ಆ್ಯಪ್ನಗರ

​ ಹುಚ್ಚು ನಾಯಿ ಕಡಿತಕ್ಕೆ 16 ಮಂದಿ ಗಾಯ

ಹಿರಿಯೂರು ತಾಲೂಕಿನ ಯಲ್ಲದಕೆರೆ ಪಂಚಾಯಿತಿ ವ್ಯಾಪ್ತಿಯ ಕೆ.ಕೆ. ಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿವೊಂದು ಶುಕ್ರವಾರ 16ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ.

ವಿಕ ಸುದ್ದಿಲೋಕ 28 Oct 2017, 2:57 am
ಚಿತ್ರದುರ್ಗ : ಹಿರಿಯೂರು ತಾಲೂಕಿನ ಯಲ್ಲದಕೆರೆ ಪಂಚಾಯಿತಿ ವ್ಯಾಪ್ತಿಯ ಕೆ.ಕೆ. ಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿವೊಂದು ಶುಕ್ರವಾರ 16ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ.
Vijaya Karnataka Web  16
​ ಹುಚ್ಚು ನಾಯಿ ಕಡಿತಕ್ಕೆ 16 ಮಂದಿ ಗಾಯ


ಗ್ರಾಮದ ಈಶ್ವರಪ್ಪ, ನಾಗರಾಜ್‌, ಬುಳ್ಳಪ್ಪ, ಗೋವಿಂದರಾಜ್‌, ಪುರುಷೋತ್ತಮ, ಲಕ್ಷ್ಮಣಜ್ಜ, ಮಹಾಲಿಂಗಪ್ಪ, ವಿಶಾಲಮ್ಮ, ಕೃಷ್ಣಪ್ಪ, ಅರ್ಪಿತಾ ಹಾಗೂ ಮತ್ತಿತರರು ಗಾಯಗೊಂಡಿದ್ದು, ಹಿರಿಯೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹುಚ್ಚು ನಾಯಿ ಉಪಟಳ ಹೆಚ್ಚಿದ ಪರಿಣಾಮ ಆಕ್ರೋಶಗೊಂಡ ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ. ಗ್ರಾಮದಲ್ಲಿ ಹುಚ್ಚುನಾಯಿ ಕಡಿತದ ಭೀತಿ ಕಡಿಮೆ ಆಗಿಲ್ಲ. ಯಾವ ನಾಯಿಯನ್ನೂ ಕಂಡರೂ ಹುಚ್ಚುನಾಯಿ ಇರಬಹುದೆಂದು ಭಾವಿಸಿ, ಹೆದರುವಂತ ಸ್ಥಿತಿ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ