ಚಿತ್ರದುರ್ಗ : ಅಸ್ಪೃಶ್ಯತೆ ಬಗ್ಗೆ ಹೋರಾಡಿ ಜೀವನದಲ್ಲಿ ಕಹಿ ಅನುಭವ ಎದುರಿಸಿದ್ದ ಅಂಬೇಡ್ಕರ್ ಅವರು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಜೀವನ ಪರ್ಯಂತ ಹೋರಾಡಿ, ಜಗತ್ತು ಮೆಚ್ಚುವಂತ ಸಂವಿಧಾನವನ್ನು ಕೊಡುಗೆಯಾಗಿ ದೇಶಕ್ಕೆ ನೀಡಿದರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಹೇಳಿದರು.
ನಗರದ ವಕೀಲರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ 128ನೇ ಜಯಂತಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಲಂಡನ್, ಅಮೇರಿಕಾ, ನ್ಯೂಯಾರ್ಕ್, ಕೊಲಂಬಿಯಾದಲ್ಲಿ ಉನ್ನತ ಶಿಕ್ಷ ಣ ಪಡೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಹಲವಾರು ಪದವಿ ಪಡೆದು 200 ಪಿಎಚ್ಡಿ ಗಳಿಸಿ ಮೌಲಿಕ ಗ್ರಂಥ ಬರೆದಿದ್ದಾರೆ. ಅವರ ವಿದ್ವತ್ತು ಜಾಗತಿಕವಾಗಿ ಗಮನಸೆಳೆದಿದೆ ಎಂದರು.
ದೇಶದಲ್ಲಿನ ಅಸಮಾನತೆಯ ಧೋರಣೆಯಿಂದ ನೊಂದಿದ್ದ ಅಂಬೇಡ್ಕರ್ 'ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ, ಹಿಂದು ಧರ್ಮದಲ್ಲಿಯೇ ಸಾಯಲಾರೆ' ಎಂದು ಬೌದ್ಧ ಧರ್ಮಕ್ಕೆ ಸೇರಿಕೊಂಡರು. ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಚೇತನರಾಗಿದ್ದ ಅಂಬೇಡ್ಕರ್ ವಿಚಾರಧಾರೆಯನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಬಿ.ವಿಶ್ವನಾಥ್ ಮಾತನಾಡಿ, 'ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತ ಮಹಾನ್ ಸಾಧಕರನ್ನು ನೆನಪಿಸಿಕೊಂಡು ಅವರ ಆದರ್ಶ ಪಾಲಿಸಿದಾಗ ನಿಜವಾಗಿಯೂ ಅಂಬೇಡ್ಕರ್ ಜಯಂತಿಗೆ ಅರ್ಥ ಬರುತ್ತದೆ' ಎಂದರು.
ನ್ಯಾಯವಾದಿ ಬಿಸ್ನಳ್ಳಿ ಜಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 'ಏಪ್ರಿಲ್ 14ರಂದು 154 ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ. ಹೋರಾಟಗಾರರು, ದಾರ್ಶನಿಕರು, ಕಾರ್ಮಿಕ ಮುಖಂಡರನ್ನು ದೇಶ ಕೊಡುಗೆಯಾಗಿ ನೀಡಿದೆ. ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಹೋರಾಟ ಮಾಡಿದವರಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು' ಎಂದು ತಿಳಿಸಿದರು.
ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ, ಎರಡನೇ ಹೆಚ್ಚುವರಿ ನ್ಯಾಯಾಧೀಶ ವೀರಣ್ಣ, ಒಂದನೇ ಹೆಚ್ಚುವರಿ ನ್ಯಾಯಾಧೀಶ ಶಿವಣ್ಣ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಭಂಡಾರಿ, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ನಂದ್ಯಾಲ್ ಸಮೀರ್, ವಕೀಲರ ಸಂಘದ ನೂತನ ಅಧ್ಯಕ್ಷ ಎಸ್. ವಿಜಯಕುಮಾರ್, ಉಪಾಧ್ಯಕ್ಷ ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಅನಿಲ್ಕುಮಾರ್, ಖಜಾಂಚಿ ಪ್ರಸನ್ನಕುಮಾರ್, ನ್ಯಾಯವಾದಿಗಳಾದ ರವೀಂದ್ರ, ಶರಣಪ್ಪ, ಕುಮಾರಪ್ಪ, ಚಂದ್ರಪ್ಪ, ಸಮಾಜ ಸೇವಕಿ ಮುನಿರಾ ಎ.ಮಕಾಂದಾರ್, ವಿಜಯಮ್ಮ, ನ್ಯಾಯವಾದಿ ಎನ್.ಚಂದ್ರಣ್ಣ, ವೈ.ತಿಪ್ಪೇಸ್ವಾಮಿ, ನ್ಯಾಯವಾದಿ ಬಿ.ಟಿ.ರಾಜಣ್ಣ ಮತ್ತಿತರರಿದ್ದರು.
ನಗರದ ವಕೀಲರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ 128ನೇ ಜಯಂತಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಲಂಡನ್, ಅಮೇರಿಕಾ, ನ್ಯೂಯಾರ್ಕ್, ಕೊಲಂಬಿಯಾದಲ್ಲಿ ಉನ್ನತ ಶಿಕ್ಷ ಣ ಪಡೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಹಲವಾರು ಪದವಿ ಪಡೆದು 200 ಪಿಎಚ್ಡಿ ಗಳಿಸಿ ಮೌಲಿಕ ಗ್ರಂಥ ಬರೆದಿದ್ದಾರೆ. ಅವರ ವಿದ್ವತ್ತು ಜಾಗತಿಕವಾಗಿ ಗಮನಸೆಳೆದಿದೆ ಎಂದರು.
ದೇಶದಲ್ಲಿನ ಅಸಮಾನತೆಯ ಧೋರಣೆಯಿಂದ ನೊಂದಿದ್ದ ಅಂಬೇಡ್ಕರ್ 'ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ, ಹಿಂದು ಧರ್ಮದಲ್ಲಿಯೇ ಸಾಯಲಾರೆ' ಎಂದು ಬೌದ್ಧ ಧರ್ಮಕ್ಕೆ ಸೇರಿಕೊಂಡರು. ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಚೇತನರಾಗಿದ್ದ ಅಂಬೇಡ್ಕರ್ ವಿಚಾರಧಾರೆಯನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಬಿ.ವಿಶ್ವನಾಥ್ ಮಾತನಾಡಿ, 'ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತ ಮಹಾನ್ ಸಾಧಕರನ್ನು ನೆನಪಿಸಿಕೊಂಡು ಅವರ ಆದರ್ಶ ಪಾಲಿಸಿದಾಗ ನಿಜವಾಗಿಯೂ ಅಂಬೇಡ್ಕರ್ ಜಯಂತಿಗೆ ಅರ್ಥ ಬರುತ್ತದೆ' ಎಂದರು.
ನ್ಯಾಯವಾದಿ ಬಿಸ್ನಳ್ಳಿ ಜಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 'ಏಪ್ರಿಲ್ 14ರಂದು 154 ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ. ಹೋರಾಟಗಾರರು, ದಾರ್ಶನಿಕರು, ಕಾರ್ಮಿಕ ಮುಖಂಡರನ್ನು ದೇಶ ಕೊಡುಗೆಯಾಗಿ ನೀಡಿದೆ. ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಹೋರಾಟ ಮಾಡಿದವರಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು' ಎಂದು ತಿಳಿಸಿದರು.
ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ, ಎರಡನೇ ಹೆಚ್ಚುವರಿ ನ್ಯಾಯಾಧೀಶ ವೀರಣ್ಣ, ಒಂದನೇ ಹೆಚ್ಚುವರಿ ನ್ಯಾಯಾಧೀಶ ಶಿವಣ್ಣ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಭಂಡಾರಿ, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ನಂದ್ಯಾಲ್ ಸಮೀರ್, ವಕೀಲರ ಸಂಘದ ನೂತನ ಅಧ್ಯಕ್ಷ ಎಸ್. ವಿಜಯಕುಮಾರ್, ಉಪಾಧ್ಯಕ್ಷ ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಅನಿಲ್ಕುಮಾರ್, ಖಜಾಂಚಿ ಪ್ರಸನ್ನಕುಮಾರ್, ನ್ಯಾಯವಾದಿಗಳಾದ ರವೀಂದ್ರ, ಶರಣಪ್ಪ, ಕುಮಾರಪ್ಪ, ಚಂದ್ರಪ್ಪ, ಸಮಾಜ ಸೇವಕಿ ಮುನಿರಾ ಎ.ಮಕಾಂದಾರ್, ವಿಜಯಮ್ಮ, ನ್ಯಾಯವಾದಿ ಎನ್.ಚಂದ್ರಣ್ಣ, ವೈ.ತಿಪ್ಪೇಸ್ವಾಮಿ, ನ್ಯಾಯವಾದಿ ಬಿ.ಟಿ.ರಾಜಣ್ಣ ಮತ್ತಿತರರಿದ್ದರು.