ಆ್ಯಪ್ನಗರ

ಅಕ್ರಮ ಗೋ ಸಾಗಣೆ ತಡೆದ ಸಂಸದ ಪ್ರತಾಪ್ ಸಿಂಹ

ಲಾರಿಯೊಂದರಲ್ಲಿ ಅಕ್ರಮವಾಗಿ ಗೋ ಸಾಗಿಸುತ್ತಿದ್ದವರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ತಡೆಗಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಿರಿಯೂರ ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ನಡೆದಿದೆ.

Vijaya Karnataka Web 18 Jan 2018, 3:45 pm
ಚಿತ್ರದುರ್ಗ: ಲಾರಿಯೊಂದರಲ್ಲಿ ಅಕ್ರಮವಾಗಿ ಗೋ ಸಾಗಿಸುತ್ತಿದ್ದವರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ತಡೆಗಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಿರಿಯೂರ ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ನಡೆದಿದೆ.
Vijaya Karnataka Web  mp pratap simha stops illigal transport of animal
ಅಕ್ರಮ ಗೋ ಸಾಗಣೆ ತಡೆದ ಸಂಸದ ಪ್ರತಾಪ್ ಸಿಂಹ


ಪ್ರತಾಪ್ ಸಿಂಹ ಅವರು ಬುಧವಾರ ರಾತ್ರಿ ಕುಷ್ಟಗಿಯಿಂದ ಮೈಸೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಜಾನುವಾರಗಳಿದ್ದ ವಾಹನ ಕಂಡು ವಿಚಾರಿಸಿದ್ದಾರೆ. ಅಕ್ರಮವಾಗಿ ಜಾನುವಾರಗಳನ್ನು ಖಸಾಯಿಖಾನೆಗೆ ಸಾಗಿಸುತ್ತಿದ್ದ ಶಂಕೆ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, 12 ಎತ್ತು, 3 ಎಮ್ಮೆಗಳ ರಕ್ಷಣೆ ಮಾಡಿದ್ದಾರೆ.

ಘಟನಾವಳಿಯನ್ನು ಫೇಸ್‌ಬುಕ್ ಮೂಲಕ ಲೈವ್ ಮಾಡಿರುವ ಪ್ರತಾಪ್ ಸಿಂಹ, ಜಾಸ್ತಿ ಮಾತನಾಡಿದರೆ ಪೆಟ್ಟು ತಿಂತೀಯಾ ಎಂದು ಗೋ ಕಳ್ಳರಿಗೆ ಬೆದರಿಗೆ ಹಾಕಿದ್ದಾರೆ.


ಜಾನುವಾರಗಳನ್ನು ಖಾನಾಹೊಸಹಳ್ಳಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ನಾಗಮಂಗಲದ ಮಂಜುನಾಥ್, ಕೆಂಚಪ್ಪ ಹಾಗೂ ಮಂಜೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ