ಆ್ಯಪ್ನಗರ

ಮಯೂರವರ್ಮನ ಶಿಲಾಶಾಸನ ಅಲಕ್ಷ್ಯ

ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಗಳನ್ನು ನಿರ್ಧರಿಸುವ ತಾಣಗಳಲ್ಲಿ ಚಂದ್ರವಳ್ಳಿಯೂ ಒಂದು. ಆದರೆ ಪುರಾತತ್ವ ಇಲಾಖೆಯ ಅಸಡ್ಡೆಯಿಂದ ಚಂದ್ರವಳ್ಳಿಯ ಮಯೂರವರ್ಮನ ಏಕೈಕ ಶಾಸನ ದಿವ್ಯ ನಿರ್ಲಕ್ಷ ್ಯಕ್ಕೆ ಒಳಗಾಗಿದೆ ಎಂದು ಲಕ್ಕನಹಳ್ಳಿ ಸರಕಾರಿ ಪಿಯು ಕಾಲೇಜು ಉಪನ್ಯಾಸಕ ಮಹೇಶ್‌ ಕುಂಚಿಗನಾಳ್‌ ಆರೋಪಿಸಿದ್ದಾರೆ.

ವಿಕ ಸುದ್ದಿಲೋಕ 13 Aug 2017, 2:18 am
ಚಿತ್ರದುರ್ಗ : ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಗಳನ್ನು ನಿರ್ಧರಿಸುವ ತಾಣಗಳಲ್ಲಿ ಚಂದ್ರವಳ್ಳಿಯೂ ಒಂದು. ಆದರೆ ಪುರಾತತ್ವ ಇಲಾಖೆಯ ಅಸಡ್ಡೆಯಿಂದ ಚಂದ್ರವಳ್ಳಿಯ ಮಯೂರವರ್ಮನ ಏಕೈಕ ಶಾಸನ ದಿವ್ಯ ನಿರ್ಲಕ್ಷ ್ಯಕ್ಕೆ ಒಳಗಾಗಿದೆ ಎಂದು ಲಕ್ಕನಹಳ್ಳಿ ಸರಕಾರಿ ಪಿಯು ಕಾಲೇಜು ಉಪನ್ಯಾಸಕ ಮಹೇಶ್‌ ಕುಂಚಿಗನಾಳ್‌ ಆರೋಪಿಸಿದ್ದಾರೆ.
Vijaya Karnataka Web
ಮಯೂರವರ್ಮನ ಶಿಲಾಶಾಸನ ಅಲಕ್ಷ್ಯ


ಕರ್ನಾಟಕದ ಚರಿತ್ರೆ ಸಂಕಲಿಸುವಲ್ಲಿ ಇಲ್ಲಿ ನಡೆದಿರುವ ಉತ್ಖನಗಳು, ಸಂಶೋಧಕರ ಪುಸ್ತಕಗಳು ಇಲ್ಲಿ ವ್ಯವಸ್ಥಿತ ನಗರ ಅಸ್ತಿತ್ವದಲ್ಲಿ ಇದ್ದುದನ್ನು ದಾಖಲಿಸಿವೆ. ಇಲ್ಲಿ ಸಿಕ್ಕಿರುವ ದಾಖಲೆಗಳು ಹೊಸ ರೂಪ ನೀಡಿವೆ. ಇಂತಹ ಮಹತ್ತರ ಆಕರಗಳಲ್ಲಿ ಮಯೂರವರ್ಮನ ಏಕೈಕ ಶಾಸನ ಕೂಡ ಒಂದು.

ಇತ್ತೀಚಿನ ದಿನಗಳಲ್ಲಿ ಮಳೆ, ಬಿಸಿಲಿಗೆ ಸಿಕ್ಕು ಗ್ರಾನೈಟ್‌ ಬಂಡೆಯಲ್ಲಿರುವ ಈ ಶಾಸನ ಚಕ್ಕಳವೆದ್ದು ಹಾಳಾಗುತ್ತಿದೆ. ಇಂಥ ಅಮೂಲ್ಯ ದಾಖಲೆಗಳನ್ನು ಉಳಿಸಿಕೊಳ್ಳುವಲ್ಲಿ ಪುರಾತತ್ವ ಇಲಾಖೆ ನಿರ್ಲಕ್ಷ ್ಯ ವಹಿಸಿದೆ ಎಂದು ದೂರಿದ್ದಾರೆ.

ಕದಂಬ ವಂಶ ಸ್ಥಾಪಕ ಮಯೂರವರ್ಮನ ಏಕೈಕ ಬಂಡೆಗಲ್ಲು ಶಾಸನ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರ ದೇವಾಲಯದ ಬಂಡೆಯ ಮೇಲಿದೆ. ಈ ಶಾಸನವನ್ನು ಎಂ.ಎಚ್‌.ಕೃಷ್ಣ ಅವರು 1929ರ ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದ್ದಾರೆ.

ಕದಂಬಾಣಂ ಮಯೂರ ಶಮ್ಮಣಾ ವಿಣಿಮ್ಮಿಅಂ

ತಟಾಕಂ ದೂಭ ತ್ರೇಕೂಟ ಅಭೀರ ಪಲ್ಲವ ಪಾರಿ

ಯಾತ್ರಿಕ ಸಕಸ್ಥಾ(ನ) ಸಯ್ದದಕ ಪುಣಾಟ ಮೋಕರಿ(ಣ)

(ಕದಂಬ ಹೆಸರಿನ ಮಯೂರಶರ್ಮನ ಕೆರೆ ಕಟ್ಟಿಸಿ ಅಭೀರ, ಪುನ್ನಾಟ, ಪಲ್ಲವ, ಪಾರಿಯಾತ್ರಿಕ, ಮೌಖರಿ, ತ್ರೇಕೂಟ ರಾಜ್ಯಗಳ ಮೇಲೆ ಜಯಗಳಿಸಿದನು.)

ಈ ಶಾಸನದ ಮೇಲೆ ಸಂಸ್ಕೃತದ ಪ್ರಭಾವವಿರುವುದನ್ನು ಎಂ.ಎಚ್‌.ಕೃಷ್ಣ ಗುರುತಿಸಿದ್ದಾರೆ. ಇದನ್ನು ವಿದ್ವಾಂಸರು ದೃಢಪಡಿಸಿದಲ್ಲಿ ಇದು ಕನ್ನಡದ ಮೊದಲ ಸಂಸ್ಕೃತ ಶಾಸನವಾಗುತ್ತದೆ. ಇದನ್ನು ಪುರಾತತ್ವ ಇಲಾಖೆ ಅಶೋಕನ ಬ್ರಹ್ಮಗಿರಿ ಶಾಸನವನ್ನು ರಕ್ಷಿಸಲು ಬ್ರಿಟಿಷರು ಮಾಡಿದ ತಂತ್ರಜ್ಞಾನ ಬಳಸಿ ಈ ಶಾಸನ ಉಳಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ