ಬಗ್ಗೆ ಗ್ರಾಹಕರಿಗಾಗಲಿ, ಮಾರಾಟಗಾರರಿಗಾಗಲಿ ಯಾವುದೇ ಗೊಂದಲಗಳು ಬೇಡ. ಇದು ಏಕ ತೆರಿಗೆ ಪದ್ದತಿ. ಹಿಂದೆ ಹಲವು ತೆರಿಗೆಗಳು ಒಂದು ವಸ್ತುವಿನ ಮೇಲೆ ವಿಧಿಸಲಾಗುತ್ತಿದ್ದುದರಿಂದ ಯಾವ ಯಾವ ತೆರಿಗೆಗಳು ಎಂಬುದರ ವಿವರ ಗ್ರಾಹಕರಿಗೆ ಅರಿವಿಗೆ ಬರುತ್ತಿರಲಿಲ್ಲ ಎಂದು ಹೇಳಿದದರು.
ಭಾಗಶಃ ಅಥವಾ ಸಂಪೂರ್ಣ ಹವಾ ನಿಯಂತ್ರಿತ ಅಥವಾ ಮದ್ಯ ಮಾರಾಟ ಸರಬರಾಜು ಮಾಡುತ್ತಿರುವ ರೆಸ್ಟೋರೆಂಟ್ಗಳಲ್ಲಿ ಶೇ.18 ರಷ್ಟು ಜಿಎಸ್ಟಿ ಇತ್ತು. ಈ ಹಿಂದೆ ಶೇ 15 ರಷ್ಟು ಸೇವಾ ತೆರಿಗೆ ಮತ್ತು ಶೇ 14.5 ರಷ್ಟು ವ್ಯಾಟ್ ಇತ್ತು. ಮತ್ತು ಯಾವುದೇ ಭಾಗದಲ್ಲಿ ಹವಾನಿಯಂತ್ರಣ ಇಲ್ಲದೇ ಮತ್ತು ಮದ್ಯ ಸೇವಿಸುತ್ತಿಲ್ಲದ ರೆಸ್ಟೋರೆಂಟ್ಗಳಲ್ಲಿ ಶೇ 12 ರಷ್ಟು ಜಿಎಸ್ಟಿ ಇರುತ್ತದೆ. ಹಿಂದೆ ಶೇ 14.5 ರಷ್ಟು ವ್ಯಾಟ್ ಇತ್ತು ಎಂದು ತಿಳಿಸಿದರು.
ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಸಹಾಯಕ ಆಯುಕ್ತ ಸಚ್ಚಿದಾನಂದ ಮಾತನಾಡಿ, ಜಿಎಸ್ಟಿ ಜಾರಿಯಾದಾಗಿನಿಂದ ಇತರೆ ಎಲ್ಲಾ ತೆರಿಗೆಗಳು ರದ್ದಾಗಿವೆ. ಜು.1 ರ ನಂತರ ಹಳೆ ವಸ್ತುಗಳ ಸಂಗ್ರಹವಾಗಿದ್ದಲ್ಲಿ ಹಳೆ ಎಂಆರ್ಪಿ ಜತೆಗೆ ಜಿಎಸ್ಟಿಯಂತೆ ಹೊಸ ಎಂಆರ್ಪಿಯನ್ನು ನಮೂದಿಸಬೇಕು. ಮತ್ತು ಈಗಾಗಲೇ ಉತ್ಪಾದನಾ ಕಂಪನಿಗಳು ಸಹ ಗ್ರಾಹಕರಿಗೆ ಜಾಹೀರಾತು ಮೂಲಕ ವಸ್ತುಗಳ ಎಂಆರ್ಪಿ ಬಗ್ಗೆ ಪ್ರಕಟಣೆ ನೀಡುತ್ತಿವೆ.
ಯಾವುದೇ ಆಹಾರ ಪದಾರ್ಥಗಳು ಜಿಎಸ್ಟಿಯಿಂದ ಹೊರಗಿದ್ದು ಇತರೆ ಅನೇಕ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿರುವುದನ್ನು ಕಾಣಬಹುದಾಗಿದೆ. ಜಿಎಸ್ಟಿಯಿಂದ ಅನೇಕ ತೆರಿಗೆಗಳು ರದ್ದಾಗುವುದರಿಂದ ವಾಹನಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಿ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದರು.
ಕೇಂದ್ರ ಸೇವಾ ತೆರಿಗೆ ಅಧಿಕಾರಿಗಳಾದ ಸಂದೀಪ್ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ತುಳಸಿಕುಮಾರ್, ನಾಗರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಮತ್ತು ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
**
ಯಾವ ಪದಾರ್ಥಕ್ಕೆ ಎಷ್ಟು ಜಿಎಸ್ಟಿ : ಲಸ್ಸಿ, ಬೆಣ್ಣೆ, ಮುದ್ರೆ ಹಾಕದ ಪ್ರಾಕೃತಿಕ ಜೇನುತುಪ್ಪಕ್ಕೆ ಜಿಎಸ್ಟಿ ಇಲ್ಲ, ಮಿಲ್ಕ್ ಪೌಡರ್ಗೆ ಹಿಂದೆ ಶೇ.6 ಈಗ ಶೇ 5, ಮೊಸರು, ಗೋಡಂಬಿಗೆ ಶೇ 5, ಒಣದ್ರಾಕ್ಷಿ, ಮಸಾಲೆಗಳು, ಚಹಾ ಸೋಯಾಬಿನ್, ಎಣ್ಣೆ, ಕಡಲೆಕಾಯಿ ಎಣ್ಣೆ, ಪರಾಮ್ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆಗೆ ಶೇ 5 ರಷ್ಟು ಜಿಎಸ್ಟಿ ಇದೆ.
ಗೋಧಿಗೆ 2.5, ಅಕ್ಕಿಗೆ ಶೇ 2.75 ತೆರಿಗೆ ಇತ್ತು ಈಗ ತೆರಿಗೆ ಇಲ್ಲ. ಮುದ್ರೆಹಾಕದ ಹಿಟ್ಟು ಶೇ 3.50 ಈಗ ತೆರಿಗೆ ಇಲ್ಲ, ಸಾಬೂನು ಶೇ 25 ಇತ್ತು ಈಗ ಶೇ 18, ಹಿಂದೆ 500 ರೂಪಾಯಿಗಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ಶೇ 10 ರಷ್ಟು ತೆರಿಗೆ ಇತ್ತು ಈಗ ಶೇ 5 ಜಿಎಸ್ಟಿ, ಇತರೆ ಪಾದರಕ್ಷೆಗಳು ಹಿಂದೆ ಶೇ 21 ಇದ್ದು ಈಗ ಶೇ 18, ಎಲ್ಪಿಜಿ ಸ್ಟವ್ಗೆ ಶೇ 21 ಇದ್ದದ್ದು ಶೇ 18, ಟ್ರ್ಯಾಕ್ಟರ್ ಹಿಂದಿನ ಟೈರ್ ಮತ್ತು ಟ್ಯೂಬ್ಗಳು ಶೇ 20 ರಿಂದ 18 ಕ್ಕೆ ಇಳಿಕೆಯಾಗಿದೆ. ಇದೇ ರೀತಿ ಬಹುತೇಕ ವಸ್ತುಗಳ ಬೆಲೆಯನ್ನು ಜಿಎಸ್ಟಿಯಿಂದ ಇಳಿಕೆಯಾಗಿದೆ ಎಂದರು.
-------
ದೂರುಗಳಿದ್ದರೆ ತಿಳಿಸಿ : ಜಿಎಸ್ಟಿ ಕುರಿತ ಮಾಹಿತಿ ಮತ್ತು ದೂರುಗಳಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 18001200232 ಮತ್ತು 01204888999 ಗೆ ಕರೆ ಮಾಡಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಎಸ್ಟಿ ಕುರಿತಂತೆ ಸಂಘ ಸಂಸ್ಥೆಯವರಿಗೆ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದರು. ಗ್ರಾಹಕರು ಮತ್ತು ಮಾರಾಟಗಾರರು ಸಹ ಜಿಎಸ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶಾದ್ಯಂತ ಒಂದೇ ಕಾನೂನು ಜಾರಿಯಲ್ಲಿದ್ದು ತೆರಿಗೆಗಳ್ಳರ ಮೇಲೆ ಕಠಿಣ ಕ್ರಮಗಳು ಜರುಗಲಿವೆ ಎಂದರು.
ಜಿಎಸ್ಟಿ ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆಯಾಗಿದ್ದು ಅತ್ಯಂತ ಸರಳವಾಗಿದೆ. ತೆರಿಗೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಸೇವಾ ತೆರಿಗೆ ಇಲಾಖೆ ಜಾಗೃತಿ ಮೂಡಿಸಲಿದೆ. ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿ ಮಾಡಿದಾಗ ಪಡೆಯದಿದ್ದಲ್ಲಿ ನಿಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಬಿಲ್ ಪಡೆದರೆ ತೆರಿಗೆ ಬೀಳುತ್ತದೆ ಎಂದು ಮಾರಾಟಗಾರರು ಗ್ರಾಹಕರಿಗೆ ಗೊಂದಲ ಮೂಡಿಸುವ ಸಂಭವವಿರುತ್ತದೆ. ಇದರಿಂದ ಗ್ರಾಹಕರು ಎಚ್ಚರದಿಂದಿದ್ದು ಬಿಲ್ ಪಡೆಯಲೇಬೇಕು ಎಂದು ತಿಳಿಸಿದರು.
ಕೇಂದ್ರ ಸೇವಾ ತೆರಿಗೆ ಇಲಾಖೆ ಸಹಾಯಕ ಆಯುಕ್ತ ದ್ಯಾಮಣ್ಣ ಮಾತನಾಡಿ, ಜಿಎಸ್ಟಿ ಬಗ್ಗೆ ಗ್ರಾಹಕರಿಗಾಗಲಿ, ಮಾರಾಟಗಾರರಿಗಾಗಲಿ ಯಾವುದೇ ಗೊಂದಲಗಳು ಬೇಡ. ಇದು ಏಕ ತೆರಿಗೆ ಪದ್ದತಿ. ಹಿಂದೆ ಹಲವು ತೆರಿಗೆಗಳು ಒಂದು ವಸ್ತುವಿನ ಮೇಲೆ ವಿಧಿಸಲಾಗುತ್ತಿದ್ದುದರಿಂದ ಯಾವ ಯಾವ ತೆರಿಗೆಗಳು ಎಂಬುದರ ವಿವರ ಗ್ರಾಹಕರಿಗೆ ಅರಿವಿಗೆ ಬರುತ್ತಿರಲಿಲ್ಲ ಎಂದು ಹೇಳಿದದರು.
ಭಾಗಶಃ ಅಥವಾ ಸಂಪೂರ್ಣ ಹವಾ ನಿಯಂತ್ರಿತ ಅಥವಾ ಮದ್ಯ ಮಾರಾಟ ಸರಬರಾಜು ಮಾಡುತ್ತಿರುವ ರೆಸ್ಟೋರೆಂಟ್ಗಳಲ್ಲಿ ಶೇ.18 ರಷ್ಟು ಜಿಎಸ್ಟಿ ಇತ್ತು. ಈ ಹಿಂದೆ ಶೇ 15 ರಷ್ಟು ಸೇವಾ ತೆರಿಗೆ ಮತ್ತು ಶೇ 14.5 ರಷ್ಟು ವ್ಯಾಟ್ ಇತ್ತು. ಮತ್ತು ಯಾವುದೇ ಭಾಗದಲ್ಲಿ ಹವಾನಿಯಂತ್ರಣ ಇಲ್ಲದೇ ಮತ್ತು ಮದ್ಯ ಸೇವಿಸುತ್ತಿಲ್ಲದ ರೆಸ್ಟೋರೆಂಟ್ಗಳಲ್ಲಿ ಶೇ 12 ರಷ್ಟು ಜಿಎಸ್ಟಿ ಇರುತ್ತದೆ. ಹಿಂದೆ ಶೇ 14.5 ರಷ್ಟು ವ್ಯಾಟ್ ಇತ್ತು ಎಂದು ತಿಳಿಸಿದರು.
ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಸಹಾಯಕ ಆಯುಕ್ತ ಸಚ್ಚಿದಾನಂದ ಮಾತನಾಡಿ, ಜಿಎಸ್ಟಿ ಜಾರಿಯಾದಾಗಿನಿಂದ ಇತರೆ ಎಲ್ಲಾ ತೆರಿಗೆಗಳು ರದ್ದಾಗಿವೆ. ಜು.1 ರ ನಂತರ ಹಳೆ ವಸ್ತುಗಳ ಸಂಗ್ರಹವಾಗಿದ್ದಲ್ಲಿ ಹಳೆ ಎಂಆರ್ಪಿ ಜತೆಗೆ ಜಿಎಸ್ಟಿಯಂತೆ ಹೊಸ ಎಂಆರ್ಪಿಯನ್ನು ನಮೂದಿಸಬೇಕು. ಮತ್ತು ಈಗಾಗಲೇ ಉತ್ಪಾದನಾ ಕಂಪನಿಗಳು ಸಹ ಗ್ರಾಹಕರಿಗೆ ಜಾಹೀರಾತು ಮೂಲಕ ವಸ್ತುಗಳ ಎಂಆರ್ಪಿ ಬಗ್ಗೆ ಪ್ರಕಟಣೆ ನೀಡುತ್ತಿವೆ.
ಯಾವುದೇ ಆಹಾರ ಪದಾರ್ಥಗಳು ಜಿಎಸ್ಟಿಯಿಂದ ಹೊರಗಿದ್ದು ಇತರೆ ಅನೇಕ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿರುವುದನ್ನು ಕಾಣಬಹುದಾಗಿದೆ. ಜಿಎಸ್ಟಿಯಿಂದ ಅನೇಕ ತೆರಿಗೆಗಳು ರದ್ದಾಗುವುದರಿಂದ ವಾಹನಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಿ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದರು.
ಕೇಂದ್ರ ಸೇವಾ ತೆರಿಗೆ ಅಧಿಕಾರಿಗಳಾದ ಸಂದೀಪ್ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ತುಳಸಿಕುಮಾರ್, ನಾಗರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಮತ್ತು ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
**
ಯಾವ ಪದಾರ್ಥಕ್ಕೆ ಎಷ್ಟು ಜಿಎಸ್ಟಿ : ಲಸ್ಸಿ, ಬೆಣ್ಣೆ, ಮುದ್ರೆ ಹಾಕದ ಪ್ರಾಕೃತಿಕ ಜೇನುತುಪ್ಪಕ್ಕೆ ಜಿಎಸ್ಟಿ ಇಲ್ಲ, ಮಿಲ್ಕ್ ಪೌಡರ್ಗೆ ಹಿಂದೆ ಶೇ.6 ಈಗ ಶೇ 5, ಮೊಸರು, ಗೋಡಂಬಿಗೆ ಶೇ 5, ಒಣದ್ರಾಕ್ಷಿ, ಮಸಾಲೆಗಳು, ಚಹಾ ಸೋಯಾಬಿನ್, ಎಣ್ಣೆ, ಕಡಲೆಕಾಯಿ ಎಣ್ಣೆ, ಪರಾಮ್ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆಗೆ ಶೇ 5 ರಷ್ಟು ಜಿಎಸ್ಟಿ ಇದೆ.
ಗೋಧಿಗೆ 2.5, ಅಕ್ಕಿಗೆ ಶೇ 2.75 ತೆರಿಗೆ ಇತ್ತು ಈಗ ತೆರಿಗೆ ಇಲ್ಲ. ಮುದ್ರೆಹಾಕದ ಹಿಟ್ಟು ಶೇ 3.50 ಈಗ ತೆರಿಗೆ ಇಲ್ಲ, ಸಾಬೂನು ಶೇ 25 ಇತ್ತು ಈಗ ಶೇ 18, ಹಿಂದೆ 500 ರೂಪಾಯಿಗಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ಶೇ 10 ರಷ್ಟು ತೆರಿಗೆ ಇತ್ತು ಈಗ ಶೇ 5 ಜಿಎಸ್ಟಿ, ಇತರೆ ಪಾದರಕ್ಷೆಗಳು ಹಿಂದೆ ಶೇ 21 ಇದ್ದು ಈಗ ಶೇ 18, ಎಲ್ಪಿಜಿ ಸ್ಟವ್ಗೆ ಶೇ 21 ಇದ್ದದ್ದು ಶೇ 18, ಟ್ರ್ಯಾಕ್ಟರ್ ಹಿಂದಿನ ಟೈರ್ ಮತ್ತು ಟ್ಯೂಬ್ಗಳು ಶೇ 20 ರಿಂದ 18 ಕ್ಕೆ ಇಳಿಕೆಯಾಗಿದೆ. ಇದೇ ರೀತಿ ಬಹುತೇಕ ವಸ್ತುಗಳ ಬೆಲೆಯನ್ನು ಜಿಎಸ್ಟಿಯಿಂದ ಇಳಿಕೆಯಾಗಿದೆ ಎಂದರು.
-------
ದೂರುಗಳಿದ್ದರೆ ತಿಳಿಸಿ : ಜಿಎಸ್ಟಿ ಕುರಿತ ಮಾಹಿತಿ ಮತ್ತು ದೂರುಗಳಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 18001200232 ಮತ್ತು 01204888999 ಗೆ ಕರೆ ಮಾಡಬಹುದಾಗಿದೆ ಎಂದರು.