ಆ್ಯಪ್ನಗರ

74 ಅಯ್ಯಪ್ಪ ಭಕ್ತರ ಇರುಮುಡಿ ಸೇವೆ

ಪಟ್ಟಣದ ಮಾರ್ಕಂಡೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅಯ್ಯಪ್ಪಸ್ವಾಮಿಯ 74 ಮಾಲೆಧಾರಿಗಳಿಗೆ ಗುರುಸ್ವಾಮಿ ವಿಧಿ ವಿಧಾನಗಳ ಮೂಲಕ ಇರುಮುಡಿ ಕಟ್ಟಿ ಶಬರಿ ಮಲೆಗೆ ಬೀಳ್ಕೊಟ್ಟರು.

Vijaya Karnataka 3 Jan 2019, 5:00 am
ಮೊಳಕಾಲ್ಮುರು : ಪಟ್ಟಣದ ಮಾರ್ಕಂಡೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅಯ್ಯಪ್ಪಸ್ವಾಮಿಯ 74 ಮಾಲೆಧಾರಿಗಳಿಗೆ ಗುರುಸ್ವಾಮಿ ವಿಧಿ ವಿಧಾನಗಳ ಮೂಲಕ ಇರುಮುಡಿ ಕಟ್ಟಿ ಶಬರಿ ಮಲೆಗೆ ಬೀಳ್ಕೊಟ್ಟರು.
Vijaya Karnataka Web 74 ayyappa devotees stay in service
74 ಅಯ್ಯಪ್ಪ ಭಕ್ತರ ಇರುಮುಡಿ ಸೇವೆ


ಬುಧವಾರ ಬೆಳಗ್ಗೆ 5 ಗಂಟೆಗೆ ಗುರುಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀವಿಷ್ನೇಶ್ವರ, ಸುಬ್ರಹ್ಮಣ್ಯ, ಅಯ್ಯಪ್ಪ ಸ್ವಾಮಿಗಳಿಗೆ ಅಭಿಷೇಕ ನೆರವೇರಿಸಿದ ಅಯ್ಯಪ್ಪ ಭಕ್ತರು ಮಹಾಶಾಸ್ತ್ರ, ಲಕ್ಷಾರ್ಚನೆ, ಅಖಂಡ ಶರಣಘೋಷ, ಧರ್ಮಶಾಸ್ತ್ರ, ವಿಷ್ಣು ಸಹಸ್ರ ಅಷ್ಟೋತ್ತರ ಶತನಾಮಾವಳಿ ಪೂಜೆ ಕೈಗೊಂಡಿದ್ದರು.

ಬೆಳಗ್ಗೆ ಅಯ್ಯಪ್ಪ ಸ್ವಾಮಿಯ ಭಜನಾ ಕಾರ್ಯಕ್ರಮದೊಂದಿಗೆ ಇರುಮುಡಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಗುರುಸ್ವಾಮಿಯಾದ ಸತ್ಯನಾರಾಯಣ ಸ್ವಾಮಿ ಈ ಕಾರ್ಯವನ್ನು ಧಾರ್ಮಿಕ ಪದ್ಧತಿ ಚಾಚೂ ತಪ್ಪದಂತೆ ನೆರವೇರಿಸಿದರು.

ಅಯ್ಯಪ್ಪಸ್ವಾಮಿಗೆ ಮಾಲೆ ಧರಿಸಿದ ಭಕ್ತರು ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾಮಂಗಳಾರತಿ ನೆರವೇರಿಸಿದರು. ಮಾಲೆಧಾರಿಗಳ ನೂರಾರು ಜನ ಸಂಬಂಧಿಕರು ಮುಗಿಬಿದ್ದು ದೇವಸ್ಥಾನಕ್ಕೆ ಆಗಮಿಸಿ ತಮ್ಮ ಮಾಲೆಧಾರಿಯನ್ನು ಶಬರಿಮಲೆಗೆ ಬೀಳ್ಕೊಟ್ಟರು.

ಶಬರಿ ಮಲೆಗೆ ತೆರಳುವ ಮಾಲೆಧಾರಿಗಳು ಇರುಮುಡಿಯಲ್ಲಿದ್ದ ಅಕ್ಕಿ, ಬೇಳೆ, ತೆಂಗಿನಕಾಯಿ, ತುಪ್ಪ ಸೇರಿದಂತೆ ಇನ್ನಿತರ ಪರಿಕರಗಳನ್ನು ತಲೆಯ ಮೇಲೆ ಹೊತ್ತು ಪಟ್ಟಣದ ಮುಖ್ಯರಸ್ತೆಯ ಮೂಲಕ ತಂಡೋಪ ತಂಡದ ಮೆರವಣಿಗೆ ಮೂಲಕ ಕೆಇಬಿ ವೃತ್ತದಲ್ಲಿನ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಇಲ್ಲಿಂದ ರಾಯಾಪುರ ಫಾರಂನಲ್ಲಿ ಆಯೋಜಿಸಿದ್ದ ಅನ್ನ ದಾಸೋಹದಲ್ಲಿ ಪಾಲ್ಗೊಂಡು ಆನಂತರ ಶಬರಿಮಲೆಯತ್ತ ಪ್ರಯಾಣ ಬೆಳೆಸಿದರು.

ಅಯ್ಯಪ್ಪಸ್ವಾಮಿ ಟ್ರಸ್ಟ್‌ನ ಡಿ.ಎನ್‌.ಸತ್ಯನಾರಾಯಣ, ಎಂ.ಮಾರುತಿ, ಪಿ.ವೆಂಕಟೇಶ್‌, ಎಲ್‌.ಮಲ್ಲಿಕಾರ್ಜುನ್‌, ಪಿಎನ್‌.ಶ್ರೀನಿವಾಸುಲು, ಎಚ್‌.ತಿಮ್ಮಣ್ಣ, ಎಚ್‌.ಬಸವನಾಯಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ