ಆ್ಯಪ್ನಗರ

ಹಾಲಿ, ಮಾಜಿ ಶಾಸಕರಿಂದ ಸುಳ್ಳು ಹೇಳಿಕೆ

ತಾಲೂಕಿಗೆ ಭದ್ರಾ ನೀರು ಹರಿಸುವ ವಿಚಾರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಜೆಡಿಎಸ್‌ ಉಪಾಧ್ಯಕ್ಷ ರಾಗಿ ಶಿವಮೂರ್ತಿ ಆರೋಪಿಸಿದರು.

Vijaya Karnataka 3 Jan 2019, 5:00 am
ಹೊಸದುರ್ಗ : ತಾಲೂಕಿಗೆ ಭದ್ರಾ ನೀರು ಹರಿಸುವ ವಿಚಾರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಜೆಡಿಎಸ್‌ ಉಪಾಧ್ಯಕ್ಷ ರಾಗಿ ಶಿವಮೂರ್ತಿ ಆರೋಪಿಸಿದರು.
Vijaya Karnataka Web
ಹಾಲಿ, ಮಾಜಿ ಶಾಸಕರಿಂದ ಸುಳ್ಳು ಹೇಳಿಕೆ


ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಭದ್ರಾ ಅಣೆಕಟ್ಟಿಗೆ ಭೇಟಿ ನೀಡಿದ್ದರು. ಅಲ್ಲದೆ ಮೂರು ತಿಂಗಳ ಹಿಂದೆಯೂ ಈ ಮೂವರು ಹೊಸದುರ್ಗ ತಾಲೂಕಿಗೆ ಡಿಸೆಂಬರ್‌ನಲ್ಲಿ ಭದ್ರಾ ನೀರನ್ನು ಹರಿಸುತ್ತೇವೆ ಎಂದು ಹೇಳಿದ್ದರು. ಆದರೆ, ಡಿಸೆಂಬರ್‌ ಕಳೆದರೂ ತಾಲೂಕಿಗೆ ಭದ್ರಾ ನೀರು ಹರಿಯಲಿಲ್ಲ ಎಂದು ದೂರಿದರು.

ಭದ್ರಾ ಕಾಮಾಗಾರಿ ಯಾವ ಹಂತದಲ್ಲಿದೆ ಎಂದು ಅಧಿಕಾರಿಗಳನ್ನು ಕೇಳಿದರೇ, ಕಾಮಾಗಾರಿ ಪೂರ್ಣವಾಗಿಲ್ಲ. ನೀರು ಎತ್ತುವ ಮೋಟಾರ್‌, ವಿದ್ಯುತ್‌ ಶಕ್ತಿ ಅವಶ್ಯಕತೆ ಇದ್ದು, ಸರಕಾರದಿಂದ ಅನುಮೋಧನೆ ಸಿಕ್ಕಿಲ್ಲ. ಸುರಂಗ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಪಸ್ವಲ್ಪ ಕೆಲಸ ಉಳಿದಿದೆ. ಅದು ಪೂರ್ಣಗೊಂಡರೇ ಸುರಂಗ ಜಾಗದಿಂದ ಹೊಸದುರ್ಗದ ಗಡಿವರೆಗೆ 7 ಕಿ.ಮಿ ನೀರು ಹರಿಯುತ್ತದೆ ಎನ್ನುತ್ತಾರೆ. ಇದನ್ನೆಲ್ಲಾ ನೋಡಿದರೆ ಜನಪ್ರತಿನಿಧಿಗಳು ರೈತರ ಕಣ್ಣೀರು ಒರೆಸುವ ಕೆಲಸ ಮಾಡದೆ ಸುಳ್ಳು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ