ಆ್ಯಪ್ನಗರ

ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ 17.5 ಲಕ್ಷ ಸಂಗ್ರಹ

ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಗಳಲ್ಲಿ 3 ಅವಧಿಯಲ್ಲಿ 17.5 ಲಕ್ಷ ರೂ. ಸಂಗ್ರಹವಾಗಿದೆ. ಗುರುವಾರ ಇಲ್ಲಿನ ಹುಂಡಿಗಳ ಎಣಿಕಾ ಕಾರ್ಯ ಜರುಗಿತು. ಒಳಮಠದ ಹುಂಡಿಗಳಲ್ಲಿ 14,02,815 ರೂ. ಹೊರಮಠದ ಹುಂಡಿಗಳಲ್ಲಿ 2,42,280 ರೂ. ಹಾಗೂ ದಾಸೋಹದ ಹುಂಡಿಯಲ್ಲಿ 1,07,041 ರೂ. ಸಂಗ್ರಹವಾಗಿದೆ. ಎರಡು ದೇವಾಲಯಗಳ ಹುಂಡಿಯಲ್ಲಿ ಒಟ್ಟಾರೆ 17,52,236 ರೂ. ಸಂಗ್ರಹವಾಗಿದೆ.

Vijaya Karnataka 15 Mar 2019, 5:00 am
ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಗಳಲ್ಲಿ 3 ಅವಧಿಯಲ್ಲಿ 17.5 ಲಕ್ಷ ರೂ. ಸಂಗ್ರಹವಾಗಿದೆ. ಗುರುವಾರ ಇಲ್ಲಿನ ಹುಂಡಿಗಳ ಎಣಿಕಾ ಕಾರ್ಯ ಜರುಗಿತು. ಒಳಮಠದ ಹುಂಡಿಗಳಲ್ಲಿ 14,02,815 ರೂ. ಹೊರಮಠದ ಹುಂಡಿಗಳಲ್ಲಿ 2,42,280 ರೂ. ಹಾಗೂ ದಾಸೋಹದ ಹುಂಡಿಯಲ್ಲಿ 1,07,041 ರೂ. ಸಂಗ್ರಹವಾಗಿದೆ. ಎರಡು ದೇವಾಲಯಗಳ ಹುಂಡಿಯಲ್ಲಿ ಒಟ್ಟಾರೆ 17,52,236 ರೂ. ಸಂಗ್ರಹವಾಗಿದೆ.
Vijaya Karnataka Web 17 5 lakhs collection in thippareddwamy housing
ತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ 17.5 ಲಕ್ಷ ಸಂಗ್ರಹ


ಕೇಂದ್ರ ಸರಕಾರ ಹಳೆ ಮಾದರಿಯ 500 ರೂ. ನೋಟುಗಳು ಅಮಾನ್ಯಕರಣಗೊಳಿಸಿದೆ. ಹೀಗಿದ್ದರೂ 3 ಸಾವಿರ ಮೌಲ್ಯದ 500 ರೂ. ನೋಟುಗಳು ಹುಂಡಿ ಸೇರಿದ್ದವು. ಹಣದ ಜತೆಗೆ ಹಲವಾರು ಭಕ್ತರು ಬೆಳ್ಳಿ, ಬಂಗಾರದ ಹಲವಾರು ಆಭರಣಗಳನ್ನು ಹುಂಡಿಯಲ್ಲಿ ಹಾಕಿದ್ದರು. ಬೆಳ್ಳಿಯ ಹೂವು, ತೊಟ್ಟಿಲು, ಹಣೆಗಣ್ಣು, ಬೆಳ್ಳಿ ರುದ್ರಾಕ್ಷಿ ಸರ, ಬೆಳ್ಳಿ ಸರ ಸೇರಿದಂತೆ ನಾನಾ ಆಭರಣಗಳು ಹುಂಡಿಯಲ್ಲಿದ್ದವು. ನವೆಂಬರ್‌ 11ರಂದು ಹುಂಡಿಗಳ ಹಣ ಎಣಿಸಲಾಗಿತ್ತು. ಮೂರು ತಿಂಗಳ ಹಿಂದೆ ಹುಂಡಿಯಲ್ಲಿ ಒಟ್ಟು 45,23,301 ರೂ.ಸಂಗ್ರವಾಗಿತ್ತು. ಎರಡೂ ದೇವಾಲಯಗಳಲ್ಲಿ ಅಪಾರ ಪ್ರಮಾಣದ ಚಿಲ್ಲರೆ ನಾಣ್ಯಗಳು ಕಂಡುಬಂದವು. 78,920 ರೂ. ಮೌಲ್ಯದ ಚಿಲ್ಲರೆ ನಾಣ್ಯಗಳು ಹುಂಡಿಯಲ್ಲಿದ್ದವು.

ಎಟಿಎಂಗೆ ಒತ್ತಾಯ:

ದೇವಾಲಯದ ಮುಂಭಾಗದಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ಕಾರ್ಯನಿರ್ವಹಿಸುತ್ತಿತ್ತು. ಆದರೆ ಒಂದು ವರ್ಷದಿಂದ ಇದನ್ನು ಬಂದ್‌ ಮಾಡಲಾಗಿದೆ. ಇದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಹಣದ ಸಮಸ್ಯೆಯಾಗುತ್ತಿದೆ. ಇಲ್ಲಿ ಎಟಿಎಂ ಸ್ಥಾಪಿಸುವುದರಿಂದ ಭಕ್ತರು ಹಾಗೂ ಸ್ಥಳೀಯರಿಗೆ ಉಪಯೋಗವಾಗುತ್ತದೆ. ತಕ್ಷ ಣ ದೇವಾಲಯದ ಆವರಣದಲ್ಲಿ ಎಟಿಎಂ ಪುನರ್‌ ಸ್ಥಾಪಿಸಬೇಕು. ಇದಕ್ಕೆ ಅಗತ್ಯವಾದ ಪ್ರದೇಶವನ್ನು ದೇವಾಲಯದಿಂದ ನೀಡಲಾಗುವುದು. ತಕ್ಷ ಣ ಬ್ಯಾಂಕ್‌ ಎಟಿಎಂ ಸ್ಥಾಪಿಸಿ ಎಂದು ದೇವಾಲಯದ ಇಒ ಎಸ್‌.ಪಿ.ಮಹೇಶ್‌ ಒತ್ತಾಯಿಸಿದರು.

ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ, ಕೆನರಾ ಬ್ಯಾಂಕ್‌ ಸಿಬ್ಬಂದಿ ಇದ್ದರು. ಎಣಿಕಾ ಕಾರ್ಯವನ್ನು ವೀಡಿಯೋ ಚಿತ್ರೀಕರಣಗೊಳಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್‌, ಉಪ ತಹಸೀಲ್ದಾರ್‌ ಜಗದೀಶ್‌, ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಈಶ್ವರಪ್ಪ, ಮುಜುರಾಯಿ ಇಲಾಖೆ ವ್ಯವಸ್ಥಾಪಕ ಮಲ್ಲಪ್ಪ, ಸಮಿತಿ ಸದಸ್ಯರಾದ ಹಂಸವೇಣಿ, ಲಲಿತಮ್ಮ, ಗೋವಿಂದರಾಜ್‌, ಮುನಿಯಪ್ಪ, ನಾಗಪ್ಪ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ