ಆ್ಯಪ್ನಗರ

ವಿದ್ಯುತ್‌ ತಂತಿ ತಗುಲಿ 2 ಎಮ್ಮೆ ಸಾವು

ಬೆಸ್ಕಾಂ ಇಲಾಖೆ ನಿರ್ಲಕ್ಷ ್ಯದಿಂದ ತಾಲೂಕಿನ ಈರಜ್ಜನಹಟ್ಟಿ ಗ್ರಾಮದಲ್ಲಿ ವಿದ್ಯುತ್‌ ಕಂಬದ ತಂತಿ ತಗುಲಿ ಎರಡು ಎಮ್ಮೆಗಳು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

Vijaya Karnataka 25 May 2019, 5:00 am
ಚಿತ್ರದುರ್ಗ : ಬೆಸ್ಕಾಂ ಇಲಾಖೆ ನಿರ್ಲಕ್ಷ ್ಯದಿಂದ ತಾಲೂಕಿನ ಈರಜ್ಜನಹಟ್ಟಿ ಗ್ರಾಮದಲ್ಲಿ ವಿದ್ಯುತ್‌ ಕಂಬದ ತಂತಿ ತಗುಲಿ ಎರಡು ಎಮ್ಮೆಗಳು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web 2 electric buffalo and 2 buffalo deaths
ವಿದ್ಯುತ್‌ ತಂತಿ ತಗುಲಿ 2 ಎಮ್ಮೆ ಸಾವು


ಈರಜ್ಜನಹಟ್ಟಿ ಗ್ರಾಮದ ಸಾವಿತ್ರಮ್ಮ ಎಂಬವರಿಗೆ ಸೇರಿದ ಎಮ್ಮೆಗಳು. ಸಂಪೂರ್ಣ ಶಿಥಿಲಗೊಂಡಿದ್ದ ವಿದ್ಯುತ್‌ ಕಂಬ ತುಂಡಾಗಿ ಕೆಳಗೆ ಬಿದ್ದ ಪರಿಣಾಮ ಮೇಯಲು ತೆರಳಿದ್ದ ಎರಡು ಎಮ್ಮೆಗಳು ಸದರಿ ವಿದ್ಯುತ್‌ ಕಂಬದ ತಂತಿಗೆ ಸ್ಪರ್ಶಿಸಿ ಅಸುನೀಗಿವೆ.

ವಿದ್ಯುತ್‌ ಕಂಬ ಸಂಪೂರ್ಣ ಶಿಥಿಲಗೊಂಡಿದ್ದ ಬಗ್ಗೆ ಆಗಾಗ್ಗೆ ಬೆಸ್ಕಾಂನವರ ಗಮನಕ್ಕೆ ತರಲಾಗಿತ್ತು. ಆದರೆ ಈ ಕುರಿತು ಕಾಳಜಿ ವಹಿಸದ ಕಾರಣ ಈಗ ವಿದ್ಯುತ್‌ ಕಂಬ ತುಂಡಾಗಿ ಬಿದ್ದಿದೆ. ಇದರಿಂದ ನಮ್ಮ ಎರಡು ಎಮ್ಮೆಗಳು ಮೃತಪಟ್ಟಿವೆ. ಎರಡೂ ಎಮ್ಮೆಗಳು ನಿತ್ಯ ಹತ್ತಾರು ಲೀಟರ್‌ ಹಾಲು ಕೊಡುವ, ನಮ್ಮ ಕುಟುಂಬಕ್ಕೂ ಆಸರೆಯಾಗಿದ್ದವು ಎಂದು ಸಾವಿತ್ರಮ್ಮ ಅವರ ಪುತ್ರ ಧನಂಜಯ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ